ಈ ರೀತಿ ಕೊಲೆ ಮಾಡ್ತಾರೆ ಅಂತ ಗೊತ್ತಾಗಿದ್ದಿದ್ರೆ ನಾನೇ ಕಂಪ್ಲೆಂಟ್‌ ಕೊಡ್ತಿದ್ದೆ..! ಖಾಕಿ ಮುಂದೆ ಪವಿತ್ರಾ ಅಳಲು

Renukaswamy murder case : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖೆ ಮುಂದುವರೆದಿದೆ.. ಸದ್ಯ ಎಲ್ಲಾ ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳೋ ನಡುವೆ ಇನ್ನೂ ಮೂವರು ಆರೋಪಿಗಳು ಪೊಲೀಸ್ರಿಗೆ ಶರಣಾಗಿದ್ದಾರೆ.. ಇವತ್ತಿನಿಂದ ಅವ್ರ ವಿಚಾರಣೆ ಕೂಡ ನಡೆಯಲಿದೆ..

Written by - VISHWANATH HARIHARA | Edited by - Krishna N K | Last Updated : Jun 14, 2024, 08:12 PM IST
    • ಆರೋಪಿ ದರ್ಶನ್, ಪವಿತ್ರಗೌಡ ಸೇರಿ ಎಲ್ಲರ ಹೇಳಿಕೆ ದಾಖಲಿಸಿದ ಪೊಲೀಸ್ರು..!
    • ಹಾಗಾದ್ರೆ ದರ್ಶನ್ ಗ್ಯಾಂಗ್ ಪೊಲೀಸ್ರ ಮುಂದೆ ಹೇಳಿದ್ದೇನು..?
    • ಕೊಲೆ ಮಾಡ್ತಾರೆ ಅಂದ್ರೆ ನಾನೇ ಕಂಪ್ಲೆಂಟ್ ಕೊಟ್ಟು ಸರಿ ಮಾಡಿಕೊಳ್ತಿದ್ದೆ
ಈ ರೀತಿ ಕೊಲೆ ಮಾಡ್ತಾರೆ ಅಂತ ಗೊತ್ತಾಗಿದ್ದಿದ್ರೆ ನಾನೇ ಕಂಪ್ಲೆಂಟ್‌ ಕೊಡ್ತಿದ್ದೆ..! ಖಾಕಿ ಮುಂದೆ ಪವಿತ್ರಾ ಅಳಲು title=

Darshan case : ಡಿ‌ ಗ್ಯಾಂಗ್ ನಿಂದ‌ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತನಿಖೆ ಮುಂದುವರೆದಿದೆ.. ಈಗಾಗಲೇ ಸ್ಥಳ ಮಹಜರು ಪ್ರಕ್ರಿಯೆ ಮುಗಿಸಿ ಆರೋಪಿಗಳ ಹೇಳಿಕೆ ಕೂಡ ದಾಖಲಿಸೋ ಪ್ರಕ್ರಿಯೆಯೂ ಮುಗಿದಿದೆ.. ಈ ವೇಳೆ ದರ್ಶನ್ ಸೇರಿ ಐವರು ಆರೋಪಿಗಳು ಸ್ಫೋಟಕ ವಿಚಾರಗಳನ್ನ ಬಾಯ್ಬಿಟ್ಟಿದ್ದಾರೆ.

ಹೌದು.. ರೇಣುಕಾಸ್ವಾಮಿ ಮರ್ಡರ್ ಕೇಸ್ ನ ತನಿಖೆಯನ್ನ ಪೊಲೀಸರು ಒಂದು ಹಂತಕ್ಕೆ ತಂದಿದ್ದಾರೆ.. ಆರು ದಿನ ಕಸ್ಟಡಿಲಿ ನಾಲ್ಕು ದಿನ ತನಿಖೇಲಿ ಹಲವು ಪ್ರಕ್ರಿಯೆಯನ್ನ ಪೊಲೀಸ್ರು ಕಂಪ್ಲೀಟ್ ಮಾಡಿದ್ದಾರೆ.. ಸ್ಥಳ ಮಹಜರು, ವೆಪನ್ ಸೀಜಿಂಗ್, ಡಿಜಿಟಲ್ ಎವಿಡೆನ್ಸ್ ಕಲೆಕ್ಟ್ ಮಾಡಿ ಆರೋಪಿಗಳ ಹೇಳಿಕೆ ಕೂಡ ದಾಖಲಿಸಿಕೊಂಡಿದ್ದಾರೆ.. ಹಾಗಾದ್ರೆ ದರ್ಶನ್, ಪವಿತ್ರಾ ಸೇರಿ ಏನ್ ಹೇಳಿದ್ರು ಹೇಳ್ತೀವಿ ನೋಡಿ.. 

ಎ1 . ಪವಿತ್ರ ಗೌಡ

* ರೇಣುಕಸ್ವಾಮಿ ಅಶ್ಲೀಲ ಫೋಟೋ, ಮೆಸೇಜ್ ಗಳನ್ನ ಪವನ್ ಗೆ ಕಳಿಸಿದ್ದೆ 
* ದರ್ಶನ್ ಗೆ ಈ ವಿಚಾರ ಗೊತ್ತಾಗಬಾರದು ಅಂತಾ ಹೇಳಿದ್ದೆ 
* ದರ್ಶನ್ ಗೆ ಈ ವಿಚಾರ ಗೊತ್ತಾದ್ರೆ ಏನಾದ್ರು ಅನಾಹುತ ಆಗಬಹುದು ಅಂತಾ ಹೇಳಿದ್ದೆ 
* ನಂಗೆ ಕೊಲೆ ಮಾಡ್ತಾರೆ ಅಂತಾ ಸಣ್ಣ ಕಲ್ಪನೆಯೂ ಇರಲಿಲ್ಲ 
* ಅಶ್ಲೀಲ ಮೆಸೇಜ್ ಮಾಡಿದ್ನಲ್ಲಾ ಅಂತಾ‌ ಚಪ್ಪಲಿಯಲ್ಲಿ ಹೊಡೆದು ವಾಪಸ್ಸಾಗಿದ್ದೆ 
* ಕೊಲೆ ಮಾಡ್ತಾರೆ ಅಂದ್ರೆ ನಾನೇ ಕಂಪ್ಲೆಂಟ್ ಕೊಟ್ಟು ಸರಿ ಮಾಡಿಕೊಳ್ತಿದ್ದೆ

ಎ2 ದರ್ಶನ್

* ಪವನ್ ನಿಂದ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿರೋದು ಗೊತ್ತಾಯ್ತು 
* ರೇಣುಕಾಪ್ರಸಾದ್ ನನ್ನ ಕರೆತರುವಂತೆ ರಾಘವೇಂದ್ರನಿಗೆ ಸೂಚಿಸಿದೆ 
* ಶನಿವಾರ ಸಂಜೆ ರೇಣುಕಾಪ್ರಸಾದ್ ನ ಶೆಡ್ ನಲ್ಲಿ ಭೇಟಿಯಾದೆ 
* ಇನ್ನೊಂದ್ ಸಲ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿದ್ರೆ ಸರಿ ಇರಲ್ಲ ಅಂತಾ ವಾರ್ನ್ ಮಾಡಿದೆ 
* ದುಡ್ಡು ಕೊಟ್ಟು ಊಟ ಮಾಡ್ಕೊಂಡ್ ಊರು ಸೇರುವಂತೆ ಹೇಳಿ ಹೊರಟೋದೆ 
* ನಾನು ಈ ಕೊಲೆಯನ್ನು ಮಾಡಿಲ್ಲ, ನನಗೂ ಇದಕ್ಕೂ ಸಂಬಂಧವಿಲ್ಲ ಅಂತಾ ಸ್ಟೇಟ್ ಮೆಂಟ್ 

ಎ3 ಪವನ್ 

* ರೇಣುಕಾಪ್ರಾಸದ್ ಪವಿತ್ರ ಅಕ್ಕನಿಗೆ ಅಶ್ಲೀಲ ಮೆಸೇಜ್ ಮಾಡ್ತಿದ್ದ 
* ಅಕ್ಕ, ಇದ್ಯಾರು ಪತ್ತೆ  ಮಾಡು ಅಂತಾ ಹೇಳಿದ್ರು 
* ಪವಿತ್ರ ಗೌಡ ಹೆಸರಲ್ಲಿ ರೇಣುಕಸ್ವಾಮಿ ಜೊತೆ ಚಾಟ್ ಮಾಡ್ತಾ ಮಾಡ್ತಾ ಮೊಬೈಲ್ ನಂ ಪಡೆದುಕೊಂಡೆ 
* ನಾನು ವಿಚಾರವನ್ನ ದರ್ಶನ್ ಗೆ ಹೇಳಿದೆ 
* ಆ ಬಳಿಕ ರೇಣುಕಾಸ್ವಾಮಿಯನ್ನ ಕರೆಸಿ ಶೆಡ್ ನಲ್ಲಿ ಎಲ್ಲರೂ ಸೇರಿ ಹಲ್ಲೆ ನಡೆಸಿದ್ವಿ 
* ರೇಣುಕಾಸ್ವಾಮಿ ಮೂರ್ಚೆ  ಹೋಗಿರಬಹುದು ಅನ್ಕೊಂಡೆ. ಆದ್ರೆ ಸತ್ತು ಹೋಗಿದ್ರು. 
* ಭಯ ಹುಟ್ಟಿಸಬೇಕು ಎಂದುಕೊಂಡಿದ್ವಿ, ಸಾಯಿಸುವ ಉದ್ದೇಶವಿರಲಿಲ್ಲ ಅಂತಾ ಪವನ್ ನಿಂದ ಸ್ಟೇಟ್ ಮೆಂಟ್ 

ಎ4 ರಾಘವೇಂದ್ರ 

* ಚಿತ್ರದುರ್ಗ ತೂಗದೀಪ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿದ್ದೇನೆ

* ದರ್ಶನ್ ಸಾರ್ ಒಂದು ನಂಬರ್ ಕೊಟ್ಟು ಈ ವ್ಯಕ್ತಿಯನ್ನ ಪತ್ತೆ ಮಾಡುವಂತೆ ಹೇಳಿದ್ರು 

* ನಂಬರ್ ಸಿಕ್ಕಿದ್ರಿಂದ ರೇಣುಕಾಸ್ವಾಮಿಯನ್ನ ಆರಾಮಾಗಿ ಪತ್ತೆ ಮಾಡಿದ್ದೆ 

* ರೇಣುಕಾಸ್ವಾಮಿಯನ್ನ ೨ ದಿನ ವಾಚ್ ಮಾಡಿ ಫಾರ್ಮಿಸಿಗೆ ಬರುವ ವೇಳೆ ಮಾತನಾಡಬೇಕು ಅಂತಾ ಕರೆದುಕೊಂಡು ಬಂದೆ 

* ಶನಿವಾರ ಮೂರು ಗಂಟೆ ವೇಳೆಗೆ ಪಟ್ಟಣಗೆರೆಯ ವಿನಯ್ ಶೆಡ್ ಒಳಗೆ ಕರೆದುಕೊಂಡು ಹೋದೆ 

* ಅಷ್ಟರಲ್ಲಿ ಆಗಲೇ ಅಲ್ಲಿದ್ದ ಸಾಕಷ್ಟು ಜನ ಇದ್ದು ರೇಣುಕಾಸ್ವಾಮಿಯನ್ನ ನೋಡಿದ ಕೂಡಲೆ ಹಲ್ಲೆ ಮಾಡಿದ್ರು 

* ನಮ್ಮ ಬಾಸ್ ಹೆಂಡ್ತಿಗೆ ಮೆಸೇಜ್ ಮಾಡ್ತೀಯೇನೊ ಅಂತಾ ಎಲ್ರೂ ಸೇರಿ ಹೊಡೆದ್ವಿ 

* ಸತ್ತು ಹೋಗ್ತಾನೆ ಅಂತಾ ಅಂದುಕೊಂಡಿರಲಿಲ್ಲ ಅಂತಾ ಸ್ಟೇಟ್ ಮೆಂಟ್

ಎ5 ನಂದೀಶ್ 

* ಅಶ್ಲೀಲ ಮಸೇಜ್ ಮಾಡ್ತಿರೋನ ಪತ್ತೆ ಮಾಡುವಂತೆ ಬಾಸ್ ಹೇಳಿದ್ರು 
* ಹೀಗಾಗಿ ರಾಘವೇಂದ್ರ ಜೊತೆ ಕೊ‌ಆರ್ಡಿನೇಟ್ ನಲ್ಲಿದ್ದೆ 
* ಚಿತ್ರದುರ್ಗದಿಂದ ರೇಣುಕಸ್ವಾಮಿಯನ್ನ ಕರೆತಂದ್ರು
* ಪಟ್ಟಣಗೆರೆಯ ವಿನಯ್ ಶೆಡ್ ಗೆ ರೇಣುಕಸ್ವಾಮಿಯನ್ನ ಕರೆತರಲಾಯ್ತು 
* ಮೊದಲೇ ಅಲ್ಲಿದ್ದ ಹುಡುಗರು ರೇಣುಕಸ್ವಾಮಿಯನ್ನ ನೋಡ್ತಿದ್ದ ಹಾಗೆ ಹಲ್ಲೆ ನಡೆಸಿದ್ರು 
* ಕೈ ಬಾಯಿ , ಮೈ ನಲ್ಲಿ ರೇಣುಕಸ್ವಾಮಿಗೆ ರಕ್ತ ಬಂತು 
* ಸಂಜೆ 6-30 ರ ಸುಮಾರಿಗೆ ರೇಣುಕಸ್ವಾಮಿ ಉಸಿರಾಡ್ತಿರಲಿಲ್ಲ 
* ಸಾವನ್ನಪ್ಪಿರಬಹದು ಅಂತಾ ಅಲ್ಲಿದ್ದವರೆಲ್ಲಾ ಭಯಗೊಂಡೆವು..

ಸದ್ಯ ಎಲ್ಲಾ ಆರೋಪಿಗಳ ಹೇಳಿಕೆ ದಾಖಲಿಸಿಕೊಳ್ಳೋ ನಡುವೆ ಇನ್ನೂ ಮೂವರು ಆರೋಪಿಗಳು ಪೊಲೀಸ್ರಿಗೆ ಶರಣಾಗಿದ್ದಾರೆ.. ಇವತ್ತಿನಿಂದ ಅವ್ರ ವಿಚಾರಣೆ ಕೂಡ ನಡೆಯಲಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News