ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಕ್ಷಮೆ ಕೋರಿದ್ದಾರೆ...ಯಾಕೆ ಗೊತ್ತಾ?

ಕಾರಣಾಂತರದಿಂದ ಹೈದರಾಬಾದಿನಲ್ಲಿ ಉಳಿಯಬೇಕಾದ ಸಂದರ್ಭ ಎದುರಾದ್ದರಿಂದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಸುದೀಪ್ ಹೇಳಿದ್ದಾರೆ.

Last Updated : Sep 30, 2018, 10:37 AM IST
ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಕ್ಷಮೆ ಕೋರಿದ್ದಾರೆ...ಯಾಕೆ ಗೊತ್ತಾ? title=

ಬೆಂಗಳೂರು: ನಟ ಕಿಚ್ಚ ಸುದೀಪ್ ತಮ್ಮ ನೆಚ್ಚಿನ ಅಭಿಮಾನಿಗಳಿಗೆ ವೀಡಿಯೋ ಮೂಲಕ ಕ್ಷಮೆ ಕೋರಿದ್ದಾರೆ. ಅರೆ... ಸುದೀಪ್ ಅಂಥಾ ತಪ್ಪೇನು ಮಾಡಿದ್ದಾರೆ ಎಂದು ಆಲೋಚಿಸುತ್ತಿದ್ದಿರಾ? ಹಾಗಿದ್ದರೆ ಈ ಸುದ್ದಿ ಓದಿ...

ದಾವಣಗೆರೆಯ ಬಿಐಟಿ ಕಾಲೇಜು ರಸ್ತೆಯಲ್ಲಿ ನಿರ್ದೇಶಕ ನಂದ ಕಿಶೋರ್ ಮಾಲಿಕತ್ವದಲ್ಲಿ ದೊನ್ನೆ ಬಿರಿಯಾನಿ ಹೋಟೆಲ್ ಪ್ರಾರಂಭೋತ್ಸವ ಶುಕ್ರವಾರ ನೆರವೇರಬೇಕಿತ್ತು. ಆದರೆ, ಕಾರಣಾಂತರಗಳಿಂದ ಕಿಚ್ಚ ಸುದೀಪ್ ಕಾರ್ಯಕ್ರಮಕ್ಕೆ ಹೋಗಲು ಆಗಲಿಲ್ಲವಂತೆ. ಹಾಗಾಗಿ ಸುದೀಪ್ ತಮ್ಮಿಂದಾದ ತೊಂದರೆಗಾಗಿ ವೀಡಿಯೋ ಮಾಡಿ ಕಳುಹಿಸಿ ಅಭಿಮಾನಿಗಳ ಬಳಿ ಕ್ಷಮೆ ಕೋರಿದ್ದಾರೆ. 

ಕಾರಣಾಂತರದಿಂದ ಹೈದರಾಬಾದಿನಲ್ಲಿ ಉಳಿಯಬೇಕಾದ ಸಂದರ್ಭ ಎದುರಾದ್ದರಿಂದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಆದರೆ ಅಕ್ಟೋಬರ್ 19ರಂದು ಖಂಡಿತವಾಗಿಯೂ ದಾವಣಗೆರೆಗೆ ಬರುತ್ತಿರುವುದಾಗಿ ಹೇಳಿರುವ ಸುದೀಪ್, ತಮ್ಮನ್ನು ಆಹ್ವಾನಿಸಿದ್ದ ಶಾಸಕ ಎಸ್.ವಿ.ರಾಮಚಂದ್ರಪ್ಪ ಹಾಗೂ ವಾಲ್ಮೀಕಿ ಶ್ರೀ ಸೇರಿದಂತೆ ತಮ್ಮನ್ನು ಕರೆದಿದ್ದ ಎಲ್ಲರಿಗೂ ನಿರ್ದೇಶಕ ನಂದಕಿಶೋರ್ ಪರವಾಗಿ ಕ್ಷಮೆ ಕೇಳಿದ್ದಾರೆ.

ದೊನ್ನೆ ಬಿರಿಯಾನಿ ಹೋಟೆಲ್ ಪ್ರಾರಂಭೋತ್ಸವಕ್ಕೆ ಸುದೀಪ್ ಬಾರದ ಕಾರಣ ನಿರ್ದೇಶಕ ನಂದಕಿಶೋರ್ ಈ ಕಾರ್ಯಕ್ರಮವನ್ನು ಮುಂದೂಡಿದ್ದರು. ಈ ಹಿನ್ನೆಲೆಯಲ್ಲಿ ಸುದೀಪ್ ಈ ವೀಡಿಯೋ ಮಾಡಿ ಕಳುಹಿಸಿದ್ದಾರೆ.
 

Trending News