ಸುಪ್ರಿಂಕೋರ್ಟ ಆದೇಶ ಕುದುರೆ ವ್ಯಾಪಾರಕ್ಕೆ ತಡೆಗಟ್ಟಲು ನೆರವಾಗಲಿದೆ- ಸಂತೋಷ್ ಹೆಗಡೆ

    

Last Updated : May 18, 2018, 07:14 PM IST
ಸುಪ್ರಿಂಕೋರ್ಟ ಆದೇಶ ಕುದುರೆ ವ್ಯಾಪಾರಕ್ಕೆ ತಡೆಗಟ್ಟಲು ನೆರವಾಗಲಿದೆ- ಸಂತೋಷ್ ಹೆಗಡೆ  title=

ಬೆಂಗಳೂರು: ವಿಶ್ವಾಸ ಮತಯಾಚನೆಯ ಕುರಿತಾಗಿ ಸುಪ್ರಿಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ ಎಂದು  ಮಾಜಿ ಕರ್ನಾಟಕ ಲೋಕಾಯುಕ್ತ ಸಂತೋಷ್ ಹೆಗಡೆ ತಿಳಿಸಿದ್ದಾರೆ.

ಸುಪ್ರಿಂಕೋರ್ಟ್ ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ  ಶನಿವಾರ ಸಂಜೆ 4 ಗಂಟೆಗೆ ವಿಶ್ವಾಸಮತ ಸಾಬೀತುಪಡಿಸುವಂತೆ ಕೋರಿದೆ. ಈ ಕುರಿತಾಗಿ ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಂತೋಷ ಹೆಗಡೆ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದು  ಸರಿಯಾದ ನಿರ್ಧಾರ. ಆದರೆ ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲಾವಧಿ ನೀಡಿದ್ದು ಖಂಡನೀಯ ಎಂದರು.

ರಾಜ್ಯಪಾಲರು ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್ ಸರಿಪಡಿಸಿದೆ. ಈ ತೀರ್ಪಿನಿಂದ ಶಾಸಕರ ಕುದುರೆ ವ್ಯಾಪಾರವನ್ನು ತಡೆಯಬಹುದು ಎಂದು ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

Trending News