ಸಾಲ ತೀರಿಸಲು ಅಡ್ಡದಾರಿ : ರೈಲಿನಲ್ಲಿ ಮಹಿಳೆಯರ ಸರ ಎಗರಿಸುತ್ತಿದ್ದ ಆರೋಪಿಗಳು ಅಂದರ್‌

ಕಮಲನಾಥನ್ ಮೈ ತುಂಬಾ ಸಾಲ ಮಾಡಿಕೊಂಡಿದ್ದ ಮಾಡಿದ್ದ ಸಾಲ ತೀರಿಸಲು ಬೇರೆ ದಾರಿ ಕಾಣದೆ ಕಳ್ಳತನದ ಹಾದಿ ಹಿಡಿದಿದ್ದ. ನೆಟ್ಟಗೆ ದುಡಿದು ತಿಂದಿದ್ದರೆ ಇವತ್ತು ಹೀಗೆ ಆರೋಪಿಗಳ ಸ್ಥಾನದಲ್ಲಿ ನಿಲ್ತಿರ್ಲಿಲ್ಲ. ಆದ್ರೆ ಅಡ್ಡದಾರಿ ಹಿಡಿದು ರೈಲ್ವೇ ಪೊಲೀಸರ ಅತಿಥಿಗಳಾಗಿದ್ದಾರೆ‌. ಹೆಚ್ಚಿನ ವಿವರ ಇಲ್ಲಿದೆ ನೋಡಿ..

Written by - VISHWANATH HARIHARA | Edited by - Krishna N K | Last Updated : Feb 15, 2024, 10:42 PM IST
  • ಮಾಡಿಕೊಂಡಿದ್ದ ಸಾಲ ತೀರಿಸಲು ಅಡ್ಡದಾರಿ ಹಿಡಿದ ಖದೀಮರು
  • ರೈಲಿನಲ್ಲಿ ಮಹಿಳೆಯರ ಸರ ಎಗರಿಸುತ್ತಿದ್ದ ಆರೋಪಿ ಬಂಧನ
  • ಕೊನೆಗೂ ಖದೀಮರು ರೈಲ್ವೇ ಪೊಲೀಸರ ಕೈಗೆ ಲಾಕ್ ಆಗಿದ್ದಾರೆ
ಸಾಲ ತೀರಿಸಲು ಅಡ್ಡದಾರಿ : ರೈಲಿನಲ್ಲಿ ಮಹಿಳೆಯರ ಸರ ಎಗರಿಸುತ್ತಿದ್ದ ಆರೋಪಿಗಳು ಅಂದರ್‌ title=

ಬೆಂಗಳೂರು : ಅವ್ರು ರೈಲ್ವೇ ನಿಲ್ದಾಣವನ್ನೇ ಟಾರ್ಗೆಟ್ ಮಾಡ್ತಿದ್ರು. ರೈಲು ನಿಂತು ನಿಧಾನವಾಗಿ ಚಲಿಸ್ತಿದ್ದಂತೆ ವಾಪಸ್ಸು ಇಳಿದುಬಿಡ್ತಿದ್ರು. ಅರೇ ಇವ್ರುಗ್ಯಾಕೆ ಈ ಹುಚ್ಚಾಟ ಅಂದುಕೊಂಡ್ರಾ? ಅಲ್ಲೇ ಇರೋದು ನೋಡಿ ಟ್ವಿಸ್ಟ್. ಹೀಗೆ ಇಳಿದು ಹೋಗ್ತಿದ್ದ ಆಸಾಮಿಗಳನ್ನ ರೈಲಿನಲ್ಲಿದ್ದ ಜನರು ಕಣ್ಣು ಬಾಯಿ ಬಿಟ್ಟು ನೋಡ್ತಾ ನಿಂತಿದ್ರು. ಹೀಗೆ ಕಣ್ಣಾ ಮುಚ್ಚಾಲೆ ಆಟ ಆಡ್ತಿದ್ದ ಖದೀಮರು ರೈಲ್ವೇ ಪೊಲೀಸರ ಕೈಗೆ ಲಾಕ್ ಆಗಿದ್ದಾರೆ.

ಹೌದು.. ರೈಲು ನಿಧಾನವಾಗಿ ಚಲಿಸ್ತಿದ್ದಂತೆ ಆ್ಯಕ್ಟಿವ್ ಆದ ಖದೀಮ. ಇದ್ದಕ್ಕಿದ್ದಂತೆ ರೈಲಿನಿಂದ ಜಂಪ್ ಆಗಿ ಪರಾರಿಯಾಗಿದ್ದ. ಹೀಗೆ ಹೋದವನು ಬರಿಗೈನಲ್ಲಿ ಹೋಗಿದ್ದಲ್ಲ. ಲಕ್ಷಾಂತರ ರೂಪಾಯಿ ಬೆಲೆ ಬಾಳೊ ಚಿನ್ನದ ಸರದೊಂದಿಗೆ ಎಸ್ಕೇಪ್ ಆಗಿದ್ದ.

ಇದನ್ನೂ ಓದಿ:ಕೇಂದ್ರ ಸರ್ಕಾರದಿಂದ ತೆರಿಗೆ ಅನ್ಯಾಯವಾಗಿಲ್ಲ..! ಲೆಕ್ಕ ಸಮೇತ ಸರ್ಕಾರದ ವಿರುದ್ದ ಗುಡುಗಿದ ಹೆಚ್‌ಡಿಕೆ

ಈ ಮೇಲಿನ ಫೋಟೊದಲ್ಲಿ ಕಾಣ್ತಿರೊ ಆಸಾಮಿಗಳ ಹೆಸರು ಕಮಲನಾಥನ್ ಹಾಗೂ ಬಾಲಾಜಿ. ನೆಟ್ಟಗೆ ದುಡಿದು ತಿಂದಿದ್ದರೆ ಇವತ್ತು ಹೀಗೆ ಆರೋಪಿಗಳ ಸ್ಥಾನದಲ್ಲಿ ನಿಲ್ತಿರ್ಲಿಲ್ಲ. ಆದ್ರೆ ಅಡ್ಡದಾರಿ ಹಿಡಿದು ರೈಲ್ವೇ ಪೊಲೀಸರ ಅತಿಥಿಗಳಾಗಿದ್ದಾರೆ‌. ಅಷ್ಟಕ್ಕೂ ಈ ಕಮಲನಾಥನ್ ಮೈ ತುಂಬಾ ಸಾಲ ಮಾಡಿಕೊಂಡಿದ್ದ ಮಾಡಿದ್ದ ಸಾಲ ತೀರಿಸಲು ಬೇರೆ ದಾರಿ ಕಾಣದೆ ಕಳ್ಳತನದ ಹಾದಿ ಹಿಡಿದಿದ್ದ.

ಅದಕ್ಕಾಗಿ ಆಯ್ದುಕೊಂಡಿದ್ದೇ ರೈಲನ್ನ. ಹೌದು ಬೇಗ ಹತ್ತಲು ಹಾಗೂ ಇಳಿಯಲು ಅನುಕೂಲವಾಗುವಂತೆ 24 ವರ್ಷದ ಬಾಲಾಜಿಯನ್ನ ಪರಿಚಯ ಮಾಡಿಕೊಂಡಿದ್ದ. ಹೀಗೆ ಜೊತೆಯಾದ ಆರೋಪಿಗಳು ರೈಲು ನಿಲ್ದಾಣಕ್ಕೆ ರೈಲು ಬರ್ತಿದ್ದಂತೆ ರೈಲು ಏರ್ತಿದ್ರು.‌ ನಿಧಾನವಾಗಿ ಮೂವ್ ಆಗ್ತಿದ್ದಂತೆ ಮಹಿಳೆಯರ ಸರ ಕಸಿದು ರೈಲಿನಿಂದ ಇಳಿದು ಪರಾರಿ ಆಗ್ತಿದ್ರು. ಮಹಿಳೆಯರು ರೈಲಿನಿಂದ ಕೆಳಗಿಳಿಯಲು ಆಗದೆ ಪರದಾಟ ನಡೆಸಿ ದಾರಿ ಕಾಣದಂತೆ ಸುಮ್ಮನಾಗ್ತಿದ್ರು.

ಇದನ್ನೂ ಓದಿ:ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ

ಹೀಗೆ ಜನವರಿ 18 ರಂದು ಕುಪ್ಪಂ ನಿವಾಸಿಯಾದ ಸುಮಿತ್ರಾ ಎಂಬಾಕೆ‌ ಬಂಗಾರಪೇಟೆ ರೈಲ್ವೇ ನಿಲ್ದಾಣದಿಂದ ಕುಪ್ಪಂ ಗೆ ರೈಲಿನಲ್ಲಿ ಪ್ರಯಾಣ ಬೆಳೆಸ್ತಿದ್ರು. ಬೆಳಗ್ಗೆ 11.30 ಕ್ಕೆ ಬಿಸಾನತ್ತಂ ರೈಲು ನಿಲ್ದಾಣದಲ್ಲಿ ರೈಲು ಗಾಡಿ ನಿಂತಿದ್ದು, ಪುನಃ ನಿಧಾನವಾಗಿ ಚಲಿಸಲು ಪ್ರಾರಂಭಿಸಿದಾಗ ಬಾಲಾಜಿ ಮಹಿಳೆ ಕತ್ತಿನಲ್ಲಿದ್ದ 29 ಗ್ರಾಂ ತೂಕದ ಚಿನ್ನದ ಸರ ಕಿತ್ತು ರೈಲು ಗಾಡಿಯಿಂದ ಧುಮುಕಿ ಪರಾರಿಯಾಗಿದ್ದ. 

ಘಟನೆ ಸಂಬಂಧ ಬಂಗಾರ ಪೇಟೆ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಶೇಷ ತಂಡ ರಚಿಸಿ ತನಿಖೆಗೆ ಇಳಿದ ರೈಲ್ವೇ ಪೊಲೀಸರು ಫೆಬ್ರವರಿ 13 ರಂದು ಬಂಗಾರಪೇಟೆ ರೈಲ್ವೇ ನಿಲ್ದಾಣದಲ್ಲೇ ಅನುಮಾನಸ್ಪದವಾಗಿ ಓಡಾಡ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸರಗಳ್ಳತನ ಮಾಡಿದ್ದ ಕೃತ್ಯ ಬಯಲಾಗಿದೆ. ಅಲ್ಲದೇ ವಿಚಾರಣೆ ವೇಳೆ ಚಿತ್ತೂರು ಸೇರಿದಂತೆ ಹಲವೆಡೆ ಇದೇ ರೀತಿಯಾದ ಸರಗಳ್ಳತನ ಮಾಡಿದ್ದು ಬಯಲಾಗಿದ್ದು ಬಂಧಿತರಿಂದ 4.34 ಲಕ್ಷ ಮೌಲ್ಯದ 79 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ.

ಸದ್ಯ ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸ್ತಿರೊ ರೈಲ್ವೇ ಪೊಲೀಸರಿಗೆ ರೈಲು ಮಾತ್ರವಲ್ಲದೇ ದೇಶದ ಬೇರೆ ಬೇರೆ ಭಾಗದಲ್ಲಿಯೂ ಸರಗಳ್ಳತನ ಮಾಡಿರೊ ಬಗ್ಗೆ ಮಾಹಿತಿ ಸಿಕ್ಕಿದ್ದು. ತನಿಖೆ ಮುಂದುವರೆಸಿದ್ದಾರೆ. ಏನೇ ಮಾಡಿದ್ದ ಸಾಲ ತೀರಿಸಲು ಸರಿಯಾದ ದಾರಿಯಲ್ಲಿ ಹೋಗಿದ್ದಿದ್ರೆ ಒಳ್ಳೆ ಜೀವನ ನಡೆಸ್ಬೋದಿತ್ತು. ಆದ್ರೆ ಸರಗಳ್ಳತನದ ಹಾದಿ ಹಿಡಿದು ಕಂಬಿ ಹಿಂದೆ ಸೇರಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News