ಟಾಲಿವುಡ್‌ನ ಈ ಇಬ್ಬರೂ ಸ್ಟಾರ್‌ಗಳಿಗೆ ಮಾತ್ರ ಬಂತಾ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಆಹ್ವಾನ?

Ram Mandir Inauguration: ಮುಂದಿನ ತಿಂಗಳು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭ ನಡೆಯಲಿದ್ದು.. ಇದಕ್ಕಾಗಿ ಚಿತ್ರರಂಗದ ಸೆಲೆಬ್ರಿಟಿಗಳಿಗೂ ಆಹ್ವಾನ ಬಂದಿದೆ.. ಆದರೆ ಸೌತ್‌ನಲ್ಲಿ ಈ ಇಬ್ಬರಿಗೆ ಮಾತ್ರ ಆಹ್ವಾನ ಬಂದಿದೆ ಎನ್ನಲಾಗಿದೆ.. 

Written by - Savita M B | Last Updated : Dec 26, 2023, 01:32 PM IST
  • ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಅಂತಿಮ ಹಂತ ತಲುಪಿದೆ
  • ಮುಂದಿನ ವರ್ಷ ಜನವರಿ 22 ರಂದು ಈ ದೇವಸ್ಥಾನದಲ್ಲಿ ರಾಮನ ಪ್ರಾಣ ಪ್ರತಿಷ್ಠೆ ಮಾಡಲು ನಿರ್ಧರಿಸಲಾಗಿದೆ
  • ಈ ಉದ್ಘಾಟನಾ ಕಾರ್ಯಕ್ರಮವನ್ನು ಅತ್ಯಂತ ಅದ್ಧೂರಿಯಾಗಿ ಆಯೋಜಿಸಲಾಗುವುದು ಎನ್ನಲಾಗಿದೆ..
ಟಾಲಿವುಡ್‌ನ ಈ ಇಬ್ಬರೂ ಸ್ಟಾರ್‌ಗಳಿಗೆ ಮಾತ್ರ ಬಂತಾ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಆಹ್ವಾನ?  title=

Tollywood: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಅಂತಿಮ ಹಂತ ತಲುಪಿದ್ದು.. ದೇವಾಲಯ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದೆ.. ಮುಂದಿನ ವರ್ಷ ಜನವರಿ 22 ರಂದು ಈ ದೇವಸ್ಥಾನದಲ್ಲಿ ರಾಮನ ಪ್ರಾಣ ಪ್ರತಿಷ್ಠೆ ಮಾಡಲು ನಿರ್ಧರಿಸಲಾಗಿದೆ.. ಅದಕ್ಕಾಗಿ ವ್ಯವಸ್ಥೆ ಮಾಡಲಾಗುತ್ತಿದೆ. ಈ ಉದ್ಘಾಟನಾ ಕಾರ್ಯಕ್ರಮವನ್ನು ಅತ್ಯಂತ ಅದ್ಧೂರಿಯಾಗಿ ಆಯೋಜಿಸಲಾಗುವುದು ಎನ್ನಲಾಗಿದೆ..

ಕೇಂದ್ರದ ಬಿಜೆಪಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು.. ಮೇಲಾಗಿ ತಮ್ಮ ಘೋಷವಾಕ್ಯವೂ ರಾಮ್ ಆಗಿರುವುದರಿಂದ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಉದ್ಘಾಟನಾ ಸಮಾರಂಭಕ್ಕೆ ಹಲವು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ-ರಾಕಿಂಗ್‌ ಸ್ಟಾರ್‌ ಯಶ್‌ಗೂ ಬಂತು ರಾಮಮಂದಿರ ಉದ್ಘಾಟನೆಗೆ ಆಹ್ವಾನ!

ದೇವಾಲಯದ ಆಡಳಿತ ಸಮಿತಿಯು ದೇಶಾದ್ಯಂತ ಸುಮಾರು 2 ಸಾವಿರ ಜನರಿಗೆ ಆಹ್ವಾನ ಕಳುಹಿಸಿದೆ ಎಂದು ವರದಿಯಾಗಿದ್ದು.. ಇದರಲ್ಲಿ ಚಿತ್ರರಂಗದ ಸೆಲೆಬ್ರಿಟಿಗಳೂ ಇದ್ದಾರೆ... ತೆಲುಗಿನಲ್ಲಿ ಇಬ್ಬರಿಗೆ ಮಾತ್ರ ಈ ಆಹ್ವಾನ ಬಂದಿದೆ ಎಂದು ವರದಿಯಾಗಿದ್ದು.. ಮೆಗಾಸ್ಟಾರ್ ಚಿರಂಜೀವಿ ಮತ್ತು ಪ್ರಭಾಸ್ ಅವರಿಗೆ ಮಾತ್ರ ಈ ಆಹ್ವಾನ ಬಂದಿದೆ ಎನ್ನಲಾಗುತ್ತಿದೆ.. 

ಚಿರಂಜೀವಿ ಬಿಜೆಪಿ ನಾಯಕರಿಗೆ ಆಪ್ತರು. ಈಗಾಗಲೇ ಅವರನ್ನು ಭೇಟಿ ಮಾಡಲಾಗಿದ್ದು.. ಅಲ್ಲದೇ ಹಲವು ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ. ಮತ್ತೊಂದೆಡೆ, ಪ್ರಭಾಸ್ ಕುಟುಂಬ ಮೊದಲಿನಿಂದಲೂ ಬಿಜೆಪಿ ಪಕ್ಷದಲ್ಲಿದೆ... ಮೇಲಾಗಿ ಪ್ರಭಾಸ್ `ಆದಿಪುರುಷ' ಸಿನಿಮಾ ಸಹ ಮಾಡಿದ್ದಾರೆ.. 

ಅಲ್ಲದೇ ಬಿಜೆಪಿ ನಾಯಕರು ಎನ್ ಟಿಆರ್, ನಿತಿನ್, ನಿಖಿಲ್ ಗೆ ಆಪ್ತರು ಹೀಗಾಗಿ ಅವರಿಗೂ ಆಹ್ವಾನವಿದೆಯೇ? ಎನ್ನುವ ಅನುಮಾನಗಳು ಮೂಡುತ್ತಿದೆ.. ಇನ್ನು ತಮಿಳಿನಿಂದ ಸೂಪರ್ ಸ್ಟಾರ್ ರಜನಿ ಮತ್ತು ಧನುಷ್ ಅವರನ್ನು ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ. 

ಇದನ್ನೂ ಓದಿ-ರಾಕಿಂಗ್‌ ಸ್ಟಾರ್‌ ಯಶ್‌ಗೂ ಬಂತು ರಾಮಮಂದಿರ ಉದ್ಘಾಟನೆಗೆ ಆಹ್ವಾನ!

ಅಲ್ಲದೇ ಕನ್ನಡದಿಂದ 'ಕೆಜಿಎಫ್' ಸ್ಟಾರ್ ಯಶ್ ಹಾಗೂ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿಗೆ ಆಹ್ವಾನ ನೀಡಲಾಗಿದೆ. ಇನ್ನೊಂದೆಡೆ ಮಲಯಾಳಂನಿಂದ ಮೋಹನ್ ಲಾಲ್ ಗೆ ಮಾತ್ರ ಆಹ್ವಾನ ಬಂದಿರುವುದು ಗೊತ್ತಾಗಿದೆ. 

ಪ್ರಮುಖವಾಗಿ ಬಾಲಿವುಡ್‌ನಿಂದ ಅನೇಕ ಸೆಲೆಬ್ರಿಟಿಗಳಿಗೆ ಈ ಆಹ್ವಾನಗಳು ಬಂದಿವೆ ಎಂದು ತಿಳಿದಿದ್ದು... ಬಿಗ್ ಬಿ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ರಣಬೀರ್ ಕಪೂರ್, ಟೈಗರ್ ಶ್ರಾಫ್ ಮತ್ತು ಅಜಯ್ ದೇವಗನ್ ಅವರನ್ನು ಆಹ್ವಾನಿಸಲಾಗಿದೆ. ಇವರಲ್ಲದೆ ಮಾಧುರಿ ದೀಕ್ಷಿತ್, ಅನುಪಮಾ ಖೇರ್, ರಾಜ್ ಕುಮಾರ್ ಹಿರಾನಿ, ಸಂಜಯ್ ಲೀಲಾ ಬನ್ಸಾಲಿ, ರೋಹಿತ್ ಶೆಟ್ಟಿ ಅವರಿಗೂ ಈ ಆಹ್ವಾನ ಬಂದಿದೆ ಎಂದು ವರದಿಯಾಗಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News