Aryan Khan ಬೆಂಬಲಕ್ಕೆ ನಿಂತ ಹೃತಿಕ್ ರೋಶನ್, ತಕ್ಷಣ ಪ್ರತಿಕ್ರಿಯಿಸಿದ ಕಂಗನಾ ರಣಾವತ್

ಆರ್ಯನ್ ಖಾನ್  ಬಂಧನವಾದ ದಿನದಿಂದಲೇ, ಅನೇಕ ಸೆಲೆಬ್ರಿಟಿಗಳು ಆರ್ಯನ್ ನನ್ನು ಸಮಾಧಾನಪಡಿಸುವ ಸಲುವಾಗಿ ನಿರಂತರ ಪೋಸ್ಟ್ ಗಳನ್ನೂ ಹಾಕುತ್ತಿದ್ದಾರೆ.   

Written by - Ranjitha R K | Last Updated : Oct 7, 2021, 06:20 PM IST
  • ಆರ್ಯನ್ ಖಾನ್ ಬೆಂಬಲಿಸಿದ ಹೃತಿಕ್
  • ತಕ್ಷಣ ಪೋಸ್ಟ್ ಹಾಕಿದ ಕಂಗನಾ
  • ಕಂಗನಾ ಪೋಸ್ಟ್ ನಲ್ಲಿ ಏನಿದೆ ಗೊತ್ತಾ ?
Aryan Khan ಬೆಂಬಲಕ್ಕೆ ನಿಂತ ಹೃತಿಕ್ ರೋಶನ್, ತಕ್ಷಣ ಪ್ರತಿಕ್ರಿಯಿಸಿದ ಕಂಗನಾ ರಣಾವತ್  title=
ಆರ್ಯನ್ ಖಾನ್ ಬೆಂಬಲಿಸಿದ ಹೃತಿಕ್ (file photo)

ನವದೆಹಲಿ : ಶಾರುಖ್ ಖಾನ್ ಪುತ್ರ ಆರ್ಯನ್ (Aryan khan) ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಮುಂಬೈನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ನಡೆದ ಎನ್ ಸಿಬಿ ದಾಳಿಯಲ್ಲಿ ಆರ್ಯನ್ ಖಾನ್ ಅವರನು ಬಂಧಿಸಲಾಗಿದೆ. ಅಲ್ಲದೆ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.  ಈ ಮಧ್ಯೆ, ಹೃತಿಕ್ ರೋಷನ್ (Hrithik Roshan) ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಆರ್ಯನ್ ಖಾನ್ ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ಆರ್ಯನ್ ಬೆಂಬಲವಾಗಿ ಹೃತಿಕ್ ಟ್ವೀಟ್ ಮಾಡಿರುವುದಕ್ಕೆ ಕಂಗನಾ  ಅಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಂಗನಾ ಪೋಸ್ಟ್ :
ಆರ್ಯನ್ ಖಾನ್ (Aryan Khan) ಬಂಧನವಾದ ದಿನದಿಂದಲೇ, ಅನೇಕ ಸೆಲೆಬ್ರಿಟಿಗಳು ಆರ್ಯನ್ ನನ್ನು ಸಮಾಧಾನಪಡಿಸುವ ಸಲುವಾಗಿ ನಿರಂತರ ಪೋಸ್ಟ್ ಗಳನ್ನೂ ಹಾಕುತ್ತಿದ್ದಾರೆ. ಇದೀಗ ಇದೇ ಸಾಲಿನಲ್ಲಿ ಹೃತಿಕ್ ರೋಷನ್ (Hrithik Roshan) ಕೂಡ ಮುಂದೆ ಬಂದಿದ್ದು,  ಆರ್ಯನ್ ಖಾನ್ ಗಾಗಿ ಸಾಮಾಜಿಕ ಮಾಧ್ಯಮದಲ್ಲಿ (Social media) ಪೋಸ್ಟ್ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ನಟಿ ಕಂಗನಾ ಹೃತಿಕ್ ರೋಷನ್ ಬಗ್ಗೆ ಸುದೀರ್ಘವಾದ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. 

ಇದನ್ನೂ ಓದಿ : ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ‘ರಾಮಾಯಣ’ದ ರಾವಣ ನಿಧನ

ಬೆಂಬಲ ನೀಡುವವರನ್ನು ಮಾಫಿಯಾ ಪಪ್ಪು ಎಂದು ಕರೆದ ಕಂಗನಾ :
'ಈಗ ಎಲ್ಲಾ ಮಾಫಿಯಾ ಪಪ್ಪು ಆರ್ಯನ್ ಖಾನ್ ಬೆಂಬಲಕ್ಕೆ ಬರುತ್ತಿದ್ದಾರೆ. ತಪ್ಪುಗಳಾಗುತ್ತವೆ. ಆದರೆ ಅದನ್ನು ವೈಭವೀಕರಿಸಬಾರದು. ಈ ಮಾತುಗಳು ಆರ್ಯನ್ ಗೆ ಹೊಸ ದಿಕ್ಕನ್ನು ನೀಡಬಹುದು. ಅಲ್ಲದೆ, ತಾವು ಮಾಡಿರುವ ಕೆಲಸದ ಪರಿಣಾಮಗಳೇನು ಎನ್ನುವುದು ಕೂಡಾ ಅರ್ಥವಾಗಿರಬಹುದು ಎಂದಿದ್ದಾರೆ Kangana Ranaut. ಅವನ ವಿರುದ್ಧ ತೆಗೆದುಕೊಳ್ಳುವ ಕ್ರಮಗಳಿಂದ  ಪಾಠ ಕಲಿಯಬಹುದು. ಇದರ ನಂತರ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಬಹುದು ಎಂದಿದ್ದಾರೆ.  

kangana

ಆರ್ಯನ್ ಖಾನ್  ಬಗ್ಗೆ ಹೇಳಿರುವುದೇನು ? 
ಆರ್ಯನ್ ಬಗ್ಗೆ ಯಾವುದೇ ರೀತಿಯ ಗಾಸಿಪ್ ಮಾಡದೇ ಇರುವುದು ಒಳ್ಳೆಯದು. ಮೊದಲೇ ಆತನ ಸಮಯ ಸರಿಯಾಗಿಲ್ಲ. ಇನ್ನು ಒಬ್ಬ ವ್ಯಕ್ತಿಯ ಆರೋಪ ಸಾಬೀತಾಗುವ  ಮೊದಲೇ ಆತನನ್ನು ಅಪರಾಧಿ ಎಂದು ಕರೆಯುವುದು ಇನ್ನು ಕೆಟ್ಟ ಸ್ಥಿತಿಯನ್ನು ಉಂಟು ಮಾಡುತ್ತದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ : Katrina Kaif: ಅಕ್ಷಯ್ ಕುಮಾರ್‌ಗೆ ರಾಖಿ ಕಟ್ಟಲು ಬಯಸಿದ್ದ ಕತ್ರಿನಾ ಕೈಫ್, ಕಾರಣ ಏನು ಗೊತ್ತಾ?

ಆರ್ಯನ್ ಗೆ ಬೆಂಬಲ ನೀಡಿದ ಹೃತಿಕ್ ರೋಷನ್ : 
ಹೃತಿಕ್ ರೋಷನ್ ಇತ್ತೀಚೆಗೆ ಆರ್ಯನ್ ಖಾನ್ ಪರವಾಗಿ ಒಂದು ದೊಡ್ಡ ಪೋಸ್ಟ್ ಬರೆದಿದ್ದಾರೆ.  ಜೀವನವು ಒಂದು ವಿಶಿಷ್ಟವಾದ ಪ್ರಯಾಣವಾಗಿದೆ. ಇದು ಅದ್ಭುತವಾಗಿದೆ ಏಕೆಂದರೆ ಇದು ಅನಿಶ್ಚಿತತೆಗಳಿಂದ ಕೂಡಿದೆ. ಆದರೆ ದೇವರು ಕರುಣಾಮಯಿ ಎನ್ನುವುದು ನೆನಪಿರಲಿ. ಆತ ಕಷ್ಟ ಮತ್ತು ಸವಾಲುಗಳನ್ನು ಬಲಿಷ್ಠ ಜನರಿಗೆ ಮಾತ್ರ ನೀಡುತ್ತಾನೆ. ಈ ಒತ್ತಡವನ್ನು ನಿಭಾಯಿಸುವುದನ್ನು ಕಲಿಸಲು ದೇವರು ನಿಮ್ಮನ್ನು ಇದಕ್ಕಾಗಿ ಆಯ್ಕೆ ಮಾಡಿದ್ದಾನೆ ಎಂದು ಬರೆದಿದ್ದಾರೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News