Katrina Kaif: ಅಕ್ಷಯ್ ಕುಮಾರ್‌ಗೆ ರಾಖಿ ಕಟ್ಟಲು ಬಯಸಿದ್ದ ಕತ್ರಿನಾ ಕೈಫ್, ಕಾರಣ ಏನು ಗೊತ್ತಾ?

Katrina Kaif- ಬಾಲಿವುಡ್ ನೆಚ್ಚಿನ ಜೋಡಿಗಳಲ್ಲಿ ಕತ್ರಿನಾ ಕೈಫ್ ಮತ್ತು ಅಕ್ಷಯ್ ಕುಮಾರ್ ಜೋಡಿಯನ್ನು ಕೂಡ ಬಹಳ ಮಂದಿ ಇಷ್ಟಪಡುತ್ತಾರೆ. ಆದರೆ ನಿಜ ಜೀವನದಲ್ಲಿ ಕತ್ರಿನಾ ಕೈಫ್ ಅಕ್ಷಯ್ ಕುಮಾರ್ ಗೆ ರಾಖಿ ಕಟ್ಟಲು ಬಯಸಿದ್ದರಂತೆ. 

Written by - Yashaswini V | Last Updated : Oct 6, 2021, 08:48 AM IST
  • ತೆರೆಯ ಮೇಲೆ ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಅನ್ನು ಉತ್ತಮ ಜೋಡಿ ಎಂದು ಪರಿಗಣಿಸಲಾಗಿದೆ
  • ನಿಜ ಜೀವನದಲ್ಲಿ ಕತ್ರಿನಾ ಕೈಫ್ ಅಕ್ಷಯ್ ಕುಮಾರ್ ಅವರಿಗೆ ರಾಖಿ ಕಟ್ಟಲು ಬಯಸಿದ್ದರಂತೆ
  • ಕತ್ರಿನಾ ಈ ಬಗ್ಗೆ ಸ್ವತಃ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ
Katrina Kaif: ಅಕ್ಷಯ್ ಕುಮಾರ್‌ಗೆ ರಾಖಿ ಕಟ್ಟಲು ಬಯಸಿದ್ದ ಕತ್ರಿನಾ ಕೈಫ್, ಕಾರಣ ಏನು ಗೊತ್ತಾ? title=
When Katrina Kaif wanted to tie Akshay Kumar a rakhi...

Katrina Kaif- ಬಾಲಿವುಡ್ನಲ್ಲಿ ಅಕ್ಷಯ್ ಕುಮಾರ್ (Akshay Kumar)  ಮತ್ತು ಕತ್ರಿನಾ ಕೈಫ್ (Katrina Kaif) ಜೋಡಿಯನ್ನು ಹಿಟ್ ಜೋಡಿ ಎಂದು ಪರಿಗಣಿಸಲಾಗಿದೆ. ಅಕ್ಷಯ್ ಕುಮಾರ್ - ಕತ್ರಿನಾ ಕೈಫ್ ಜೋಡಿಯ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲೂ ಸದ್ದು ಮಾಡಿವೆ.  ಸಿನಿ ಅಭಿಮಾನಿಗಳು ಈ ಜೋಡಿಯ ಕೆಮಿಸ್ಟ್ರಿ ಅನ್ನು ತುಂಬಾ ಇಷ್ಟಪಡುತ್ತಾರೆ. ತೆರೆಯ ಮೇಲೆ ಸೂಪರ್ ಡೂಪರ್ ಜೋಡಿ ಆಗಿದ್ದರೂ, ನಿಜ ಜೀವನದಲ್ಲಿ ಕತ್ರಿನಾ ಕೈಫ್ ಅಕ್ಷಯ್ ಕುಮಾರ್‌ಗೆ ರಾಖಿ ಕಟ್ಟಲು ಬಯಸಿದ್ದರಂತೆ. ಇದನ್ನು ಸ್ವತಃ ನಟಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. 

ಅಕ್ಷಯ್ ಗೆ ರಾಖಿ ಕಟ್ಟಲು ಬಯಸಿದ್ದ ಕತ್ರಿನಾ:
'ವೆಲ್ ಕಂ', 'ದೇ ದನಾ ದನ್', 'ಸಿಂಗ್ ಈಸ್ ಕಿಂಗ್' ಮತ್ತು 'ತೀಸ್ ಮಾರ್ ಖಾನ್' ನಂತಹ ಸೂಪರ್ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಕತ್ರಿನಾ ಕೈಫ್  (Katrina Kaif) ತನ್ನ ನೋಟದಿಂದಾಗಿ ಹೆಚ್ಚಾಗಿ ಸುದ್ದಿಯಾಗುತ್ತಾರೆ. ಈ ಎಲ್ಲಾ ಚಿತ್ರಗಳು ಕತ್ರಿನಾ ಅವರ ವೃತ್ತಿ ಜೀವನದಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತಾಯಿತು. ಕತ್ರಿನಾ ಜೊತೆಗಿನ ಈ ಚಿತ್ರಗಳಲ್ಲಿ ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಗಳಲ್ಲಿ ಇಬ್ಬರ ಜೋಡಿಯೂ ಅದ್ಭುತವಾಗಿತ್ತು. ಆದರೆ 'ತೀಸ್ ಮಾರ್ ಖಾನ್' ಚಿತ್ರದ ಸೆಟ್ ನಲ್ಲಿ ಕತ್ರಿನಾ ಕೈಫ್ ಅಕ್ಷಯ್ ಕುಮಾರ್ (Akshay Kumar) ಗೆ ರಾಖಿ ಕಟ್ಟಲು ಬಯಸಿದ್ದರು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.

ಇದನ್ನೂ ಓದಿ- Nora Fatehi Viral Photo:Instagramನಲ್ಲಿ ಹಂಚಿಕೊಳ್ಳುತ್ತಲೇ ವೈರಲ್ ಅದ ನೋರಾ ಫತೇಹಿ ಭಾವಚಿತ್ರ

'ದಿ ಕಪಿಲ್ ಶರ್ಮಾ ಶೋ' (The Kapil Sharma Show) ಎಂಬ ಟಿವಿ ಕಾರ್ಯಕ್ರಮದ ನಿರೂಪಕರಾದ ಕಪಿಲ್ ಶರ್ಮಾ, ಕತ್ರಿನಾ ಕೈಫ್ ಅವರನ್ನು ಕೇಳಿದರು, 'ತೀಸ್ ಮಾರ್ ಖಾನ್ ಅವರ ಶೀಲಾ ಕಿ ಜವಾನಿ ಹಾಡನ್ನು ಚಿತ್ರೀಕರಿಸುವಾಗ ನೀವು ಅಕ್ಷಯ್ ಕುಮಾರ್‌ಗೆ ನಾನು ನಿಮಗೆ ರಾಖಿ ಕಟ್ಟಲು ಬಯಸುತ್ತೇನೆ ಎಂದಿದ್ದರಂತೆ... ನಿಮಗೆ ರಾಖಿಯ ಅರ್ಥ ತಿಳಿದಿಲ್ಲವೇ ಅಥವಾ ಅಕ್ಷಯ್ ಕುಮಾರ್ ಅವರ ಮುಗ್ಧತೆ ನಿಮಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರೂ ಕಪಿಲ್ ಶರ್ಮಾ ಅವರ ಈ ಪ್ರಶ್ನೆಗೆ ನಗಲು ಆರಂಭಿಸುತ್ತಾರೆ.

ಇದನ್ನೂ ಓದಿ- ಬಿಗ್ ಬಾಸ್ ಹಕ್ಕಿಗಳ ಪ್ರಣಯ ಸಮಯ, ಶಿಲ್ಪಾ ತಂಗಿ ಶಮಿತಾಗೆ ಲವ್ ಆಯ್ತಾ..?

ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿದ ಕತ್ರಿನಾ ಕೈಫ್ (Katrina Kaif), 'ನನಗೆ ರಾಖಿಯ ಅರ್ಥ ನಿಖರವಾಗಿ ತಿಳಿದಿತ್ತು. ರಕ್ಷಾ ಬಂಧನ ಎಂದರೆ ಸಹೋದರರು ಸಹೋದರಿಯರನ್ನು ರಕ್ಷಿಸಲು ವಚನ ನೀಡುವುದು. ಅಕ್ಷಯ್ ಕುಮಾರ್ ನನ್ನ ಉತ್ತಮ ಸ್ನೇಹಿತ. ಅವರು ನನ್ನನ್ನು ಅನೇಕ ಕಡೆ ರಕ್ಷಿಸುತ್ತಾರೆ. ಅದಕ್ಕಾಗಿಯೇ ನಾನು ಹಾಗೆ ಹೇಳಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ನನ್ನೊಂದಿಗೂ ಈ ರೀತಿ ಸಂಭವಿಸಿದೆ. ಶೋ ಮಧ್ಯದಲ್ಲಿ ಸೋನಾಕ್ಷಿ ಸಿನ್ಹಾ ಕೂಡ ನನಗೆ ರಾಖಿ ಕಟ್ಟಲು ಬಯಸುವುದಾಗಿ ಹೇಳಿದರು. ಸೋನಾಕ್ಷಿ ನನಗೆ ರಾಖಿ ಕಟ್ಟಲು ಬಯಸಿದ್ದರು ಎಂದು ಕಪಿಲ್ ಶರ್ಮಾ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News