ಚುನಾವಣೆ ನಂತರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಬದಲಾಗಲಿದೆ ವೇತನ ಪಡೆಯುವ ನಿಯಮ

8th Pay Commission : 8 ನೇ ವೇತನ ಆಯೋಗದ ರಚನೆಯು ಖಂಡಿತವಾಗಿಯೂ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತು ವೇತನ ಪರಿಷ್ಕರಣೆ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.  

Written by - Ranjitha R K | Last Updated : May 2, 2024, 08:36 AM IST
  • 8ನೇ ವೇತನ ಆಯೋಗದ ರಚನೆಗೆ ಸಂಬಂಧಿಸಿದಂತೆ ಸಚಿವಾಲಯಕ್ಕೆ ಪತ್ರ
  • IRTSA ಮಾಡಿರುವ ಪ್ರಮುಖ ಬೇಡಿಕೆಗಳು ಯಾವುವು?
  • 8ನೇ ವೇತನ ಆಯೋಗದ ಅಗತ್ಯವೇನು?
ಚುನಾವಣೆ ನಂತರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಬದಲಾಗಲಿದೆ ವೇತನ ಪಡೆಯುವ ನಿಯಮ  title=

8th Pay Commission :ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8ನೇ ಕೇಂದ್ರ ವೇತನ ಆಯೋಗ ರಚನೆಗೆ ಸಂಬಂಧಿಸಿದ ಮಾಹಿತಿಗಾಗಿ ಬಹಳ ದಿನಗಳಿಂದ ಕಾತರದಿಂದ ಕಾಯುತ್ತಿದ್ದಾರೆ. 8ನೇ ವೇತನ ಆಯೋಗ ರಚನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಪತ್ರ ಕೂಡಾ ಬರೆಯಲಾಗಿದೆ. ಈ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಕಾಣಬಹುದು. 

ಭಾರತೀಯ ರೈಲ್ವೇ ತಾಂತ್ರಿಕ ಮೇಲ್ವಿಚಾರಕರ ಸಂಘ (IRTSA) 8ನೇ ವೇತನ ಆಯೋಗದ ರಚನೆಗೆ ಸಂಬಂಧಿಸಿದಂತೆ ಸಚಿವಾಲಯಕ್ಕೆ ಪತ್ರ ಬರೆದಿದೆ.ವಿವಿಧ ಬೇಡಿಕೆಗಳ ಜೊತೆಗೆ,ಪ್ರಸ್ತುತ ಇರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಅಗತ್ಯವನ್ನು ಪತ್ರದಲ್ಲಿ ಒತ್ತಿ ಹೇಳಲಾಗಿದೆ. 

ಇದನ್ನೂ ಓದಿ :  GST Collection record: ಏಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ರೂ. ಸಂಗ್ರಹ, ಕರ್ನಾಟಕದಲ್ಲಿ ಎಷ್ಟು ಗೊತ್ತಾ?

8ನೇ ವೇತನ ಆಯೋಗದ ರಚನೆ :
ಸಾಮಾನ್ಯವಾಗಿ,ವೇತನ, ಭತ್ಯೆ ಮತ್ತು ಇತರ ಸೌಲಭ್ಯಗಳು ಸೇರಿದಂತೆ ವೇತನದ ರಚನೆಯನ್ನು ನಿಯಂತ್ರಿಸುವ ನೀತಿಗಳಲ್ಲಿ ಮುಂದಿನ ಹಂತಗಳನ್ನು ಅಧ್ಯಯನ ಮಾಡಲು, ಪರಿಶೀಲಿಸಲು,ಸುಧಾರಿಸಲು ಮತ್ತು ಶಿಫಾರಸು ಮಾಡಲು ಹತ್ತು ವರ್ಷಗಳ ಮಧ್ಯಂತರದಲ್ಲಿ ಕೇಂದ್ರ ವೇತನ ಆಯೋಗವನ್ನು ರಚಿಸಲಾಗಿದೆ.3ನೇ, 4ನೇ ಮತ್ತು 5ನೇ ವೇತನ ಆಯೋಗಗಳು ಕೇಂದ್ರ ಸರ್ಕಾರಿ ನೌಕರರ ವೇತನ,ಭತ್ಯೆ ಮತ್ತು ಸೇವಾ ಷರತ್ತುಗಳ ಆವರ್ತಕ ಪರಿಶೀಲನೆಗಾಗಿ ಶಾಶ್ವತ ಪ್ರಕ್ರಿಯೆಗಳನ್ನು ಸ್ಥಾಪಿಸಲು ಶಿಫಾರಸು ಮಾಡಿರುವುದನ್ನು ಕೂಡಾ ಇಲ್ಲಿ ಗಮನಿಸಬಹುದು.

8ನೇ ವೇತನ ಆಯೋಗ: IRTSA ಮಾಡಿರುವ ಪ್ರಮುಖ ಬೇಡಿಕೆಗಳು ಯಾವುವು? :
- ಮೊದಲ ಬೇಡಿಕೆಯಲ್ಲಿ ಸಂಘವು ಹೊಸ ಕೇಂದ್ರ ವೇತನ ಆಯೋಗವನ್ನು ರಚಿಸಲು ಮತ್ತು ವಿವಿಧ ಗುಂಪುಗಳ ನೌಕರರ ವೇತನದಲ್ಲಿನ ಅಸಮಾನತೆ ಮತ್ತು ವ್ಯತ್ಯಾಸಗಳನ್ನು ಸರಿಪಡಿಸಲು ಸರ್ಕಾರವನ್ನು ವಿನಂತಿಸಿದೆ. 

- ವೇತನ ಮತ್ತು ಭತ್ಯೆಗಳು,ಕೆಲಸದ ಪರಿಸ್ಥಿತಿಗಳು,ಬಡ್ತಿ ಪ್ರಕ್ರಿಯೆಗಳು ಮತ್ತು ನಂತರದ ವರ್ಗೀಕರಣಕ್ಕೆ ಸಂಬಂಧಿಸಿದ ಎಲ್ಲಾ ವ್ಯತ್ಯಾಸಗಳನ್ನು ತೆರವುಗೊಳಿಸುವ ಪ್ರಯತ್ನದಲ್ಲಿ ವೇತನ ಸಮಿತಿಗೆ ಸಾಕಷ್ಟು ಸಮಯವನ್ನು ನಿಗದಿಪಡಿಸಲು ಒಕ್ಕೂಟ ಕೋರಿದೆ. 

8 ನೇ ವೇತನ ಆಯೋಗದ ರಚನೆಯು ಖಂಡಿತವಾಗಿಯೂ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತು ವೇತನ ಪರಿಷ್ಕರಣೆ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.

ಇದನ್ನೂ ಓದಿ :  ಭಾರೀ ಇಳಿಕೆಯಾಯಿತು ಗ್ಯಾಸ್ ಸಿಲಿಂಡರ್ ಬೆಲೆ ! ಇಂದಿನ ದರ ಎಷ್ಟಿದೆ ತಿಳಿಯಿರಿ

8ನೇ ವೇತನ ಆಯೋಗದ ಅಗತ್ಯವೇನು? :
ವಿವಿಧ ಗುಂಪುಗಳ ನಡುವಿನ ವೇತನ ವ್ಯತ್ಯಾಸ/ವಿರೋಧಾಭಾಸಗಳನ್ನು ಹೋಗಲಾಡಿಸಲು ಮೇಲೆ ವಿವರಿಸಿದ ಕಾರಣಗಳಿಗಾಗಿ ಹೊಸ ವೇತನ ಆಯೋಗವನ್ನು ರಚಿಸುವುದು ಅಗತ್ಯ ಎಂದು ಸಾರ್ವಜನಿಕ ಕುಂದುಕೊರತೆ ಇಲಾಖೆಯ ಪತ್ರದಲ್ಲಿ ತಿಳಿಸಲಾಗಿದೆ.ವೇತನ ಮತ್ತು ಭತ್ಯೆಗಳು, ಕೆಲಸದ ಪರಿಸ್ಥಿತಿಗಳು, ಬಡ್ತಿ ಪ್ರಕ್ರಿಯೆಗಳು, ಹುದ್ದೆಗಳ ವರ್ಗೀಕರಣಕ್ಕೆ ಸಂಬಂಧಿಸಿದ ಎಲ್ಲಾ ನೀತಿಗಳನ್ನು ಪರಿಶೀಲಿಸಲು ವೇತನ ಸಮಿತಿಗೆ ಹೆಚ್ಚಿನ ಸಮಯವನ್ನು ನೀಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಭವಿಷ್ಯದ ವಿವಾದಗಳನ್ನು ತಪ್ಪಿಸಲು 8ನೇ ಕೇಂದ್ರ ವೇತನ ಆಯೋಗವನ್ನು ತಕ್ಷಣವೇ ಸ್ಥಾಪಿಸಬೇಕು ಮತ್ತು ಪ್ರಸ್ತುತ ಇರುವ ಎಲ್ಲಾ ವ್ಯತ್ಯಾಸಗಳನ್ನು ತೆಗೆದುಹಾಕಲು ವಿವರವಾದ ಶಿಫಾರಸುಗಳನ್ನು ಮಾಡಲು ಸಾಕಷ್ಟು ಸಮಯವನ್ನು ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ :  ಭಾರೀ ಇಳಿಕೆಯಾಯಿತು ಗ್ಯಾಸ್ ಸಿಲಿಂಡರ್ ಬೆಲೆ ! ಇಂದಿನ ದರ ಎಷ್ಟಿದೆ ತಿಳಿಯಿರಿ

ಇನ್ನು ಜೂನ್ 4 ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ 8ನೇ ವೇತನ ಆಯೋಗದ ರಚನೆಯು ಖಂಡಿತವಾಗಿಯೂ ಹೊಸ ಸರ್ಕಾರ ಮಾಡುವ ಮೊದಲ ಕಾರ್ಯಗಳಲ್ಲಿ ಒಂದಾಗಿದೆ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News