ʼಈಗಲೂ ನನಗೆ ಭಯವಾಗುತ್ತಿದೆ'.. ಕೆಜಿಎಫ್ ನಟಿ ಸೆನ್ಸೇಷನಲ್‌ ಕಾಮೆಂಟ್!!‌

 actress raveena tandon: ಬಾಲಿವುಡ್ ನಟಿ ರವೀನಾ ಟಂಡನ್ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಆಕೆ ಲಂಡನ್‌ಗೆ ಹೋಗಿದ್ದಾಗ ಕೆಲ ಅಭಿಮಾನಿಗಳು ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದರು. ಆದರೆ ಅವರಿಗೆ ಫೋಟೋ ಕೊಡದೆ ಬೇಗ ಹೊರಟು ಹೋದಳು. ಇದರೊಂದಿಗೆ ನೆಟ್ಟಿಗರು ಆಕೆಯ ವರ್ತನೆಗೆ ಅಸಹನೆ ವ್ಯಕ್ತಪಡಿಸಿದ್ದಾರೆ. 

Written by - Savita M B | Last Updated : Sep 14, 2024, 04:38 PM IST
  • ಬಾಲಿವುಡ್ ನಟಿ ರವೀನಾ ಟಂಡನ್ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವುದು ಗೊತ್ತೇ ಇದೆ.
  • ಅದಕ್ಕೇ ಲಂಡನ್ ನಲ್ಲಿ ಫೋಟೋ ಕೇಳಿದರೆ ಕೊಟ್ಟಿಲ್ಲ ಎಂಬ ಕಾರಣವನ್ನು ವಿವರಿಸಿದ್ದಾಳೆ.
ʼಈಗಲೂ ನನಗೆ ಭಯವಾಗುತ್ತಿದೆ'.. ಕೆಜಿಎಫ್ ನಟಿ ಸೆನ್ಸೇಷನಲ್‌ ಕಾಮೆಂಟ್!!‌  title=

raveena tandon Asking apologies: ಬಾಲಿವುಡ್ ನಟಿ ರವೀನಾ ಟಂಡನ್ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಆಕೆ ಲಂಡನ್‌ಗೆ ಹೋಗಿದ್ದಾಗ ಕೆಲ ಅಭಿಮಾನಿಗಳು ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದರು. ಆದರೆ ಅವರಿಗೆ ಫೋಟೋ ಕೊಡದೆ ಬೇಗ ಹೊರಟು ಹೋದಳು. ಇದರೊಂದಿಗೆ ನೆಟ್ಟಿಗರು ಆಕೆಯ ವರ್ತನೆಗೆ ಅಸಹನೆ ವ್ಯಕ್ತಪಡಿಸುವುದಲ್ಲದೇ ಟ್ರೋಲ್ ಮಾಡಿ ಕಮೆಂಟ್ ಮಾಡಿದ್ದಾರೆ.

ಈ ಘಟನೆಗೆ ರವೀನಾ ಇತ್ತೀಚೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ನಡೆದ ಘಟನೆಯಿಂದ ಇನ್ನೂ ಚೇತರಿಸಿಕೊಂಡಿಲ್ಲ ಎಂದ ಅವರು.. ಆ ಘಟನೆಯಿಂದ ಇನ್ನೂ ತುಂಬಾ ಭಯವಾಗುತ್ತಿದೆ. ಅದಕ್ಕೇ ಲಂಡನ್ ನಲ್ಲಿ ಫೋಟೋ ಕೇಳಿದರೆ ಕೊಟ್ಟಿಲ್ಲ ಎಂಬ ಕಾರಣವನ್ನು ವಿವರಿಸಿದ್ದಾಳೆ.

ಇದನ್ನೂ ಓದಿ-ವಿರಾಟ್ ಜೊತೆ "ಆ" ಟಾಪ್  ನಟಿ ಸೆಲ್ಫಿ.. ವೈರಲ್ ಫೋಟೋ ಹಿಂದಿನ ರಹಸ್ಯವೇನು?  

'ನಾನು ಲಂಡನ್‌ನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯಾರೋ ಬಂದು ಸೆಲ್ಫಿ ಕೇಳಿದರು. ನಾನು ಬೇಡ ಎಂದು ಹೇಳಿ ಬೇಗ ಹೊರಟೆ. ಆಗ ನಾನೊಬ್ಬಳೇ ಇದ್ದೆ. ಕೆಲವು ತಿಂಗಳ ಹಿಂದೆ ಬಾಂದ್ರಾದಲ್ಲಿ ಏನಾಗಿತ್ತೂ ಅದೇ ಆಗುತ್ತೇ ಎಂಬ ಭಯ ನನ್ನಲ್ಲಿ ಇನ್ನೂ ಇದೆ. ಜನರು ನನ್ನ ಸುತ್ತಲೂ ಇರುವಾಗ ನನಗೆ ಯಾವುದೇ ಭಯವಿಲ್ಲ. ಆದರೆ ಆಗ ನಾನೊಬ್ಬಳೇ ಇದ್ದೆ. ಅದಕ್ಕೇ ಬೇಗ ಹೊರಟೆ. ಮುಂಬೈ ಘಟನೆಯ ನಂತರ ನಾನು ಒಬ್ಬಂಟಿಯಾಗಿರುವಾಗ ಬಹಳ ಎಚ್ಚರಿಕೆಯಿಂದ ಇರುತ್ತೇನೆ. ಅವರಿಗೆ ಫೋಟೋ ಕೊಡಬೇಕು ಅನ್ನಿಸಿತು. ಆದರೆ ನನಗೆ ಧೈರ್ಯ ಬರಲಿಲ್ಲ. ನಾನು ಭದ್ರತಾ ಸಿಬ್ಬಂದಿಯನ್ನು ಸಹಾಯಕ್ಕಾಗಿ ಕರೆದಿದ್ದೇನೆ. ಇದನ್ನು ಓದುವ ಯಾರಾದರೂ ನನ್ನಲ್ಲಿ ಸೆಲ್ಫಿ ಕೇಳಿದ್ದರೇ ಕ್ಷಮಿಸಿ. ಅವರಿಗೆ ಬೇಸರ ತರುವುದು ನನ್ನ ಉದ್ದೇಶವಲ್ಲ. ನಿಜವಾಗಿಯೂ ಕ್ಷಮಿಸಿ. ಒಂದು ದಿನ ನಾನು ನಿಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತೇನೆ' ಎಂದು ಬರೆದುಕೊಂಡಿದ್ದಾರೆ.. 

ಇತ್ತೀಚೆಗೆ ರವೀನಾಗೆ ಕಾರು ಅಪಘಾತವಾಗಿತ್ತು. ಆಕೆಯ ಕಾರು ಚಾಲಕನ ಮೇಲೆ ಕೆಲವರು ಹಲ್ಲೆಗೆ ಯತ್ನಿಸಿದ ಘಟನೆ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ನಮ್ಮ ಮೇಲೆ ಹಲ್ಲೆ ಮಾಡಬೇಡಿ ಎಂದು ರವೀನಾ ಮನವಿ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಆದರೆ ಆ ವೇಳೆ ರವೀನಾ ಕುಡಿದು ಅತಿರೇಕವಾಗಿ ವಾಹನ ಚಲಾಯಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆದರೆ ಆಕೆ ಮದ್ಯ ಸೇವಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಜೂನ್ ತಿಂಗಳಿನಲ್ಲಿ ನಡೆದಿತ್ತು.. 

ಇದನ್ನೂ ಓದಿ-ಶಾಸಕ ಮುನಿರತ್ನ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿ, ಶಾಸಕ ಸ್ಥಾನದಿಂದ ಅನರ್ಹಗೊಳಿಸಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News