ಸೆಕೆಂಡ್ ಹ್ಯಾಂಡ್ ಕಾರು-ಬೈಕ್ ಮಾರಾಟ ಮಾಡುವವನ ಕೈಯಲ್ಲಿ ಮಾರಕಾಸ್ತ್ರಗಳು: ಗಾಂಜಾ ಅಂಡ್ ಗನ್ ಸೀಜ್

Crime News:  ಅಂಗಡಿಯೊಂದರ ಒಳಗೆ ಅವಿತು ಕೂತಿದ್ದ ಸಮೀರ್‍ನ ಪೊಲೀಸರೇನೋ ಅರೆಸ್ಟ್ ಮಾಡಿ, ಸ್ಟೇಷನ್ ಗೇನೋ ಕರೆತಂದ್ರು. ಸ್ಟೇಷನ್‍ಗೆ ತಂದು ಆತನನ್ನ ಹುಡುಕಿದ್ರೆ ಸಿಕ್ಕಿದ್ದೆಲ್ಲವೂ ಮಾರಕಾಸ್ತ್ರ ವಸ್ತುಗಳೇ.  ಒಂದು ಹೈ-ಫೈ ಗನ್, ಫುಲ್ಲಿ ಲೋಡೇಡ್ ಮ್ಯಾಗ್ಜಿನ್, 10 ಜೀವಂತ ಗುಂಡುಗಳು. ಚಾಕು ಡ್ರ್ಯಾಗನ್. 

Written by - Yashaswini V | Last Updated : Oct 10, 2023, 06:59 AM IST
  • ನಡುರಸ್ತೆಯಲ್ಲಿ ಗನ್ ಇಟ್ಕೊಂಡು ಎಲ್ಲರಿಗೂ ಹೆದರುಸ್ತಿದ್ದ ಭೂಪನ ಹೆಸರು ಸಮೀರ್.
  • ಈತ ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರು ನಿವಾಸಿ.
  • ಮಾಡೋದು ಸೆಕೆಂಡ್ ಹ್ಯಾಂಡ್-ಕಾರು ಬೈಕ್ ಮಾರೋ ಕೆಲಸ.
ಸೆಕೆಂಡ್ ಹ್ಯಾಂಡ್ ಕಾರು-ಬೈಕ್ ಮಾರಾಟ  ಮಾಡುವವನ ಕೈಯಲ್ಲಿ ಮಾರಕಾಸ್ತ್ರಗಳು: ಗಾಂಜಾ ಅಂಡ್ ಗನ್ ಸೀಜ್  title=

Crime News: ಆತ ಸೆಕೆಂಡ್ ಹ್ಯಾಂಡ್ ಕಾರು-ಬೈಕ್ ಮಾರಾಟ ಮಾಡೋ ಹುಡ್ಗ. ಕಾರು-ಬೈಕ್ ಮಾರೋನ ಕೈನಲ್ಲಿ ಗನ್ ಹಾಗೂ ಜೀವಂತ ಗುಂಡುಗಳು. ರಸ್ತೆ ಮಧ್ಯೆ ಗನ್ ಇಟ್ಕೊಂಡು ಹೋಗೋರ್-ಬರೋರಿಗೆಲ್ಲಾ ಡಮ್ ಅನ್ನುಸ್ತೀನಿ ಅಂತ ಹೆದರುಸ್ತಿದ್ದ. ಗನ್ ನೋಡುತ್ತಿದ್ದಂತೆ ಜನ ಕೂಡ ಭಯಭೀತರಾಗಿದ್ರು. ಹುಡ್ಕೋಕ್ ಹೋದ ಪೊಲೀಸ್ರಿಗೂ ಚಳ್ಳೆ ಹಣ್ಣು ತಿನ್ಸಿ ಎಸ್ಕೇಪ್ ಆಗಿದ್ದ. ಸ್ಥಳೀಯರ ಸಹಾಯದಿಂದ ಹೇಗೋ ಆತನನ್ನ ಹುಡುಕಿದ ಪೊಲೀಸ್ರಿಗೆ ಸಿಕ್ಕಿದ್ದ ಗನ್, ಲೋಡೇಡ್ ಮ್ಯಾಗ್ಜಿನ್, 10 ಜೀವಂತ ಗುಂಡುಗಳು. ಚಾಕು, ಡ್ರ್ಯಾಗರ್. ಪೊಲೀಸ್ರು ಯಾರೋ ನೀನು ಅಂದಾಗ ಸಿಕ್ಕಿದ್ದು ಗಾಂಜಾ ಪೆಡ್ಲರ್‍ಗಳ ಮುಂಬೈ ಲಿಂಕ್. ಕಾಫಿನಾಡ ಖಾಕಿಗಳೀಗ ಗನ್ ಲಿಂಗ್ ಬೆನ್ನು ಹತ್ತಿದ್ದಾರೆ..... 

ನಡುರಸ್ತೆಯಲ್ಲಿ ಗನ್ ಇಟ್ಕೊಂಡು ಎಲ್ಲರಿಗೂ ಹೆದರುಸ್ತಿದ್ದ ಭೂಪನ ಹೆಸರು ಸಮೀರ್. ಈತ ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರು ನಿವಾಸಿ. ಮಾಡೋದು ಸೆಕೆಂಡ್ ಹ್ಯಾಂಡ್-ಕಾರು ಬೈಕ್ ಮಾರೋ ಕೆಲಸ. ಆದ್ರೆ, ಚಾಕು, ಡ್ರ್ಯಾಗರ್, ಗನ್, ಜೀವಂತ ಗುಂಡು ಇಟ್ಕೊಂಡು ಜನರಿಗೆ ಹೆದರಿಸ್ತಿದ್ದ. ಸ್ಥಳಿಯರು ಕಡೂರು ಪೊಲೀಸರಿಗೆ ಮಾಹಿತಿ ನೀಡಿದ್ರು. ಹುಡುಕೋಕೆ ಬಂದ ಪೊಲೀಸರಿಗೂ ಚಳ್ಳೆ ಹಣ್ಣು ತಿನ್ಸಿ ಎಸ್ಕೇಪ್ ಆಗಿದ್ದ. ಸ್ಥಳಿಯರು ಸರ್ ಇಲ್ಲಿದ್ದಾನೆ ಅಂತ ಹೇಗೋ ಜಾಗ ತೋರ್ಸಿದ್ರು. ಪೊಲೀಸರು ಹೋಗಿ ನೋಡಿದ್ರೆ ಅವರಿಗೇ ಶಾಕ್. ಅಂಗಡಿಯೊಂದರ ಒಳಗೆ ಅವಿತು ಕೂತಿದ್ದ ಸಮೀರ್‍ನ ಪೊಲೀಸರೇನೋ ಅರೆಸ್ಟ್ ಮಾಡಿ, ಸ್ಟೇಷನ್ ಗೇನೋ ಕರೆತಂದ್ರು. ಸ್ಟೇಷನ್‍ಗೆ ತಂದು ಆತನನ್ನ ಹುಡುಕಿದ್ರೆ ಸಿಕ್ಕಿದ್ದೆಲ್ಲವೂ ಮಾರಕಾಸ್ತ್ರ ವಸ್ತುಗಳೇ.  ಒಂದು ಹೈ-ಫೈ ಗನ್, ಫುಲ್ಲಿ ಲೋಡೇಡ್ ಮ್ಯಾಗ್ಜಿನ್, 10 ಜೀವಂತ ಗುಂಡುಗಳು. ಚಾಕು ಡ್ರ್ಯಾಗನ್. ಪೊಲೀಸರು ಇವೆಲ್ಲಾ ಇಟ್ಕೊಂಡು ಏನ್ ಮಾಡ್ತಿದ್ದೀಯಾ. ಎಲ್ಲಿಂದ ತಂದೆ ಅಂತ ಕೇಳ್ದಾಗ ಆತ ಹೇಳಿದ ಉತ್ತರ ನೋಡಿ ಕಡೂರು ಖಾಕಿಗಳೇ ಕಂಗಾಲಾಗಿದ್ರು. 

ಇದನ್ನೂ ಓದಿ- Bengaluru: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಕಂಪನಿಗೆ ಬೆಂಕಿ ಇಟ್ಟ ಉದ್ಯೋಗಿಗಳು!

ಇವ್ನ ಬಳಿ ಕೇವಲ ಇಷ್ಟೆ ವಸ್ತುಗಳು ಸಿಕ್ಕಿಲ್ಲ. ಶಿಕಾರಿಗೆ ಬೇಕಾದ ವಸ್ತುಗಳು ಸಿಕ್ಕಿವೆ. ಆತನನ್ನ ಅರೆಸ್ಟ್ ಮಾಡಿ ಸ್ಟೇಷನ್‍ಗೆ ತಂದ ಪೊಲೀಸರು ವಿಚಾರಿಸಿದ ವೇಳೆ ಮಹಾರಾಷ್ಟ್ರ ಮೂಲದ ಇಬ್ಬರು ಬೆಳಗಾವಿಯಿಂದ ಬಂದು ಗಾಂಜಾ ಕೊಡುತ್ತಿದ್ದರು. ಅವರಿಂದ ಮೊದಲು ಹಣ ಕೊಟ್ಟು ಗಾಂಜಾ ಖರೀದಿಸುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಗನ್ ಕೂಡ ಅವರಿಂದಲೇ ಖರೀದಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನ ಹಿನ್ನೆಲೆ ಕೆದಕಿದಾಗ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಆತನ ಮೇಲೆ ಗಾಂಜಾ ಇರುವುದು ಪತ್ತೆಯಾಗಿದೆ. ಇದೀಗ ಕಡೂರು ಖಾಕಿಗಳು ಗನ್ ಎಲ್ಲಿಂದ ಬಂತು, ಅದರ ಹಿನ್ನೆಲೆ ಏನೆಂದು ಎರಡು ತಂಡವಾಗಿ ತನಿಖೆ ಕೈಗೊಂಡಿದ್ದಾರೆ. ಆತನ ಬಳಿ ಶಿಕಾರಿ ವಸ್ತುಗಳು ಸಿಕ್ಕಿದ್ದರಿಂದ ಅರಣ್ಯ ಇಲಾಖೆಯಲ್ಲಿ ಅವನ ಮೇಲೆ ಯಾವುದಾದರೂ ಕೇಸ್ ಇದ್ಯಾ ಅಂತ ತನಿಖೆ ಮಾಡುತ್ತಿದ್ದಾರೆ.  

ಇದನ್ನೂ ಓದಿ- ಅತ್ತಿಬೆಲೆಯಲ್ಲಿ ಪಟಾಕಿ ದಾಸ್ತಾನು ಮಳಿಗೆಗೆ ಬೆಂಕಿ: ಸಾವಿನ ಸಂಖ್ಯೆ 12ಕ್ಕೆ ಏರಿಕೆ..!

ಒಟ್ಟಾರೆ, 25ರ ಯುವಕನ ಕೈನಲ್ಲಿ ಅಕ್ರಮ ಗನ್ ಪತ್ತೆಯಾಗಿರೋದು ಪೊಲೀಸರ ನಿದ್ದೆಯನ್ನಂತು ಕೆಡಿಸಿದೆ. ಪೊಲೀಸರು ಬಂಧಿಸಿದಾಗಲೂ ಗಾಂಜಾ ಮತ್ತಲ್ಲೇ ಇದ್ದ ಸಮೀರ್. ಗಾಂಜಾ ಕೇಸ್ ಒಂದೆಡೆಯಾದರೆ, ಗನ್ ಕೇಸ್ ಮತ್ತೊಂದೆಡೆ. ಗನ್ ಏಕೆ ಇಟ್ಕೊಂಡಿದ್ದ ಅನ್ನೋದು ಯಕ್ಷಪ್ರಶ್ನೆಯಾಗಿದೆ. ಇದೀಗ, ಆತನನ್ನ ಬಂಧಿಸಿರೋ ಪೊಲೀಸರು ಗನ್ ಎಲ್ಲಿಂದ ಬಂತು. ಕೊಟ್ಟವರು ಯಾರು. ಅವನು ಹೇಳಿದ್ದು ನಿಜವೋ... ಸುಳ್ಳೋ... ಏಕೆ ತಂದಿದ್ದ ಎಂಬೆಲ್ಲಾ ಹತ್ತಾರು ಆ್ಯಂಗಲ್‍ನಲ್ಲಿ ತನಿಖೆ ಕೈಗೊಂಡಿದ್ದಾರೆ. ಪೊಲೀಸರ ತನಿಖೆಯಲ್ಲಿ ಇನ್ಯಾವ ಅಘಾತಕಾರಿ ಅಂಶ ಹೊರಬರುತ್ತೋ ಕಾದುನೋಡ್ಬೇಕು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News