ಬುದ್ಧ ಪೂರ್ಣಿಮಾದ ಮಹತ್ವ ಮತ್ತು ವಿಶ್ವದೆಲ್ಲೆಡೆ ಬೆಳೆದು ಬಂದ ಬಗೆ

ಬೌದ್ಧ ಧರ್ಮದ ಸಂಸ್ಥಾಪಕ ಗೌತಮ್ ಬುದ್ಧನ ಜನ್ಮದಿನವನ್ನು ಬುದ್ಧ ಪೂರ್ಣಿಮಾ ಅಥವಾ ಬುದ್ಧ ಜಯಂತಿ ಎಂದು ವಿಶ್ವದಾದ್ಯಂತ  ಆಚರಿಸಲಾಗುತ್ತದೆ. ಇದು ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಖ್ ತಿಂಗಳಲ್ಲಿ (ಏಪ್ರಿಲ್ / ಮೇ) ಹುಣ್ಣಿಮೆಯ ದಿನದಂದು ಬರುತ್ತದೆ. ಈ ವರ್ಷ ಬುದ್ಧ ಪೂರ್ಣಿಮಾವನ್ನು ಮೇ 7 ರಂದು ಆಚರಿಸಲಾಗುತ್ತದೆ.

Last Updated : May 7, 2020, 12:09 AM IST
ಬುದ್ಧ ಪೂರ್ಣಿಮಾದ ಮಹತ್ವ ಮತ್ತು ವಿಶ್ವದೆಲ್ಲೆಡೆ ಬೆಳೆದು ಬಂದ ಬಗೆ  title=
Photo Courtsey : Manjunath Naragund

ನವದೆಹಲಿ: ಬೌದ್ಧ ಧರ್ಮದ ಸಂಸ್ಥಾಪಕ ಗೌತಮ್ ಬುದ್ಧನ ಜನ್ಮದಿನವನ್ನು ಬುದ್ಧ ಪೂರ್ಣಿಮಾ ಅಥವಾ ಬುದ್ಧ ಜಯಂತಿ ಎಂದು ವಿಶ್ವದಾದ್ಯಂತ  ಆಚರಿಸಲಾಗುತ್ತದೆ. ಇದು ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಖ್ ತಿಂಗಳಲ್ಲಿ (ಏಪ್ರಿಲ್ / ಮೇ) ಹುಣ್ಣಿಮೆಯ ದಿನದಂದು ಬರುತ್ತದೆ. ಈ ವರ್ಷ ಬುದ್ಧ ಪೂರ್ಣಿಮಾವನ್ನು ಮೇ 7 ರಂದು ಆಚರಿಸಲಾಗುತ್ತದೆ.

ಥೆರಾವಾ ಬೌದ್ಧಧರ್ಮದಲ್ಲಿ, ಬುದ್ಧ ರಾಜಕುಮಾರ ಸಿದ್ಧಾರ್ಥ ಗೌತಮ (ಕ್ರಿ.ಪೂ. 563-483) ಆಗಿ ಜನಿಸಿದ ಬುದ್ಧನು ಬೋಧ್ ಗಯಾದಲ್ಲಿ ಮಹಾಬೋಧಿ ಮರದ ಕೆಳಗೆ ನಿರ್ವಾಣವನ್ನು (ಮೋಕ್ಷ) ಪಡೆದ ದಿನವೆಂದು ಸಹ ಆಚರಿಸಲಾಗುತ್ತದೆ. ವೆಸಾಕ್ ಹುಣ್ಣಿಮೆಯ ದಿನ ಬೌದ್ಧ ಕ್ಯಾಲೆಂಡರ್ನಲ್ಲಿ ಪ್ರಮುಖ ದಿನವಾಗಿದೆ. ಬುದ್ಧನ ಜ್ಞಾನೋದಯದ ನೆನಪಿಗಾಗಿ ಹಲವಾರು ಬೌದ್ಧರು ಪವಿತ್ರ ಮರದ ಬುಡದಲ್ಲಿ ನೀರು ಸುರಿಯಲು ಪಗೋಡಗಳಿಗೆ ಹೋಗುತ್ತಾರೆ.

ಬುದ್ಧ ಪೂರ್ಣಿಮಾ ಶ್ರೀಲಂಕಾ (ಇದನ್ನು ವೆಸಾಕ್ ಎಂದು ಕರೆಯಲಾಗುತ್ತದೆ), ಭಾರತ, ನೇಪಾಳ, ಭೂತಾನ್, ಬರ್ಮಾ, ಥೈಲ್ಯಾಂಡ್, ಟಿಬೆಟ್, ಚೀನಾ, ಕೊರಿಯಾ, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ, ಕಾಂಬೋಡಿಯಾ, ಸಿಂಗಾಪುರ,ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಬಹಳ ಆಡಂಬರ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಮತ್ತು ಆಚರಣೆಗಳು ದೇಶದಿಂದ ದೇಶಕ್ಕೆ ಬದಲಾಗುತ್ತವೆ.

ಈ ದಿನ ಬುದ್ಧನ ಜೀವನ ಮತ್ತು ಬೋಧನೆಗಳ ಕುರಿತು ಪ್ರವಚನ ಎಲ್ಲೆಡೆ ನಡೆಯುತ್ತವೆ. ಬುದ್ಧನ ಅನುಯಾಯಿಗಳು ಸಾಮಾನ್ಯವಾಗಿ ಬಿಳಿ ಬಣ್ಣವನ್ನು ಧರಿಸುತ್ತಾರೆ, ಮಾಂಸಾಹಾರಿ ಆಹಾರವನ್ನು ಸೇವಿಸುವುದಿಲ್ಲ ಮತ್ತು ಖೀರ್ ಅನ್ನು ವಿತರಿಸುತ್ತಾರೆ, ಬೌದ್ಧ ಧರ್ಮದ ಪ್ರಕಾರ, ಈ ದಿನ ಸುಜಾತಾ ಎಂಬ ಮಹಿಳೆ ಬುದ್ಧನಿಗೆ ಹಾಲು ಗಂಜಿ ಬಟ್ಟಲನ್ನು ಅರ್ಪಿಸಿದ್ದಳು ಎನ್ನುವ ಪ್ರತೀತಿ ಇದೆ.

ಭಗವಾನ್ ಬುದ್ಧನ ಪ್ರಮುಖ ಬೋಧನೆಗಳಲ್ಲಿ ಒಂದಾದ ಎಲ್ಲಾ ಜೀವಿಗಳ ಬಗ್ಗೆ ಅನುಭೂತಿ ಮತ್ತು ಸಹಾನುಭೂತಿಯ ಸಂಕೇತವಾಗಿ ಅನೇಕ ಅನುಯಾಯಿಗಳು ಈ ದಿನ ಪಂಜರದಲ್ಲಿರುವ ಪಕ್ಷಿಗಳನ್ನು ಮುಕ್ತಗೊಳಿಸುತ್ತಾರೆ.ಭಾರತದ ಉತ್ತರ ಪ್ರದೇಶದ ಸಾರಾನಾಥ್‌ನಲ್ಲಿ ಒಂದು ಉತ್ಸವವೇ ನಡೆಯುತ್ತದೆ, ಇದು ಬೌದ್ಧ ಯಾತ್ರಾ ಸ್ಥಳವಾದ ಬುದ್ಧನು ಜ್ಞಾನೋದಯ ಪಡೆದ ನಂತರ ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ್ದನೆಂದು ಹೇಳಲಾಗುತ್ತದೆ. ಮೆರವಣಿಗೆಯಲ್ಲಿ ಬುದ್ಧನ ಅವಶೇಷಗಳನ್ನು ಸಾರ್ವಜನಿಕ ಪ್ರದರ್ಶನಕ್ಕಾಗಿ ತೆರೆಯಲಾಗುತ್ತದೆ. ಅನೇಕ ಹಿಂದೂಗಳು ಬುದ್ಧನನ್ನು ವಿಷ್ಣುವಿನ ಒಂಬತ್ತನೇ ಅವತಾರವೆಂದು ನಂಬುತ್ತಾರೆ.

ಪ್ರತಿ ಹುಣ್ಣಿಮೆಯ ದಿನವು ಬೌದ್ಧರಿಗೆ ಶುಭ ದಿನವಾಗಿದೆ, ಆದರೆ ಎಲ್ಲಕ್ಕಿಂತ ಮೇ ತಿಂಗಳಲ್ಲಿ ಹುಣ್ಣಿಮೆಯ ದಿನ ಮುಖ್ಯವಾದುದು, ಏಕೆಂದರೆ ಬುದ್ಧನ ಜೀವನದಲ್ಲಿ ಮೂರು ಪ್ರಮುಖ ಘಟನೆಗಳು ನಡೆದ ದಿನ. ಮೊದಲನೆಯದಾಗಿ ರಾಜಕುಮಾರ ಸಿದ್ಧಾರ್ಥ ಮೇ ತಿಂಗಳ ಹುಣ್ಣಿಮೆಯ ದಿನದಂದು ಲುಂಬಿನಿಯಲ್ಲಿ ಜನಿಸಿದ್ದು. ಎರಡನೆಯದಾಗಿ, ಆರು ವರ್ಷಗಳ ನಂತರ, ಬೋಧಿ ಮರದ ನೆರಳಿನಲ್ಲಿ ಜ್ಞಾನೋದಯವನ್ನು ಪಡೆದು ಮೇ ಹುಣ್ಣಿಮೆಯ ದಿನದಂದು ಬೋಧ್ ಗಯಾದಲ್ಲಿ ಗೌತಮ್ ಬುದ್ಧನಾಗಿ ಪರಿವರ್ತನೆಯಾಗಿದ್ದು. ಹಾಗೂ ಮೂರನೆಯದಾಗಿ, ಸತ್ಯವನ್ನು ಬೋಧಿಸಿದ 45 ವರ್ಷಗಳ ನಂತರ ಎಂಭತ್ತು ವರ್ಷದವನಾಗಿದ್ದಾಗ, ಕುಸಿನಾರದಲ್ಲಿ, ಮೇ ಹುಣ್ಣಿಮೆಯ ದಿನದಂದು ಎಲ್ಲಾ ಆಸೆಗೆ ಕೊನೆಯಾದ ನಿಬ್ಬಾಣದಲ್ಲಿ ನಿಧನ ಹೊಂದಿರುವುದನ್ನು ಬ್ರಿಟಿಷ್ ಲೈಬ್ರರಿ ಬ್ಲಾಗ್ ಉಲ್ಲೇಖಿಸಿದೆ.

Trending News