ಸಣ್ಣ ವಿಚಾರಕ್ಕೆ ಮನಸ್ಥಾಪ: ಪ್ರೀತಿಸಿ ಮದುವೆಯಾಗಿದ್ದ ನವ ಜೋಡಿ ನೇಣಿಗೆ ಶರಣು

ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಅವರಿಬ್ಬರು ಕಳೆದ ನಾಲ್ಕು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಗೆಳೆಯರೊಟ್ಟಿಗೆ ಸೇರಿ ಸಬ್ ರೆಜಿಸ್ಟರ್ ಆಫಿಸ್ ನಲ್ಲಿ ಮದುವೆ ಕೂಡಾ ಆಗಿದ್ದರು. 

Written by - Yashaswini V | Last Updated : May 15, 2024, 04:38 PM IST
  • ನವ ವಿವಾಹಿತ ಜೋಡಿ ನೇಣಿಗೆ ಶರಣು
  • ವಿಜಯಪುರ ‌ನಗರದ ಹೊರ ಭಾಗದ ಶ್ರೀ ಸಿದ್ದೇಶ್ವರ ಬಡಾವಣೆಯ ಮನೆಯಲ್ಲಿ ನೇಣಿಗೆ ಶರಣು
  • ಮನೋಜಕುಮಾರ ಪೋಳ (30) ರಾಖಿ (23) ನೇಣಿಗೆ ಶರಣಾದ ಜೋಡಿ
ಸಣ್ಣ ವಿಚಾರಕ್ಕೆ ಮನಸ್ಥಾಪ: ಪ್ರೀತಿಸಿ ಮದುವೆಯಾಗಿದ್ದ ನವ ಜೋಡಿ ನೇಣಿಗೆ ಶರಣು title=

Vijayapura News: ನಾಲ್ಕು ವರ್ಷಗಳಿಂದ ಪ್ರೀತಿಸಿ, ಎರಡು ವರ್ಷದ ಹಿಂದೆ ಸಬ್ ರೆಜಿಸ್ಟರ್ ಆಫಿಸ್ ನಲ್ಲಿ ಮದುವೆಯಾಗಿ ಮೂರ್ನಾಲ್ಕು ತಿಂಗಳ ಹಿಂದಷ್ಟೇ ಅದ್ಧೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದ ಜೋಡಿಗಳು ನೇಣಿಗೆ ಶರಣಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ನಗರದ ಹೊರವಲಯದ ಸಿದ್ದೇಶ್ವರ ಬಡಾವಣೆಯ ಬಾಡಿಗೆ ಮನೆಯಲ್ಲಿ ಮನೋಜ್‌ ಪೋಳ್‌ (30) ಹಾಗೂ ರಾಖಿ (25) ಆತ್ಮಹತ್ಯೆಗೆ ಶರಣಾದ ನವ ವಿವಾಹಿತ ಜೋಡಿಗಳಾಗಿದ್ದಾರೆ.  

ಹೌದು, ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಅವರಿಬ್ಬರು ಕಳೆದ ನಾಲ್ಕು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಗೆಳೆಯರೊಟ್ಟಿಗೆ ಸೇರಿ ಸಬ್ ರೆಜಿಸ್ಟರ್ ಆಫಿಸ್ ನಲ್ಲಿ ಮದುವೆ ಕೂಡಾ ಆಗಿದ್ದರು. ಅಂತರ್ಜಾತಿ ವಿವಾಹ (Intercaste Marriage)ವಾಗಿದ್ದ ಈ ಜೋಡಿ ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ  ಕುಟುಂಬದವರ ಮನವೊಲಿಸಿ ಅದ್ದೂರಿಯಾಗಿ ರಿಸೆಸ್ಪನ್ ಕೂಡಾ ಮಾಡಿಕೊಂಡಿದ್ದರು. ಆದರೆ ನಿನ್ನೆ ತಡರಾತ್ರೀ ಸಣ್ಣ ವಿಚಾರಕ್ಕೆ ಮನಸ್ಥಾಪ ಉಂಟಾಗಿ ಇಬ್ಬರೂ ನೇಣಿಗೆ ಶರಣಾಗಿದ್ದಾರೆ. 

ಲಭ್ಯವಿರುವ ಮಾಹಿತಿಯ ಪ್ರಕಾರ, ಮನೋಜ್ ಪೋಳ್ ಅವರ ತಾಯಿ ಕೂಡ ಇವರೊಟ್ಟಿಗೆ ವಾಸವಿದ್ದರು. ಆದರೆ ನಿನ್ನೆ ಅವರು ಊರಿಗೆ ಹೋಗಿದ್ದರು. ಇಂದು ಮನೋಜ್ ಅವರ ತಾಯಿ‌ ಮರಳಿ ಮನೆಗೆ ಬಂದು ಬಾಗಿಲು ಬಡಿದಾಗ ಬಾಗಿಲನ್ನು ತೆರೆಯಲೇ ಇಲ್ಲ. ಈ ಬಗ್ಗೆ ಅಕ್ಕಪಕ್ಕದವರಿಗೆ ತಿಳಿಸಿದಾಗ ಅವರು ಬಂದು ಕಿಟಕಿಯಲ್ಲಿ ನೋಡಿದಾಗಲೇ ಪ್ರಕರಣ ಬೆಳಕಿಗೆ ಬಂದಿದೆ. 

ಇದನ್ನೂ ಓದಿ- ರೀಲ್ಸ್ ರಾಣಿ ಶೋಕಿಗೆ ಸಾಲ ಮಾಡಿದ್ಲು : ಸಾಲತೀರಿಸಲು ಮನೆಯೊಡತಿ ಕೊಲೆ ಮಾಡಿ ಅಂದರ್ ಆದ್ಲು

ಇನ್ನು ಕೆಲ ದಿನಗಳಿಂದ ಮನೋಜ್‌ ಹಾಗೂ ರಾಖಿ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ನಡೆದಿದ್ದವು ಎನ್ನಲಾಗುತ್ತಿದೆ. ಹೇಳಿಕೊಳ್ಳುವಂತ ತಕರಾರು ಏನು ಇರಲಿಲ್ಲ. ಆದರೆ, ನಿನ್ನೆ ಮನೆಯಲ್ಲಿ ಯಾರು ಇಲ್ಲದ ವೇಳೆ ಇಬ್ಬರ ನಡುವಿನ ಜಗಳ ತಾರಕ್ಕೇರಿದ್ದು, ಈ ಬಗ್ಗೆ ತಿಳಿದ ಮನೋಜ್‌ ಚಿಕ್ಕಪ್ಪ ಮನೆಗೆ ಬಂದು ಇಬ್ಬರಿಗು ಸಮಾಧಾನ ಪಡೆಸಿ ಬುದ್ದಿ ಹೇಳಿದ್ದರು. ಅಲ್ಲದೆ ರಾತ್ರಿ ಮುಂದೆ ಕುಳಿತು ಊಟ ಮಾಡಿಸಿ ಹೋಗಿದ್ದರಂತೆ. ಆದರೆ ತಡರಾತ್ರಿ ಇಬ್ಬರ ನಡುವೆ ಅದೇನಾಯ್ತೋ ಗೊತ್ತಿಲ್ಲ, ಬೆಳಿಗ್ಗೆ ಕುಟುಂಬಸ್ಥರು ಮನೆಗೆ ವಾಪಸ್‌ ಆದಾಗ ರೂಂಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ. 
ಘಟನೆ ನಡೆದ ಜಾಗದಲ್ಲಿ ಹಗ್ಗ ಕಟ್‌ ಆಗಿ ಮನೋಜ್‌ ಶವ ಕೆಳಗೆ ಬಿದ್ದಿದ್ರೆ, ರಾಖೀ ಶವ ನೇಣು ಬಿಗಿದ ಸ್ಥಿತಿಯಲ್ಲೆ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. 

ಇದನ್ನೂ ಓದಿ- ಕುಡಿದ ಮತ್ತಿನಲ್ಲಿ ಮನಸೋ ಇಚ್ಛೆ ಚಾಕುವಿನಿಂದ ಇರಿತ, ತರಕಾರಿ ವ್ಯಾಪಾರಿ ಮೇಲೆ ಗಂಭೀರ ಹಲ್ಲೆ

ಇಬ್ಬರು ನಡುವೆ ಪ್ರೀತಿ ಯಾವ ಮಟ್ಟಿಗೆ ಇತ್ತು ಎಂದ್ರೆ ಇಬ್ಬರು ಡಬ್‌ ಸ್ಮಾಶ್‌, ರೀಲ್ಸ್‌ ಗಳನ್ನ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಆಕ್ಟಿವ್‌ ಆಗಿದ್ದರು. ಲವ್‌ ಸಾಂಗ್‌ ಗಳಿಗೆ ಡಾನ್ಸ್‌ ಮಾಡಿ ರೀಲ್ಸ್‌ ಮಾಡ್ತಿದ್ರು. ಇನ್ಸ್ಟಾಗ್ರಾಂ, ಪೇಸ್ಬುಕ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ (Social Media) ತಮ್ಮ ವಿಡಿಯೋಗಳನ್ನ ಅಪ್ಲೋಡ್‌ ಮಾಡುತ್ತಿದ್ದರು. ಈ ಜೋಡಿ ಸಾವಿಗೆ ಶರಣಾಗಿರೋದು ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. 

ಈ ಪ್ರಕರಣದ ಬಗ್ಗೆ ಜಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಬಳಿಕ ಪತಿಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರ ನಿಖರ ಮಾಹಿತಿ ಹೊರಬೀಳಬೇಕಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News