IRCTC Tickets Booking: ರೈಲು ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಯಲ್ಲಿ ಬದಲಾವಣೆ, ಈಗ ಟಿಕೆಟ್ ಬುಕಿಂಗ್‌ಗೆ ಈ ದಾಖಲೆಗಳು ಅತ್ಯಗತ್ಯ

IRCTC Booking Update: ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಲು ಈಗ ನಿಮಗೆ ಕೆಲವು ವಿಶೇಷ ದಾಖಲೆಗಳು ಬೇಕಾಗಬಹುದು. ಟಿಕೆಟ್ ಬುಕಿಂಗ್ ನಿಯಮದಲ್ಲಿ ಐಆರ್‌ಸಿಟಿಸಿ ಮಾಡಲಿರುವ ಬದಲಾವಣೆಗಳ ಬಗ್ಗೆ ತಿಳಿಯಿರಿ...

Written by - Yashaswini V | Last Updated : Sep 11, 2021, 10:30 AM IST
  • ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸುವ ವಿಧಾನ ಬದಲಾಗಲಿದೆ!
  • ವ್ಯವಸ್ಥೆಯಿಂದ ದಲ್ಲಾಳಿಗಳನ್ನು ಹೊರತರಲು ಸಿದ್ಧತೆ
  • ಐಆರ್‌ಸಿಟಿಸಿ ಈಗ ಆಧಾರ್, ಪ್ಯಾನ್ ಅನ್ನು ಕಡ್ಡಾಯಗೊಳಿಸಬಹುದು
IRCTC Tickets Booking: ರೈಲು ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಯಲ್ಲಿ ಬದಲಾವಣೆ, ಈಗ ಟಿಕೆಟ್ ಬುಕಿಂಗ್‌ಗೆ ಈ ದಾಖಲೆಗಳು ಅತ್ಯಗತ್ಯ title=
IRCTC Booking Update

IRCTC Booking Update: ನೀವು ರೈಲಿನಲ್ಲಿ ಪ್ರಯಾಣಿಸಲು ರೈಲು ಟಿಕೆಟ್ ಬುಕಿಂಗ್ ಮಾಡಲು ಯೋಚಿಸುತ್ತಿದ್ದರೆ ಒಂದು ಐಆರ್‌ಸಿಟಿಸಿ ಖಾತೆಯಿಂದ ಒಂದು ತಿಂಗಳಲ್ಲಿ 6 ಟಿಕೆಟ್‌ಗಳನ್ನು ಮಾತ್ರ ಬುಕ್ ಮಾಡಬಹುದು. ಇದಕ್ಕಿಂತ ಹೆಚ್ಚಿನ ಟಿಕೆಟ್‌ಗಳನ್ನು ಬುಕ್ ಮಾಡಲು ನೀವು ನಿಮ್ಮ ಖಾತೆಯಲ್ಲಿ ಆಧಾರ್‌ ಸಂಖ್ಯೆಯನ್ನೂ ನೋಂದಾಯಿಸಿಕೊಳ್ಳಬೇಕು.  ಆದರೆ ಈಗ ಟಿಕೆಟ್ ಬುಕ್ ಮಾಡುವ ವಿಧಾನ ಬದಲಾಗಲಿದೆ. ಈಗ ಕೇವಲ ಒಂದೇ ಒಂದು ಟಿಕೆಟ್ ಬುಕ್ ಮಾಡಲೂ ಕೂಡ ಆಧಾರ್ ವಿವರಗಳನ್ನು ಕೇಳಬಹುದು.

ಐಆರ್‌ಸಿಟಿಸಿಯಿಂದ ಹೊಸ ಟಿಕೆಟ್ ಬುಕಿಂಗ್ ವ್ಯವಸ್ಥೆ : 
ಐಆರ್‌ಸಿಟಿಸಿ ಈಗ ಟಿಕೆಟ್ ಬುಕಿಂಗ್ ಪ್ರಕ್ರಿಯೆಯನ್ನು (Train Ticket Booking Process) ಬದಲಿಸಲು ಸಿದ್ಧತೆ ನಡೆಸಿದೆ. ಮುಂದಿನ ಬಾರಿ ನೀವು ಆನ್‌ಲೈನ್‌ನಲ್ಲಿ ಒಂದೇ ರೈಲ್ವೆ ಟಿಕೆಟ್ ಅನ್ನು ಬುಕ್ ಮಾಡಲು ಹೋದಾಗ ಕೂಡ ಐಆರ್‌ಸಿಟಿಸಿ ನಿಮಗೆ ಪ್ಯಾನ್, ಆಧಾರ್ ಅಥವಾ ಪಾಸ್‌ಪೋರ್ಟ್ ಮಾಹಿತಿಯನ್ನು ಕೇಳಬಹುದು. ವಾಸ್ತವವಾಗಿ, ರೈಲ್ವೆ ಟಿಕೆಟ್ ದಲ್ಲಾಳಿಗಳನ್ನು ಟಿಕೆಟ್ ಬುಕಿಂಗ್ ವ್ಯವಸ್ಥೆಯಿಂದ ಹೊರಗಿಡಲು ಐಆರ್‌ಸಿಟಿಸಿ ಈ ಕ್ರಮಗಳನ್ನು ಕೈಗೊಳ್ಳಲಿದೆ. IRCTC ಹೊಸ ವ್ಯವಸ್ಥೆಯಲ್ಲಿ ವೇಗವಾಗಿ ಕೆಲಸ ಮಾಡುತ್ತಿದೆ. ಇದರಲ್ಲಿ ನೀವು ನಿಮ್ಮ ಆಧಾರ್-ಪ್ಯಾನ್ ಅನ್ನು ಲಿಂಕ್ ಮಾಡಬೇಕು. IRCTC ವೆಬ್‌ಸೈಟ್ ಅಥವಾ ಆಪ್ ಮೂಲಕ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲು, ನೀವು ಲಾಗ್ ಇನ್ ಮಾಡುವಾಗ ಆಧಾರ್, ಪ್ಯಾನ್ ಅಥವಾ ಪಾಸ್‌ಪೋರ್ಟ್ ಸಂಖ್ಯೆಯನ್ನು ನಮೂದಿಸಬೇಕಾಗಬಹುದು.

ಇದನ್ನೂ ಓದಿ- Indian Railways: ಇಂದಿನಿಂದ ಸ್ಲೀಪರ್ ಕ್ಲಾಸ್ ಟಿಕೆಟ್ ನಲ್ಲಿ AC ಕೋಚ್ ಪ್ರಯಾಣ, ಟಿಕೆಟ್ ದರ ಸೇರಿ ಇತರ ಡೀಟೇಲ್ ಇಲ್ಲಿದೆ

ರೈಲ್ವೆ ಟಿಕೆಟ್ ಅನ್ನು ಪ್ಯಾನ್, ಆಧಾರ್ ನೊಂದಿಗೆ ಲಿಂಕ್ ಮಾಡಬೇಕಾಗುತ್ತದೆ : 
ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮಹಾನಿರ್ದೇಶಕ ಅರುಣ್ ಕುಮಾರ್ ಅವರು ಐಆರ್‌ಸಿಟಿಸಿಯೊಂದಿಗೆ (IRCTC) ಗುರುತಿನ ದಾಖಲೆಗಳನ್ನು ಲಿಂಕ್ ಮಾಡುವ ಯೋಜನೆಯಲ್ಲಿ ರೈಲ್ವೇ (Indian Railways) ಕೆಲಸ ಮಾಡುತ್ತಿದೆ. ವಂಚನೆಯ ವಿರುದ್ಧದ ಕ್ರಮವು ಮಾನವ ಬುದ್ಧಿಮತ್ತೆಯನ್ನು ಆಧರಿಸಿದೆ, ಆದರೆ ಪರಿಣಾಮವು ಸಾಕಾಗುವುದಿಲ್ಲ ಎಂದು ಅವರು ಹೇಳಿದರು. ಅಂತಿಮವಾಗಿ ನಾವು ಅದನ್ನು ಪ್ಯಾನ್ (PAN), ಆಧಾರ್ (Aadhaar) ಅಥವಾ ಇತರ ಗುರುತಿನ ದಾಖಲೆಗಳೊಂದಿಗೆ ಲಿಂಕ್ ಮಾಡಲು ನಿರ್ಧರಿಸಿದ್ದೇವೆ. ಇದರೊಂದಿಗೆ ನಾವು ಟಿಕೆಟ್ ಬುಕ್ ಮಾಡುವ ವಂಚನೆಯನ್ನು ನಿಲ್ಲಿಸಬಹುದು ಎಂದವರು ಅಭಿಪ್ರಾಯಪಟ್ಟಿದ್ದಾರೆ.

'ವ್ಯವಸ್ಥೆ ಶೀಘ್ರದಲ್ಲೇ ಆರಂಭವಾಗಲಿದೆ' :
ನಾವು ಮೊದಲು ನೆಟ್ವರ್ಕ್ ಅನ್ನು ರಚಿಸಬೇಕಾಗಿದೆ ಎಂದು ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ. ಆಧಾರ್ ಪ್ರಾಧಿಕಾರದೊಂದಿಗೆ ನಮ್ಮ ಕೆಲಸ ಬಹುತೇಕ ಮುಗಿದಿದೆ. ಇಡೀ ವ್ಯವಸ್ಥೆಯು ಕೆಲಸ ಮಾಡಲು ಸಿದ್ಧವಾದ ತಕ್ಷಣ ನಾವು ಅದನ್ನು ಕಾರ್ಯಗತಗೊಳಿಸುವ ಮೂಲಕ ಬಳಸಲು ಪ್ರಾರಂಭಿಸುತ್ತೇವೆ. 2019 ರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ದಲ್ಲಾಳಿಗಳ ವಿರುದ್ಧ ಕ್ರಮವನ್ನು ಆರಂಭಿಸಲಾಗಿದೆ. ಅಂದಿನಿಂದ 14,257 ದಲ್ಲಾಳಿಗಳನ್ನು ಬಂಧಿಸಲಾಗಿದೆ. ಇಲ್ಲಿಯವರೆಗೆ, 28.34 ಕೋಟಿ ಮೌಲ್ಯದ ನಕಲಿ ಟಿಕೆಟ್‌ಗಳನ್ನು ಹಿಡಿಯಲಾಗಿದೆ ಎಂದು ಅರುಣ್ ಕುಮಾರ್ ಮಾಹಿತಿ ನೀಡಿದರು.

ಇದನ್ನೂ ಓದಿ- Cooking Oil Price: ಶೀಘ್ರದಲ್ಲೇ ಅಗ್ಗವಾಗಲಿದೆ ಅಡುಗೆ ಎಣ್ಣೆ ದರ, ಸಂಗ್ರಹಣೆಗೂ ಕಡಿವಾಣ

ಈ ವಿಷಯಗಳಿಗೆ ಸಂಬಂಧಿಸಿದ ದೂರುಗಳನ್ನು ನೀಡಬಹುದಾದ ರೈಲು ಸುರಕ್ಷಾ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. 6049 ನಿಲ್ದಾಣಗಳಲ್ಲಿ ಮತ್ತು ಎಲ್ಲಾ ಪ್ಯಾಸೆಂಜರ್ ರೈಲು ಕೋಚ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸುವ ಯೋಜನೆಯೂ ಇದೆ ಎಂದು ಅವರು ಹೇಳಿದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News