ಸೆಟ್ ನಲ್ಲಿ ಬಂತು ಅವಮಾನಕರ ಮಾತು ! ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ ಹೊರ ನಡೆದ ರಕ್ಷಿತಾ ಪ್ರೇಮ್

ರಕ್ಷಿತಾ ಪ್ರೇಮ್ ಶೂಟಿಂಗ್ ಸೆಟ್ ನಲ್ಲಿ ತನಗಾದ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾರೆ.   

Written by - Ranjitha R K | Last Updated : Sep 12, 2024, 01:58 PM IST
  • ಕ್ರೇಜಿ ಕ್ವೀನ್ ರಕ್ಷಿತಾ ಇಂದು ನಟನೆಯಿಂದ ದೂರ ಉಳಿದಿರಬಹುದು.
  • ಒಂದು ಕಾಲದಲ್ಲಿ ಅವರು ನಟಿಸಿದ ಚಿತ್ರಗಳೆಲ್ಲಾ ಸೂಪರ್ ಹಿಟ್.
  • ರಕ್ಷಿತಾ ಇನ್ನೂ ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಸೆಟ್ ನಲ್ಲಿ ಬಂತು ಅವಮಾನಕರ ಮಾತು ! ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ ಹೊರ ನಡೆದ ರಕ್ಷಿತಾ ಪ್ರೇಮ್  title=

ಬೆಂಗಳೂರು :ಕ್ರೇಜಿ ಕ್ವೀನ್ ರಕ್ಷಿತಾ ಇಂದು ನಟನೆಯಿಂದ ದೂರ ಉಳಿದಿರಬಹುದು.ಆದರೆ ಒಂದು ಕಾಲದಲ್ಲಿ ಅವರು ನಟಿಸಿದ ಚಿತ್ರಗಳೆಲ್ಲಾ ಸೂಪರ್ ಹಿಟ್. ಇದೇ ಕಾರಣಕ್ಕೆ ರಕ್ಷಿತಾ ಇನ್ನೂ ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ರಕ್ಷಿತಾ ಈಗ ಸಿನಿಮಾಗಳಲ್ಲಿ ನಟಿಸುತ್ತಿಲ್ಲವಾದರೂ, ಖಾಸಗಿ ವಾಹಿನಿಗಳ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ರಕ್ಷಿತಾ ನೇರ ನುಡಿಯ ನಟಿ. ಇದ್ದದ್ದನ್ನು ಇದ್ದ ಹಾಗೆ ನೇರಾ ನೇರ ಮಾತನಾಡುವ ಮಹಿಳೆ.ಅವರು ಇತ್ತೀಚೆಗೆ ಜೀವನದ ಮರೆಯಲಾಗದ ಘಟನೆಯನ್ನು ಹೊರ ಹಾಕಿದ್ದಾರೆ. ಸೆಟ್ ನಲ್ಲಿ ಆಡಿರುವ ಮಾತುಗಳಿಂದ ಆದ ಅವಮಾನದ ಬಗ್ಗೆ ಹೇಳಿದ್ದಾರೆ. ಅಲ್ಲದೆ ಈ ಘಟನೆ ತನ್ನ ಜೀವನದಲ್ಲಿ ಎಂದಿಗೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎನ್ನುವುದನ್ನು ಕೂಡಾ ಕ್ರೇಜಿ ಕ್ವೀನ್ ಹೇಳಿದ್ದಾರೆ. 

ಇದನ್ನೂ ಓದಿ : ತಮಿಳು ನಟ ಜೀವಾ ಕಾರು ಅಪಘಾತ

ರಕ್ಷಿತಾ ತನ್ನ ತಂದೆಯನ್ನು ಕಳೆದುಕೊಂಡ ಸಂದರ್ಭದ ಬಗ್ಗೆ ಮಾತನಾಡಿದ್ದಾರೆ. ನಾನು ಯಾವತ್ತೂ ಅಷ್ಟು ಹತ್ತಿರದಿಂದ ಒಬ್ಬರ ಸಾವನ್ನು ನೋಡಿಯೇ ಇಲ್ಲ. ಅದು ಅತ್ಯಂತ ದುಃಖದ ದಿನಗಳಾಗಿತ್ತು ಎನ್ನುತಾರೆ ರಕ್ಷಿತಾ ಪ್ರೇಮ್. ಆದರೆ ತಂದೆ ತೀರಿಕೊಂಡ ಮೂರನೇ ದಿನಕ್ಕೆ ಹಾಲು ತುಪ್ಪ ನೆರವೇರಿಸಿದ ಬಳಿಕ ಶೂಟಿಂಗ್ ಗೆ ತೆರಳಿದ ವೇಳೆ ನಿರ್ದೇಶಕರೊಬ್ಬರು ಏನು ತಂದೆ ತೀರಿಕೊಂಡರೆ ನಾವೇನು ಶೂಟಿಂಗ್ ನಿಲ್ಲಿಸಬೇಕಾ? ನಿರ್ಮಾಪಕರ ಹಣ ಹೋಗುತಾ ಇಲ್ಲವಾ ? ಎಂದು ಮಾತನಾಡಿದ್ದಾರೆ. ಈ ಮಾತುಗಳನ್ನು ಕೇಳಿ ಅಲ್ಲಿ ನಿಲ್ಲುವುದಕ್ಕೆ ರಕ್ಷಿತಾಗೆ ಸಾಧ್ಯವಾಗಲೇ ಇಲ್ಲ. 

ಅದುವರೆಗೆ ಏನೇ ಆದರೂ, ಒಂದು ದಿನವೂ ಶೂಟಿಂಗ್ ಅನ್ನು ಅರ್ಧಕ್ಕೆ ಬಿಟ್ಟು ತೆರಳದ ರಕ್ಷಿತಾ,ಆ ದಿನ ಮಾತ್ರ ಸೆಟ್ ನಿಂದ ಅರ್ಧಕ್ಕೆ ಹೊರತು ಬಿಡುತ್ತಾರೆ. ನಿರ್ಮಾಪಕರಿಗೆ ಫೋನ್ ಮಾಡಿ ನನಗೆ ಶೂಟಿಂಗ್ ಮಾಡಲು ಆಗುತ್ತಿಲ್ಲ.ನಾನು ಸೆಟ್ ನಿಂದ ಹೊರಡುತ್ತಿದ್ದೇನೆ ಎಂದು ಹೇಳಿ ಹೊರ ನಡೆದೇ ಬಿಡುತ್ತಾರೆ. 

ಇದನ್ನೂ ಓದಿ : ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ 'ಚೌಕಿದಾರ್' ಸಿನಿಮಾ ಚಿತ್ರೀಕರಣ ನಡೆಸಿದ ರಥಾವರ ಡೈರೆಕ್ಟರ್!

ಈ ಎಲ್ಲಾ ವಿಚಾರಗಳ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರಕ್ಷಿತಾ,ಜೀವನದ ಕೆಲವೊಂದು ಕ್ಷಣಗಳಲ್ಲಿ ಕಟು ನಿರ್ಧಾರಗಳನ್ನು ತೆಗೆದುಕೊಳ್ಳಲೇ ಬೇಕಾಗುತ್ತದೆ. ಕೆಲವೊಂದು ಘಟನೆಗಳು ನಾವು ಎಷ್ಟು ಗಟ್ಟಿ ಎನ್ನುವುದನ್ನು ಕೂಡಾ ತೋರಿಸುತ್ತವೆ ಎಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News