ಯಾವ್ ಕಾರಣಕ್ಕೂ ದುನಿಯಾ ವಿಜಯ್ ಗೆ ಡೈವೋರ್ಸ್ ಕೊಡಲ್ಲ: ನಾಗರತ್ನ

ನಾನು ಯಾವುದೇ ಕಾರಣಕ್ಕೂ ಡೈವೋರ್ಸ್ ಕೊಡುವುದಿಲ್ಲ, ನನಗೆ ದಯವಿಟ್ಟು ನ್ಯಾಯ ಕೊಡಿಸಿ ಎಂದು ನಾಗರತ್ನ ಮನವಿ ಮಾಡಿದ್ದಾರೆ.

Last Updated : Dec 3, 2018, 04:38 PM IST
ಯಾವ್ ಕಾರಣಕ್ಕೂ ದುನಿಯಾ ವಿಜಯ್ ಗೆ ಡೈವೋರ್ಸ್ ಕೊಡಲ್ಲ: ನಾಗರತ್ನ title=

ಬೆಂಗಳೂರು: ನಾನು ಯಾವುದೇ ಕಾರಣಕ್ಕೂ ಡೈವೋರ್ಸ್ ಕೊಡಲ್ಲ, ನನಗೆ ನ್ಯಾಯ ಕೊಡಿಸಿ ಎಂದು ದುನಿಯಾ ವಿಜಯ್ ಮೊದಲ ಪತ್ನಿ ನಾಗರತ್ನ ಹೇಳಿದ್ದಾರೆ. 

ಈ ಬಗ್ಗೆ ಸೋಮವಾರ ಬೆಳಿಗ್ಗೆ ಮಹಿಳಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಿದ ನಾಗರತ್ನ, ವಿಜಯ್ ಅವರು ಜೀವನಾಂಶ ಕೊಡುತ್ತೇನೆ ಎಂದಿದ್ದರು. ಆದರೆ ಕಳೆದ 3 ತಿಂಗಳಿಂದ ಯಾವುದೇ ಸಹಾಯ ಮಾಡಿಲ್ಲ. ಮನೆ ನಡೆಸುವುದು ಕಷ್ಟ ಆಗಿದೆ. ಮಕ್ಕಳು ಡಿಪ್ರೆಶನ್ ಗೆ ಹೋಗಿದ್ದಾರೆ. ಅಷ್ಟೇ ಅಲ್ಲದೆ, ನಗರದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಏರಿಯಾದಲ್ಲಿರುವ ವಿಜಿಯವರ ಮತ್ತೊಂದು ಮನೆಯಲ್ಲಿ ವಿಜಿ ಆಪ್ತ ನಿರ್ಮಾಪಕ ಸುಂದರ್​ ಗೌಡ ವಾಸಿಸುತ್ತಿದ್ದಾರೆ. ಆ ಮನೆಯನ್ನು ನಮಗೆ ಗೊತ್ತಿಲ್ಲದಂತೆ ವಿಜಯ್​, ಸುಂದರ್​ ಗೌಡ ಅವರಿಗೆ ಮಾರಿದ್ದಾರೆ. ಹಾಗಾಗಿ ನಾನು ಯಾವುದೇ ಕಾರಣಕ್ಕೂ ಡೈವೋರ್ಸ್ ಕೊಡುವುದಿಲ್ಲ, ನನಗೆ ದಯವಿಟ್ಟು ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

ನಾಗರತ್ನ ಆವರ ಆರೋಪಗಳನ್ನು ಆಲಿಸಿದ ಮಹಿಳಾ ಆಯೋಗ, ಮನೆ ಮಾರಾಟ ವಿಚಾರದ ಬಗ್ಗೆ ನಾವೇನೂ ಆಡಲು ಸಾಧ್ಯವಿಲ್ಲ. ಏಕೆಂದರೆ ಅದು ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯ. ಇನ್ನು, ಜೀವನಾಂಶದ ಬಗ್ಗೆ ಮತ್ತು ಇತರ ಕೌಟುಂಬಿಕ ವಿಚಾರಗಳ ಬಗ್ಗೆ ವಿಜಯ್ ಅವರನ್ನು ಡಿಸೆಂಬರ್ 12ರಂದು ಕರೆಸಿ ಸಂಧಾನ ನಡೆಸಲು ಆಯೋಗ ನಿರ್ಧರಿಸಿದೆ ಎನ್ನಲಾಗಿದೆ.

Trending News