ಸೀರಿಯಲ್ ಲೋಕಕ್ಕೆ ಕಾಲಿಟ್ಟ ನೇಹಾ ಗೌಡ ರಿಯಲ್‌ ಪತಿ ಚಂದನ್ ಗೌಡ, ಹೇಗಿದೆ ನೋಡಿ ಪಾತ್ರ!

Antarapata : ಜೀ ಕನ್ನಡ ನ್ಯೂಸ್‌ ಜೊತೆ ಕಿರುತೆರೆ ಖ್ಯಾತ ನಟ ಚಂದನ್‌ ಗೌಡ ಮಾತನಾಡಿದ್ದಾರೆ. ಹೊಚ್ಚ ಹೊಸ ಧಾರಾವಾಹಿ ಅಂತರಪಟ ಸೀರಿಯಲ್‌ನಲ್ಲಿ ನಾಯಕ ನಟ ಸುಶಾಂತ್‌ ಪಾತ್ರದಲ್ಲಿ ಚಂದನ್‌ ಗೌಡ ಕಾಣಿಸಿಕೊಳ್ಳಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಅಂತರಪಟ’ ಎಂಬ ಹೊಸ ಧಾರಾವಾಹಿಯಲ್ಲಿ ಚಂದನ್ ಗೌಡ ನಾಯಕರಾಗಿ ಮಿಂಚಲಿದ್ದಾರೆ.   

Written by - Zee Kannada News Desk | Last Updated : Apr 27, 2023, 03:54 PM IST
  • ಹೊಚ್ಚ ಹೊಸ ಧಾರಾವಾಹಿ ಅಂತರಪಟ ಸೀರಿಯಲ್‌ನಲ್ಲಿ ನಾಯಕ ನಟ ಸುಶಾಂತ್‌ ಪಾತ್ರದಲ್ಲಿ ಚಂದನ್‌ ಗೌಡ ಕಾಣಿಸಿಕೊಳ್ಳಲಿದ್ದಾರೆ.
  • ಅಮ್ಮನ ಮುದ್ದಿನ ಮಗ ಯಾವುದೇ ಜವಾಬ್ದಾರಿ ಇಲ್ಲದ ಸುಶಾಂತ್‌ ಪಾತ್ರ
  • ಉದ್ಯಮಿಯಾಗಬೇಕು ಎಂದು ಕನಸು ಕಾಣುವ ಮಧ್ಯಮ ವರ್ಗದ ಸ್ವಾಭಿಮಾನಿ ಹೆಣ್ಣುಮಗಳು ಆರಾಧನಾ
ಸೀರಿಯಲ್ ಲೋಕಕ್ಕೆ ಕಾಲಿಟ್ಟ ನೇಹಾ ಗೌಡ ರಿಯಲ್‌ ಪತಿ ಚಂದನ್ ಗೌಡ, ಹೇಗಿದೆ ನೋಡಿ ಪಾತ್ರ!  title=

Kannada Serial : ತಮ್ಮ ಪಾತ್ರದ ಕುರಿತು ಮಾತನಾಡಿದ ಅವರು ಅಮ್ಮನ ಮುದ್ದಿನ ಮಗ ಯಾವುದೇ ಜವಾಬ್ದಾರಿ ಇಲ್ಲದ ಸುಶಾಂತ್‌ ಪಾತ್ರ  ತುಂಬಾ ಎಂಜಾಯ್‌ ಮಾಡ್ತಾಇದ್ದೀನಿ, ಧಾರಾವಾಹಿಯಲ್ಲಿ ಸುಶಾಂತ್‌ ರಿಚ್‌ ಕಿಡ್ ಜೀವನದಲ್ಲಿ ಯಾವುದೇ ಗುರಿ ಇಲ್ಲಾ. ಆ ಟೈಮಿನಲ್ಲಿ  ತಂದೆಯ ಮಾತಿನಿಂದ ಹೇಗೆ ಜೀವನ ಬದಲಾಗುತ್ತೆ ಅನ್ನೋದೆ ನನ್ನ ಪಾತ್ರದ ವಿಶೇಷತೆ ಎಂದರು. 

ಉದ್ಯಮಿಯಾಗಬೇಕು ಎಂದು ಕನಸು ಕಾಣುವ ಮಧ್ಯಮ ವರ್ಗದ ಸ್ವಾಭಿಮಾನಿ ಹೆಣ್ಣುಮಗಳು ಆರಾಧನಾ ಮತ್ತು ಕೋಟ್ಯಂತರ ರೂಪಾಯಿ ಆಸ್ತಿ ಇದ್ದರೂ, ತಲೇಲಿ ನೂರಾರು ಐಡಿಯಾಗಳಿದ್ದರೂ, ಜೀವನದಲ್ಲಿ ಕ್ಲಾರಿಟಿಯೇ ಇಲ್ಲದ ಸುಶಾಂತ್ ರಾಜ್ ಪ್ರಧಾನ್ ನಡುವಿನ ಕಥೆಯೇ ‘ಅಂತರಪಟ’. ಅಂತರಪಟ’ ಸೀರಿಯಲ್‌ನಲ್ಲಿ ಶ್ರೀಮಂತ ಹುಡುಗ ಸುಶಾಂತ್ ರಾಜ್ ಪ್ರಧಾನ್ ಆಗಿ ಚಂದನ್ ಗೌಡ ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ ಸೀರಿಯಲ್‌ ಲೋಕಕ್ಕೆ ಚಂದನ್ ಗೌಡ ಪಾದಾರ್ಪಣೆ ಮಾಡಿದ್ದಾರೆ.

 

ಇದನ್ನೂ ಓದಿ-ಬಿಸ್‌ ಬಾಸ್‌ 8 ವಿನ್ನರ್‌ ಮಂಜು ಪಾವಗಡ ಧಾರಾವಾಹಿಗೆ ಎಂಟ್ರಿ, ಏನಿದರ ಕಥೆ?

ಚಂದನ್‌ ಗೌಡ ಕನ್ನಡದ 'ರಾಜಾ ರಾಣಿ' ರಿಯಾಲಿಟಿ ಶೋನಲ್ಲಿ ರಿಯಲ್‌ ಲೈಫ್‌ ಪತ್ನಿ ನೇಹಾ ಗೌಡ ಜೊತೆ ಭಾಗವಹಿಸಿ ಟ್ರೋಫಿ ಮುಡಿಗೇರಿಸಿಕೊಂಡರು. ಅನೇಕ ವರ್ಷಗಳ ನಂತರ ಚಂದನ್, ನೇಹಾ ಪ್ರೀತಿಗೆ ಮನೆಯವರ ಒಪ್ಪಿಗೆ ಸಿಕ್ಕಿ ಅವರಿಬ್ಬರೂ ಹಸೆಮಣೆ ಏರಿದ್ದರು. ಜೊತೆಗೆ ಸುಶಾಂತ್‌ ಹಾಗು ಚಂದನ್‌ ಗೌಡ ಗೆ ಬಹಳಷ್ಟು ವ್ಯತ್ಯಾಸವಿದೆ, ನನ್ನ ಜೀವನದಲ್ಲಿ ಗುರಿ ಹಾಗು ಕ್ಲಾರಿಟಿ ಇದೆ ಎಂದು ಹೇಳಿದರು. 

ಸೀರಿಯಲ್‌ನಲ್ಲಿ ಸುಶಾಂತ್‌ ಅಮ್ಮನ ಮುದ್ದಿನ ಮಗ ಬೇಜವಾಬ್ದಾರಿ ಹುಡುಗ ಅಪ್ಪನ ಆಸ್ತಿ ಇದೆ, ಆದ್ರೆ ಜೀವನದಲ್ಲಿ ಗುರಿ ಇಲ್ಲಾ. ನನ್ನ ನಿಜ ಜೀವನದಲ್ಲಿ ನಾನು ಕಾಲೇಜ್‌ ಟೈಮಿನಲ್ಲಿ ಹೀಗೆ ಇದ್ದೆ, ಲೈಫಿನಲ್ಲಿ ಏನು ಮಾಡಬೇಕು ಅಂತಾ ಡಿಸೈಡ್‌ ಮಾಡಿರಲಿಲ್ಲಾ. ಹಾಗಾಗಿ ಈ ಪಾತ್ರವನ್ನು ಎಂಜಾಯ್‌ ಮಾಡ್ತಾಇದ್ದೀನಿ ಎಂದು ಹೇಳಿದರು. 

ಇದನ್ನೂ ಓದಿ-ಮನ್‌ ಕಿಬಾತ್‌ 100ನೇ ಸಂಚಿಕೆ ಸಮಾರಂಭದಲ್ಲಿ ಮೋದಿಯವರ ಬಗ್ಗೆ ಮಾತನಾಡಿದ ಆಮಿರ್ ಖಾನ್ ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News