ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ’ ಎಂದು ದರ್ಶನ್ ತಿರುಗೇಟು ನೀಡಿದ್ದಾರೆ.
Highest Paid Top Five Sandalwood actors: ಬಾಲಿವುಡ್ ಚಿತ್ರರಂಗಕ್ಕೆ ಸೆಡ್ಡು ಹೊಡೆಯುವಂತಹ ಸಿನಿಮಾಗಳು ಕನ್ನಡದಲ್ಲಿ ನಿರ್ಮಾಣವಾಗುತ್ತಿವೆ. ಹೀಗಾಗಿ ಕನ್ನಡದ ನಟರು ತಮ್ಮ ಸ್ಟಾರ್ಡಮ್ಗೆ ತಕ್ಕಹಾಗೆ ಸಂಭಾವನೆಯನ್ನು ಪಡೆಯತ್ತಿದ್ದಾರೆ.
Darshan thoogudeepa : ಯಾವುದೋ ಒಂದು ಗಳಿಗೆಯಲ್ಲಿ ಕೆಲವು ಅಚಾತುರ್ಯದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ. ಜೀವನವೆಂಬುದು ಬಹಳ ಅಮೂಲ್ಯ ಹಾಗೂ ತುಂಬಾ ಚಿಕ್ಕದ್ದು. ಈ ಚಿಕ್ಕ ಸಮಯದಲ್ಲಿ ನಗು ನಗುತಾ ಬಾಳೋಣ ಎಂದು ಮಾಧ್ಯಮಕ್ಕೆ ಪತ್ರ ಬರೆದ ಡಿಬಾಸ್.
ಒಂದಷ್ಟು ತಿಂಗಳುಗಳಿಂದ ಡಿ ಬಾಸ್ ದರ್ಶನ್ ಕುಂತರೂ ತಪ್ಪು, ನಿಂತರೂ ತಪ್ಪು ಅನ್ನೋ ಲೆವೆಲ್ಲಿಗೆ ಸುದ್ದಿಯಾಗುತ್ತಿದ್ದಾರೆ. ಈ ಬಗ್ಗೆ ಜೀ ಕನ್ನಡ ನ್ಯೂಸ್ ದರ್ಶನ್ ಆಪ್ತರನ್ನ ಕೇಳಿದ ಸಂದರ್ಭದಲ್ಲಿ ಅವರುಗಳು ಹೇಳಿದಿಷ್ಟು.
ಬಹು ದಿನಗಳ ನಂತರ ಬಾಲಿವುಡ್ ಕಿಂಗ್ ಖಾನ್ ಶಾರುಖ್ ʼಪಠಾಣ್ʼ ಮೂಲಕ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಈಗಾಗಲೇ ಬಾದ್ ಶಾ ಸಿನಿಮಾದ ಆನ್ಲೈನ್ ಟಿಕೆಟ್ಗಳ ಖರೀದಿ ಜೋರಾಗಿದೆ. ಕರ್ನಾಟಕದಲ್ಲಿಯೂ ಶಾರುಖ್ ಖಾನ್ಗೆ ಪ್ಯಾನ್ಸ್ ಪಾಲೋಯಿಂಗ್ ಇದೆ. ಇದರ ಬೆನ್ನಲ್ಲೆ ಬಾಕ್ಸ್ ಆಫೀಸ್ ಸುಲ್ತಾನ ನಟ ದರ್ಶನ್ ಅವರ ಕ್ರಾಂತಿ ಸಿನಿಮಾ 26 ರಂದು ಬಿಡುಗಡೆಯಾಗಲಿದ್ದು, ಒಂದು ದಿನದ ಮುಂಚೆ ಅಂದ್ರೆ 25 ರಂದು ಬಿಡುಗಡೆಯಾಗುವ ಪಠಾಣ್ ಸಿನಿಮಾಗೆ ನೇರ ಪೈಪೋಟಿ ನೀಡುತ್ತಾ ಎನ್ನುವ ಕುತೂಹಲ ಮೂಡಿಸಿದೆ.
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಯಾಗಿದ್ದ ಅಭಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ನೆಚ್ಚಿನ ಅಭಿಮಾನಿಯ ಅಗಲಿಕೆಗೆ ದಚ್ಚು ಕಂಬನಿ ಮಿಡಿದ್ದಾರೆ. ಅಲ್ಲದೆ, ತಮ್ಮ ಪ್ಯಾನ್ಸ್ಗೆ ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ. ಅಭಿ ʼದಾಸʼನ ಕಟ್ಟಾಮಾನಿಯಾಗಿದ್ದರು. ʼಯಜಮಾನʼನಿಗಾಗಿ ಗುಡಿ ಕಟ್ಟಿಸುವುದಾಗಿ ಹೇಳಿದ್ದರು.
ಸ್ಯಾಂಡಲ್ವುಡ್ ನಟ ದರ್ಶನ್ ಅವರ ಮೇಲೆ ನಡೆದ ಅಮಾನವೀಯ ಘಟನೆ ಚಂದನವದ ಕಲಾದರ ಮನಸ್ಸಿಗೆ ನೋವುಂಟು ಮಾಡಿದೆ. ಮೊನ್ನೆ ಸುದೀಪ್ ಅವರು ದರ್ಶನ ಅವರ ಪರ ನಿಂತು ಅಭಿಮಾನಿಗಳಿಗೆ ಬುದ್ದಿಮಾತು ಹೇಳುವ ಕೆಲಸ ಮಾಡಿದ್ದರು. ಇದೀಗ ದೊಡ್ಮನೆ ಕುಡಿ ನಟ ಯುವ ರಾಜಕುಮಾರ ಅವರು ಹೊಸಪೇಟೆಯಲ್ಲಿ ನಡೆದ ಘಟನೆ ಕುರಿತು ಮೌನ ಮುರಿದಿದ್ದಾರೆ.
Darshan Birthday: ಕಳೆದ 2 ವರ್ಷಗಳಿಂದ ಕೊರೊನಾ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ವಿಧಿವಶರಾದ ಕಾರಣ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲವೆಂದು ಅಭಿಮಾನಿಗಳಿಗೆ ಡಿ ಬಾಸ್ ಮನವಿ ಮಾಡಿಕೊಂಡಿದ್ದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರೂ ಸೇರಿ ಕುಚಿಕು ಗೆಳೆಯರಂತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಮನವಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ.
ಅಭಿಮಾನಿಗಳು ನನ್ನ ಸೆಲೆಬ್ರೇಟಿಗಳು ಅಂತ ದರ್ಶನ ಯಾವಾಗ್ಲೂ ಹೇಳ್ತಾರೆ. ಕನ್ನಡಿಗರ ದಾಸ ನಾನು, ಅವರೇ ನನ್ನನ್ನು ಬೆಳೆಸಿದ್ದು ಅಂತ ಕನ್ನಡ ಸಿನಿ ಪ್ರೇಕ್ಷರನ್ನು ಸದಾ ಸ್ಮರಿಸುತ್ತಾರೆ. ಕ್ರಾಂತಿ ಸಿನಿಮಾದ ಪ್ರಚಾರ ಜವಾಬ್ದಾರಿ ಹೊತ್ತಿರುವ ಫ್ಯಾನ್ಸ್ಗಳ ಬಗ್ಗೆ ದರ್ಶನ್ ಇಟ್ಟಿರುವ ಗೌರವ ಅಷ್ಟಿಷ್ಟಲ್ಲ. ಇನ್ನು ದಚ್ಚು ತಮ್ಮ ಫ್ಯಾನ್ಸ್ಗಳನ್ನು ಸೆಲೆಬ್ರೇಟಿಗಳು ಅಂತ ಯಾಕೆ ಕರಿತಾರೆ ಎನ್ನುವ ವಿಚಾರದ ಕುರಿತು ಹೃದಯತುಂಬಿ ಮಾತನಾಡಿದ್ದಾರೆ.
ದೇಶಾದ್ಯಂತ ದರ್ಶನ್ ʼಕ್ರಾಂತಿʼ ಪ್ರಚಾರ ಅಬ್ಬರದಿಂದ ನಡೆಯುತ್ತಿದೆ. ಸ್ವತಃ ದಚ್ಚು ಅಭಿಮಾನಗಳೇ ಅಖಾಡಕ್ಕೆ ಇಳಿದು ಕ್ರಾಂತಿ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಫ್ಯಾನ್ಸ್ಗಳ ಈ ಕಾರ್ಯಕ್ಕೆ ಯಜಮಾನ ಫುಲ್ ಖುಷಿಯಾಗಿದ್ದು, ನಾವು ಕ್ರಾಂತಿ ನಿರ್ಮಾಣ ಮಾಡುವರೆಗೂ ಮಾತ್ರ ನಮ್ಮದು ಈಗ ಅವದ್ದು ಎಂದು ಮತ್ತೊಮ್ಮೆ ಅಭಿಮಾನಿಗಳಿಂದಲೇ ನಾವು ಎಂಬ ಮಾತನ್ನಾಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ʼಕ್ರಾಂತಿʼ ಜನವರಿ 26ಕ್ಕೆ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದೆ. ಸುದ್ದಿಗೋಷ್ಠಿಯಲ್ಲಿ, ನಾವು ದೊಡ್ಡ ಸಿನಿಮಾ ಮಾಡಿಬಿಟ್ಟಿದ್ದೇವೆ, ಎಲ್ಲಾ ಸಿನಿಮಾಗಳನ್ನು ಹಿಂದಿಕ್ಕುವಂತ ಚಿತ್ರ ಮಾಡಿದ್ದೇವೆ ಎಂದು ಹೇಳುವುದಿಲ್ಲ. ಆದ್ರೆ, ಒಂದೊಳ್ಳೆ ಸಿನಿಮಾ ಮಾಡಿದ್ದೇವೆ ಎಂದು ಹೇಳೋಕೆ ಇಷ್ಟ ಪಡ್ತೀನಿ ಎಂದು ದರ್ಶನ್ ಹೇಳಿದರು.
ಅಭಿಮಾನಿಗಳ ಅಭಿಮಾನಿ ಛಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ "ಕ್ರಾಂತಿ" ಸಿನಿಮಾ ತೆರೆ ಮೇಲೆ ಅಬ್ಬರಿಸುವ ದಿನ ಹತ್ತಿರವಾಗುತ್ತಿದೆ. ಡಿ ಬಾಸ್ ಅಭಿಮಾನಿಗಳು ಸಹ ಸಿನಿಮಾವನ್ನ ತೆರೆ ಮೇಲೆ ನೋಡೋಕೆ ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸದ್ಯ ಚಿತ್ರತಂಡ ಬಿಗ್ ಅಪಡೇಟ್ ಒಂದನ್ನು ನೀಡಿದ್ದು, 31ರದು ಸುದ್ದಿಗೋಷ್ಠಿ ಕರೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.