ಕಡಿಮೆ ಬೆಲೆಗೆ ದುಬೈ ಚಿನ್ನ ಕೊಡಿಸುವುದಾಗಿ ವಂಚನೆ : 80 ಲಕ್ಷ ಸುಲಿಗೆ ಮಾಡಿದ್ದ ಐವರ ಬಂಧನ

ಸಂಕೇತ್‌ ಆಗಾಗ ಬೆಂಗಳೂರಿನಲ್ಲಿರುವ ತಮ್ಮ ಅಕ್ಕನ ಬಗ್ಗೆ ಹೋಗಿ ಬರುತ್ತಿದ್ದ.‌ ಈ ವೇಳೆ ಕರೀಂಖಾನ್ ಎಂಬುವರ ಪರಿಚಯವಾಗಿತ್ತು. ಸಂಕೇತ್‌ನ ವೃತ್ತಿ ಬಗ್ಗೆ ತಿಳಿದುಕೊಂಡು ಕರೀಂಖಾನ್‌ ತನ್ನ ಅಳಿಯ ದುಬೈನಿಂದ ಕಡಿಮೆ ಬೆಲೆಗೆ ಚಿನ್ನ ತಂದು ಮಾರಾಟ ಮಾಡ್ತಾನೆ. ನಿಮಗೆ ಬೇಕಾದರೆ ಖರೀದಿಸಿ ಸುಲಭವಾಗಿ ಹಣ ಸಂಪಾದನೆ ಮಾಡಬಹುದು ಎಂದು ಆಸೆ ಹುಟ್ಟಿಸಿದ್ದ.‌

Written by - VISHWANATH HARIHARA | Edited by - Krishna N K | Last Updated : Dec 19, 2023, 06:11 PM IST
  • ಕಡಿಮೆ ಬೆಲೆಗೆ ಚಿನ್ನ ತರಿಸಿಕೊಡುವುದಾಗಿ ವಂಚನೆ
  • ಮಚ್ಚಿನಿಂದ ಹಲ್ಲೆ ಮಾಡಿ 80 ಲಕ್ಷ ಸುಲಿಗೆ
  • ಐವರು ಆರೋಪಿಗಳನ್ನು ಹಡೆಮುರಿ ಕಟ್ಟಿದ ಪೊಲೀಸ್‌
 ಕಡಿಮೆ ಬೆಲೆಗೆ ದುಬೈ ಚಿನ್ನ ಕೊಡಿಸುವುದಾಗಿ ವಂಚನೆ : 80 ಲಕ್ಷ ಸುಲಿಗೆ ಮಾಡಿದ್ದ ಐವರ ಬಂಧನ title=

ಬೆಂಗಳೂರು : ದುಬೈನಿಂದ ಕಡಿಮೆ ಬೆಲೆಗೆ ಚಿನ್ನ ತರಿಸಿಕೊಡುವುದಾಗಿ ವ್ಯಕ್ತಿಯೋರ್ವನನ್ನ ನಂಬಿಸಿ ಆತನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ 80 ಲಕ್ಷ ಸುಲಿಗೆ ಮಾಡಿ ಪರಾರಿಯಾಗಿದ್ದ ಐವರು ಆರೋಪಿಗಳನ್ನ ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ.

ಕೆಜಿಎಫ್‌ನ ರಾಬರ್ಟ್ ಸನ್ ಪೇಟೆಯ ಸಂಕೇತ್ ಜೈನ್ ಎಂಬುವರು ಹಣ ಕಳೆದುಕೊಂಡಿದ್ದು, ಸಧ್ಯ ಇವರು ನೀಡಿದ ದೂರಿನ ಮೇರೆಗೆ ಮೊಹಮ್ಮದ್ ರಿಜ್ವಾನ್, ಇರ್ಫಾನ್‌, ಸತೀಶ್, ದಿವಾಕರ್, ಆರ್ಶಫ್ ಎಂಬುವರನ್ನ ಪೊಲೀಸರು ಬಂಧಿಸಿ 55 ಲಕ್ಷ ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಸಂಕೇತ್ ತಂದೆ ಕೆಜಿಎಫ್‌ನಲ್ಲಿ ಕಳೆದ 25 ವರ್ಷಗಳಿಂದ ಚಿನ್ನ-ಬೆಳ್ಳಿ ಪಾಲಿಶ್ (ಪಾನ್ ಬ್ರೋಕರ್) ಅಂಗಡಿ ಇಟ್ಟುಕೊಂಡಿದ್ದರು‌. ಹೀಗಾಗಿ ಚಿನ್ನ ವ್ಯಾಪಾರ ಬಗ್ಗೆ ಸಂಕೇತ್ ಜ್ಞಾನ ಹೊಂದಿದ್ದ. 

ಇದನ್ನೂ ಓದಿ: ಮೈಸೂರಿನಲ್ಲಿ ಭ್ರೂಣ ಲಿಂಗ ಪತ್ತೆ, ಹತ್ಯೆ ಪ್ರಕರಣ

ಸಂಕೇತ್‌ ಆಗಾಗ ಬೆಂಗಳೂರಿನಲ್ಲಿರುವ ತಮ್ಮ ಅಕ್ಕನ ಬಗ್ಗೆ ಹೋಗಿ ಬರುತ್ತಿದ್ದ.‌ ಈ ವೇಳೆ ಕರೀಂಖಾನ್ ಎಂಬುವರ ಪರಿಚಯವಾಗಿತ್ತು. ಸಂಕೇತ್‌ನ ವೃತ್ತಿ ಬಗ್ಗೆ ತಿಳಿದುಕೊಂಡು ಕರೀಂಖಾನ್‌ ತನ್ನ ಅಳಿಯ ದುಬೈನಿಂದ ಕಡಿಮೆ ಬೆಲೆಗೆ ಚಿನ್ನ ತಂದು ಮಾರಾಟ ಮಾಡ್ತಾನೆ. ನಿಮಗೆ ಬೇಕಾದರೆ ಖರೀದಿಸಿ ಸುಲಭವಾಗಿ ಹಣ ಸಂಪಾದನೆ ಮಾಡಬಹುದು ಎಂದು ಆಸೆ ಹುಟ್ಟಿಸಿದ್ದ.‌ ಆರಂಭದಲ್ಲಿ ಸಂಕೇತ್ ಲಘುವಾಗಿ ಪರಿಗಣಿಸಿದ್ದ ಆದರೆ ಕೆಲ ತಿಂಗಳ ಬಳಿಕ ಅಕ್ಕನ ಮದುವೆಗೆ ಹಣದ ಮುಗ್ಗಟ್ಟು ಎದುರಾಗಿದೆ. ಈ ವೇಳೆ‌ ಕರೀಂಖಾನ್ ಹೇಳಿದ ಮಾತನ್ನ‌ ನೆನಪಿಸಿಕೊಂಡು ಆತನ ಮೂಲಕ ಆರೋಪಿ ಮೊಹಮ್ಮದ್ ರಿಜ್ವಾನ್ ನನ್ನ ಸಂಪರ್ಕಿಸಿದ್ದರು. 

ಶಂಕರಮಠದಲ್ಲಿ ಜಿಮ್‌ವೊಂದರ ಮಾಲೀಕನಾಗಿರುವ ರಿಜ್ವಾನ್, ಸಂಬಂಧಿಕರೊಬ್ಬರು ದುಬೈನಲ್ಲಿದ್ದು ಅವರ ಮೂಲಕ ಒಂದೂವರೆ ಕೆ.ಜಿ ಚಿನ್ನ ನೀಡುತ್ತೇನೆ. ಇದಕ್ಕೆ 1 ಕೋಟಿ ರೂ.ಆಗಲಿದ್ದು ಹಣ ತರುವಂತೆ ಮೊಹಮ್ಮದ್ ಹೇಳಿದ್ದ. ಇದರಂತೆ ಮನೆಯಲ್ಲಿದ್ದ ದುಡ್ಡು ಸೇರಿ ಸಂಬಂಧಿಕರು ಹಾಗೂ ಸ್ನೇಹಿತರಿಂದ ಸಾಲ ಪಡೆದು 80 ಲಕ್ಷ ಹಣ ಒಗ್ಗೂಡಿಸಿ ಆರೋಪಿ ಸೂಚಿಸಿದ ಸ್ಥಳಕ್ಕೆ ಸಂಕೇತ್ ಹೋಗಿದ್ದರು.

ಇದನ್ನೂ ಓದಿ:ಬೆಳಗಾವಿಗೆ ಬಂದಿದ್ದ ರಾಜ್ಯಪಾಲರಿಂದ ಸರ್ಕಾರಕ್ಕೆ ಸಲಹೆ

ಈ ವೇಳೆ ಕಾರನ್ನ ಹತ್ತಿಸಿಕೊಂಡು ಹೋಗುವಾಗ ನಿರ್ಜನ ಪ್ರದೇಶದಲ್ಲಿ ಮೊಹಮ್ಮದ್ ಪೂರ್ವ ಸಂಚಿನಂತೆ ನಾಲ್ವರ ಗ್ಯಾಂಗ್ ಕಾರು ತಡೆಗಟ್ಟಿ ಮಚ್ಚಿನಿಂದ ಸಂಕೇತ್ ಮೇಲೆ ಹಲ್ಲೆ ಮಾಡಿ 80 ಲಕ್ಷ  ಹಣ ಕಸಿದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐವರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News