Bigg Boss Kannada: ಅಂಡರ್ 16ನಲ್ಲಿ ಒಳ್ಳೆಯ ಆಸ್ಟ್ರೊಲಜರ್ ಅಂತೆ ತುಕಾಲಿ ಸಂತೋಷ್

Bigg Boss Kannada: ಎರಡನೇ ವಾರದಲ್ಲಿ ತುಕಾಲಿ ಅವರು ಕೊಂಚ ಸೀರಿಯಸ್ ಆದಂತೆ ಕಾಣಿಸಿದ್ದರು. ಅದಕ್ಕೆ ಪೂರಕವಾಗಿ ನಾಮಿನೇಷನ್‌ ಟಾಸ್ಕ್‌ನಲ್ಲಿ ಇಶಾನಿ ಮತ್ತು ಅವರ ನಡುವೆ ನಡೆದಿದ್ದ ಮಾತಿನ ಚಕಮಕಿ ಕೂಡ ಹೀಟ್‌ ಆಗಿಯೇ ಇತ್ತು.   

Written by - Yashaswini V | Last Updated : Oct 18, 2023, 01:28 PM IST
  • ಡ್ರೋಣ್ ಪ್ರತಾಪ್‌, ತುಕಾಲಿ ಸಂತೋಷ್, ಸ್ನೇಹಿತ್, ವರ್ತೂರು ಸಂತೋಷ್ ಮತ್ತು ಬುಲೆಟ್ ರಕ್ಷಕ್ ಹರಟೆಯಲ್ಲಿ ಮುಳುಗಿದ್ದರು.
  • ಮಾತಿನ ನಡುವೆ ತುಕಾಲಿ ಅವರು ವರ್ತೂರ್ ಸಂತೋಷ್‌ಗೆ, ‘ಒಂದೇ ಬೆಡ್‌ನಲ್ಲಿ ಮಲೀಕಂಡು ಜಾತಕ ಹೇಳೋ ಲೇವಲ್ಲಿಗೆ ತಂದ್ಬಿಟ್ಯಲ್ಲಣ್ಣಾ ನೀನು’ ಎಂದು ತಮಾಷೆ ಮಾಡಿದ್ದಾರೆ.
  • ಇದೇ ಮಾತನ್ನು ಹಿಡಿದುಕೊಂಡು ಸ್ನೇಹಿತ್, ‘ನಮ್ಮೆಲ್ಲರ ಜಾತಕ ಹೇಳಿ’ ಎಂದಿದ್ದಾರೆ.
Bigg Boss Kannada: ಅಂಡರ್ 16ನಲ್ಲಿ ಒಳ್ಳೆಯ ಆಸ್ಟ್ರೊಲಜರ್ ಅಂತೆ ತುಕಾಲಿ ಸಂತೋಷ್  title=

Bigg Boss Kannada Season 10:  ಮೊದಲ ವಾರದ ವೀಕೆಂಡ್‌ ಎಪಿಸೋಡ್‌ನಲ್ಲಿ ತುಕಾಲಿ ಸಂತೋಷ್ ಮಾಡುತ್ತಿರುವ ಕಾಮಿಡಿ ಬೇರೆಯವರಿಗೆ ಸಾಕಷ್ಟು ನೋವು ಕೊಡುತ್ತಿದೆ ಎಂಬ ಬಗ್ಗೆ ಚರ್ಚೆಯಾಗಿತ್ತು. ಕಿಚ್ಚ ಸುದೀಪ್ ಕೂಡ ಅವರಿಗೆ ಆರೋಗ್ಯಕರ ಹಾಸ್ಯ ಮಾಡುವಂತೆ ಕಿವಿಮಾತು ಕೂಡ ಹೇಳಿದ್ದರು. 

ಎರಡನೇ ವಾರದಲ್ಲಿ ತುಕಾಲಿ ಅವರು ಕೊಂಚ ಸೀರಿಯಸ್ ಆದಂತೆ ಕಾಣಿಸಿದ್ದರು. ಅದಕ್ಕೆ ಪೂರಕವಾಗಿ ನಾಮಿನೇಷನ್‌ ಟಾಸ್ಕ್‌ನಲ್ಲಿ ಇಶಾನಿ ಮತ್ತು ಅವರ ನಡುವೆ ನಡೆದಿದ್ದ ಮಾತಿನ ಚಕಮಕಿ ಕೂಡ ಹೀಟ್‌ ಆಗಿಯೇ ಇತ್ತು. ಹಾಗಂತ ತುಕಾಲಿ ಅವರ ಕಾಮಿಡಿ ಮುಗಿದುಹೋಯ್ತಾ? ಖಂಡಿತ ಇಲ್ಲ ಎನ್ನುತ್ತಿದೆ JioCinemaದಲ್ಲಿ ನೇರಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡದ Live Shorts ಸೆಗ್ಮೆಂಟ್‌ನಲ್ಲಿರುವ ಈ ವಿಡಿಯೊ!

ಇದನ್ನೂ ಓದಿ- BBK10: ಕಠೋರ ಶಪಥ ಮಾಡಿದ ತುಕಾಲಿ..! ಸದ್ಯ ಮನೆಯೊಳಗೆ ಸಂತೋಷ್ ಪರಿಸ್ಥಿತಿ ಏನಾಯ್ತು?

ಡ್ರೋಣ್ ಪ್ರತಾಪ್‌, ತುಕಾಲಿ ಸಂತೋಷ್, ಸ್ನೇಹಿತ್, ವರ್ತೂರು ಸಂತೋಷ್ ಮತ್ತು ಬುಲೆಟ್ ರಕ್ಷಕ್ ಹರಟೆಯಲ್ಲಿ ಮುಳುಗಿದ್ದರು. ಮಾತಿನ ನಡುವೆ ತುಕಾಲಿ ಅವರು ವರ್ತೂರ್ ಸಂತೋಷ್‌ಗೆ, ‘ಒಂದೇ ಬೆಡ್‌ನಲ್ಲಿ ಮಲೀಕಂಡು ಜಾತಕ ಹೇಳೋ ಲೇವಲ್ಲಿಗೆ ತಂದ್ಬಿಟ್ಯಲ್ಲಣ್ಣಾ ನೀನು’ ಎಂದು ತಮಾಷೆ ಮಾಡಿದ್ದಾರೆ. ಇದೇ ಮಾತನ್ನು ಹಿಡಿದುಕೊಂಡು ಸ್ನೇಹಿತ್, ‘ನಮ್ಮೆಲ್ಲರ ಜಾತಕ ಹೇಳಿ’ ಎಂದಿದ್ದಾರೆ. 

ಅವರ ನಡುವಣ ಮಾತು ಈ ರೀತಿ ಇತ್ತು!
ಸಂತೋಷ್: ನಾನು ಅಂಡರ್ 16ನಲ್ಲಿ ಒಳ್ಳೆಯ ಆಸ್ಟ್ರೊಲಜರ್…
ಸ್ನೆಹಿತ್: ಅಂಡರ್‍‌ 16 ಆಸ್ಟ್ರಲಜರ್ ಕೇಳಿದೀರಾ? 
ಸಂತೋಷ್: ನೀವು ನಂಬಲ್ಲ…
ಸ್ನೇಹಿತ್: ಬಿಗ್‌ಬಾಸ್‌ ನೀವೂ ನಂಬಲ್ಲ ಅಲ್ವಾ?
ಸಂತೋಷ್: ಪ್ರತಾಪ್ ನೀವು ನಂಬಲ್ಲ… ನಂಗೆ ಸಂಖ್ಯಾಶಾಸ್ತ್ರ ಎಲ್ಲ ಬರತ್ತೆ… ಅಂಡರ್‍‌ 16ನಲ್ಲಿ ಟೀವಿ ನೋಡ್ತಿದ್ದಾಗ ಅನಿಸಿಬಿಡ್ತು ಕ್ರಿಕೆಟ್ ಆಡ್ಬೇಕ ಅಂತ. ಆಮೇಲೆ ತೆಂಗಿನ ಮರದ ಹೆಡೆಯನ್ನು ನೀಟ್‌ ಆಗಿ ಕಟ್ ಮಾಡಿ ಬ್ಯಾಟ್ ಮಾಡ್ಕಂಡೆ… ಬಾಲ್ ಬೇಕಲ್ಲ… ಬಾಲ್ ತಗಳಕ್ಕೆ ದುಡ್ಡಿಲ್ಲ ನನ್ನತ್ರ… ಬಾಲ್ ಬೇಕಲಾ… ಒಂದು ನಿಂಬೆಹಣ್ಣು ತಗಂಡೆ…
ರಕ್ಷಕ್: ಅದಾ…. ಅದು ಹಾಕಿ ಬಾಲ್ ಇದ್ದಂಗಿರ್ತದೆ…
ಸಂತೋಷ್: ಅದ್ರಲ್ಲೇ ಟಚ್ ಮಾಡಿ ಮಾಡಿ ಪ್ರಾಕ್ಟೀಸ್ ಮಾಡ್ತಿದ್ದೆ…
ಹೀಗೆ ಮಾತುಕತೆ ಮುಂದುವರಿದಿದೆ. 

ಇದನ್ನೂ ಓದಿ- BBK10: ಮನೆಮಂದಿ ಕಣ್ಣಲ್ಲಿ ನೀರು ತರಿಸಿದ ‘ಅಕ್ಕ’..! ಅಕ್ಕರೆಗೆ ಕರಗಿದ ಕಾರ್ತಿಕ್‌ ಸಿರಿಗೆ ಹೇಳಿದ್ದೇನು..?

ತುಕಾಲಿ ಸಂತೋಷ್ ಅವರ ಬುರುಡೆ ಮಾತುಗಳನ್ನು ಉಳಿದವರು ಎಂಜಾಯ್ ಮಾಡಿ ನಗುತ್ತಿದ್ದಾರೆ….
https://jiocinema.onelink.me/fRhd/v57w8r4d 
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News