Kangana Ranaut New Post - ಕೃಷಿ ಕಾನೂನು ಹಿಂಪಡೆದ ಬಳಿಕ ಕಂಗನಾ ರಣಾವತ್ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂದಿರಾಗಾಂಧಿ (Indira Gandhi)ಅವರನ್ನು ಸ್ಮರಿಸುತ್ತಾ ಕಂಗನಾ ಇದೀಗ ಮತ್ತೊಂದು ಗಂಭೀರ ಹೇಳಿಕೆ ನೀಡಿದ್ದಾರೆ.
Kangana Ranaut On Farm Laws Repeal - ಪ್ರಸ್ತುತ ಕಂಗನಾ ಅವರ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ, ಆದರೂ ಕೂಡ ಕಂಗನಾ ತನ್ನ Instagram ಕಥೆಗಳನ್ನು ಅಪ್ಲೋಡ್ ಮಾಡುವ ಮೂಲಕ ನಿರಂತರವಾಗಿ ವಿವಾದಕ್ಕೆ ಮಾರನವಾಗುವ ಹೇಳಿಕೆಗಳನ್ನು ನೀಡುತ್ತಿದ್ದಾಳೆ. ಕೃಷಿ ಕಾನೂನುಗಳನ್ನು ಹಿಂಪಡೆತದ ಕುರಿತು ಕಂಗನಾ ರಣವತ್ ಹೇಳಿದ್ದೇನು ನೋಡೋಣ ಬನ್ನಿ.
Kangana Ranaut New Statement - ಮಹಾತ್ಮಾ ಗಾಂಧಿ ವಿರುದ್ಧ ಕಂಗನಾ ರಣಾವತ್ (Kangana Ranaut) ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಕುರಿತು ಕಂಗನಾ ತನ್ನ Instagram ಸ್ಟೋರಿಗಳಲ್ಲಿ ದೀರ್ಘ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ. ತನ್ನ ಪೋಸ್ಟ್ ಗಳಲ್ಲಿ ಕಂಗನಾ ಮಹಾತ್ಮ ಗಾಂಧಿಯನ್ನು (Mahatma Gandhi) ಗುರಿಯಾಗಿಸಿದ್ದಾರೆ.
Kangana Ranaut Azadi Remark: ಮಹಾರಾಷ್ಟ್ರದ ಪುಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಬಾಲಿವುಡ್ ದಿಗ್ಗಜ ನಟ ವಿಕ್ರಮ್ ಗೋಖಲೆ , ಕಂಗನಾ ರಣಾವತ್ ಹೇಳಿದ್ದು ನಿಜ ಎಂದಿದ್ದಾರೆ.
Kangana Ranaut Open Challenge - ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯವನ್ನು 'ಭಿಕ್ಷೆ' (Kangana Ranaut On Freedom) ಎಂದು ಕರೆದು ಕೆಂಗಣ್ಣಿಗೆ ಗುರಿಯಾಗಿರುವ ನಟಿ ಕಂಗನಾ ರನೌತ್ (Kangana Ranaut), 1947 ರಲ್ಲಿ ನಡೆದ ಯುದ್ಧ ಯಾವುದು? ಎಂದು ಶನಿವಾರ ತಮ್ಮ ಟೀಕಾಕಾರರನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಯಾರಾದರೂ ತಮ್ಮ ಪ್ರಶ್ನೆಗೆ ಉತ್ತರಿಸಿದರೆ, ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.
Nawab Malik On Kangana Ranaut: ‘2014ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ’ ಎಂಬ ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranaut)) ಹೇಳಿಕೆ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಕಂಗನಾ ಅವರ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸುವುದು ಮಾತ್ರವಲ್ಲದೆ ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂಬ ಬೇಡಿಕೆಗಳೂ ಕೇಳಿಬರುತ್ತಿವೆ.
Padma Awards 2020: ಈ ವರ್ಷ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೇಶದ 119 ಗಣ್ಯ ವ್ಯಕ್ತಿಗಳಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. 119 ಸೆಲೆಬ್ರಿಟಿಗಳ ಪೈಕಿ 7 ಜನರಿಗೆ ಪದ್ಮವಿಭೂಷಣ, 10 ಜನರಿಗೆ ಪದ್ಮಭೂಷಣ ಮತ್ತು 102 ಜನರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಗೌರವಾನ್ವಿತ ಗಣ್ಯರ ಪೈಕಿ 29 ಮಂದಿ ಮಹಿಳೆಯರಿದ್ದಾರೆ.
ನಟಿ ಕಂಗನಾ ರನೌತ್ ಜಯಲಲಿತಾ ಜೀವನಚರಿತ್ರೆ ಕುರಿತ ಚಿತ್ರ 'ತಲೈವಿ' ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರುವುದರಿಂದಾಗಿ ಈಗ ಸಂತಸಗೊಂಡಿದ್ದಾರೆ.ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆಯಾದ ಎಎಲ್ ವಿಜಯ್ ಚಿತ್ರದ ಸಕಾರಾತ್ಮಕ ವಿಮರ್ಶೆಗಳನ್ನು ಅವರು ಆಗಾಗ್ಗೆ ತಮ್ಮ ಸಾಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜೀವನ ಆಧಾರಿತ ಚಿತ್ರ 'ತಲೈವಿ' COVID-19 ಸಾಂಕ್ರಾಮಿಕದ ದೃಷ್ಟಿಯಿಂದ ಸಾಕಷ್ಟು ಮುಂದೂಡಿಕೆಯ ನಂತರ ಚಿತ್ರವು ಅಂತಿಮವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಸೆಪ್ಟೆಂಬರ್ 10 ರಂದು ಥಲೈವಿ ಚಿತ್ರಮಂದಿರಗಳಲ್ಲಿ ಬಿಡುಗಡೆಗಾಗಿ ಕಾಯುತ್ತಿರುವ ಕಂಗನಾ ರಣಾವತ್, ಚಲನಚಿತ್ರ ಬಿಡುಗಡೆಗೆ ಮುನ್ನ ಚೆನ್ನೈನಲ್ಲಿರುವ ಜಯಲಲಿತಾ ಅವರ ಸ್ಮಾರಕಕ್ಕೆ ಭೇಟಿ ನೀಡಿದರು.
Photo Courtsey: Twitter
ಜಾವೇದ್ ಅಖ್ತರ್ ಸಲ್ಲಿಸಿದ ದೂರಿನ ಮೇರೆಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿನ ಕ್ರಿಮಿನಲ್ ಮಾನಹಾನಿ ವಿಚಾರಣೆಯನ್ನು ಪ್ರಶ್ನಿಸಿ ನಟ ಕಂಗನಾ ರನೌತ್ ಬಾಂಬೆ ಹೈಕೋರ್ಟ್ ಗೆ ಮೊರೆ ಹೋಗಿದ್ದಾರೆ.
ಬಾಲಿವುಡ್ ನಟಿ ಕಂಗನಾ ರನೌತ್ ಯಾವಾಗಲೂ ಒಂದಿಲ್ಲೊಂದು ಸುದ್ದಿಯಲ್ಲಿ ಸದಾ ಮುಳುಗಿರುತ್ತಾರೆ, ಈ ಹಿಂದೆ ತಾಪಸಿ ಪನ್ನು ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ಈಗ ಏಕಾಏಕಿ ಪ್ರಿಯಾಂಕಾ ಚೋಪ್ರಾ ವಿರುದ್ಧ ವ್ಯಂಗವಾಡಿದ್ದಾರೆ.
'Do Not Beg From Poor If Your Are Rich' - ಕಂಗನಾ ರಣಾವತ್ ಕೊವಿಡ್-19 ವರದಿ ಋಣಾತ್ಮಕ ಬಂದ ಬಳಿಕ ಕಂಗನಾ ಜನರೊಂದಿಗೆ ತನ್ನ ಕೊರೊನಾ ಮಹಾಮಾರಿಯ ಅನುಭವವನ್ನು ಹಂಚಿಕೊಂಡಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.