Suicide case: ಯಶವಂತ(20) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಕಳೆದ ವಾರ(ಅ.8) ಚಿತ್ರದುರ್ಗದಲ್ಲಿ ನಡೆದ ಹಿಂದೂ ಮಹಾಗಣಪತಿ ವಿಸರ್ಜನೆ ಹಬ್ಬದ ವೇಳೆ ಮೃತ ಯಶವಂತ ಮೊಬೈಲ್ ಕಳೆದುಕೊಂಡಿದ್ದ.
CM Siddaramaiah: ಪೋಷಕರ ಒತ್ತಡದಿಂದಾಗಿ ವಿದ್ಯೆ ಬಿಟ್ಟು ಕುರಿ ಕಾಯುತ್ತಿದ್ದ ಬಾಲಕನನ್ನು ಶಾಲೆಗೆ ಮರಳುವಂತೆ ಮಾಡಿ ಬಾಲ್ಯದ ನೆನಪನ್ನು ಮೆಲುಕು ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
Chandrayaan 3: ಇಸ್ರೋ ಮತ್ತು ಇಂಡಿಯಾದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಯಶಸ್ವಿಯಾಗಿದೆ. ವಿಕ್ರಂ ಸಾಫ್ಟ್ ಲ್ಯಾಂಡಿಂಗ್ ಆಗುವ ಮೂಲಕ ಇಡೀ ಯೋಜನೆಗೆ ಗೆಲುವು ಸಿಕ್ಕಿದೆ. ಚಂದಿರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ನಿಧಾನವಾಗಿ ಇಳಿಯುವ ಪ್ರಕ್ರಿಯೆ ಇಡೀ ಜಗತ್ತಿನ ಗಮನ ಸೆಳೆದಿತ್ತು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಯ ತಪಸ್ ಮಾನವ ರಹಿತ ವೈಮಾನಿಕ ವಾಹನ (ಯುಎವಿ) ಭಾನುವಾರ ಬೆಳಗ್ಗೆ ಚಿತ್ರದುರ್ಗದ ಹಳ್ಳಿಯೊಂದರ ಬಳಿ ಕೃಷಿ ಕ್ಷೇತ್ರಗಳಲ್ಲಿ ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಧಿಕಾರಿಗಳ ಪ್ರಕಾರ, UAV - TAPAS - ಪ್ರಾಯೋಗಿಕ ವಿಮಾನದಲ್ಲಿದ್ದಾಗ ಪತನಗೊಂಡಿದೆ.
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಸಿದ್ಧಪಡಿಸಿರುವ UAV-TAPAS 07A-14 ಹೆಸರಿನ ಈ ವಿಮಾನವು ಇಂದು ಬೆಳಗ್ಗೆ ಹಾರಾಟ ಆರಂಭಿಸಿತ್ತು. ಆದರೆ ನಿಯಂತ್ರಣ ತಪ್ಪಿ ಜಮೀನಿನಲ್ಲಿ ಪತನವಾಗದ್ದು, ಯಾವುದೇ ರೀತಿಯ ಅನಾಹುತ ಆಗಿಲ್ಲ.
‘ಕರಾಳ ಶನಿವಾರ.. ಇಂದು(ಜುಲೈ 13) ಬೆಳಗಿನ ಜಾವ ಚಿತ್ರದುರ್ಗ ಬಳಿ ಸಂಭವಿಸಿದ್ದ ಅಪಘಾತದಲ್ಲಿ ಸಾವಿಗೀಡಾದ ಐವರು ಸೇರಿದಂತೆ 37 ಮಂದಿ ಸಾವಿಗೀಡಾಗಿದ್ದಾರೆ. ಲಾರಿಯ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತ್ತು’ ಎಂದು ಅವರು ಮಾಹಿತಿ ನೀಡಿದ್ದಾರೆ.
ಬೆಳ್ಳಂ ಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಲಾರಿಗೆ ಹಿಂಬದಿಯಿಂದ ಟಾಟಾ ನೆಕ್ಸಾನ್ ಕಾರು ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೆ ಸಾವನ್ನಪ್ಪಿದ್ದು ಮೂವರಿಗೆ ಗಂಭೀರ ಗಾಯಗಳಾಗಿವೆ. ಚಿತ್ರದುರ್ಗ ತಾಲೂಕಿನ ಮಲ್ಲಾಪುರದಲ್ಲಿ ಭೀಕರ ಅಪಘಾತ ನಡೆದಿದೆ.
ನೀರಿನಲ್ಲಿ ಕಾಲಾರ ರೋಗಕ್ಕೆ ಕಾರಣವಾಗುವ ಸೂಕ್ಷ್ಮಾಣು ಜೀವಿ ಪತ್ತೆ! ಚಿತ್ರದುರ್ಗದ ಕಾವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಪ್ರಕರಣ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿ ಮಾಹಿತಿ
ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ಸಾವು ಪ್ರಕರಣ ಕಲುಷಿತ ನೀರು ಸೇವಿಸಿ ಸಾವಿಗೀಡಾದವರ ಸಂಖ್ಯೆ 4ಕ್ಕೆ ಏರಿಕೆ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ರುದ್ರಪ್ಪ(50) ಸಾವು ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು ಚಿಕಿತ್ಸೆ ಫಲಿಸದೆ ಕಾವಾಡಿಗರಹಟ್ಟಿ ನಿವಾಸಿ ರುದ್ರಪ್ಪ ಸಾವು
ಇದೊಂದು ಮಾದಿಗ ಯುವಕ ಮತ್ತು ಲಿಂಗಾಯತ ಯುವತಿ ಪ್ರೇಮ ಪ್ರಕರಣದ ದ್ವೇಷದ ಕಿಡಿ ಎನ್ನಲಾಗಿದ್ದು ಕವಾಡಿಗರಹಟ್ಟಿಯಲ್ಲಿ ಒಂದೂವರೆ ವರ್ಷದ ಹಿಂದೆ ನಡೆದ ಫೋಕ್ಸೋ ಪ್ರಕರಣದ ದ್ವೇಷವೇ ಟ್ಯಾಂಕ್ ಗೆ ವಿಷ ಹಾಕಲು ಕಾರಣವಾಗಿದೆ ಎಂದು ತಿಳಿದುಬಂದಿದೆ.
ಚಿತ್ರದುರ್ಗದ ಹೊಳಲ್ಕೆರೆಯಲ್ಲಿರುವ ಫಾರ್ಮ್ಹೌಸ್ನಲ್ಲಿ 70 ವರ್ಷದ ಜ್ಯೋತಿಷಿ ಗಂಗಾಧರ ಶಾಸ್ತ್ರಿ ಒಂಟಿಯಾಗಿ ವಾಸಿಸುತ್ತಿದ್ದರು. 16 ಎಕರೆ ಜಮೀನನ್ನು ಹೊಂದಿದ್ದ ಇವರು ಸ್ಥಳೀಯವಾಗಿ ಖ್ಯಾತಿಯಾಗಿದ್ದರು.
ಚಿತ್ರದುರ್ಗದಲ್ಲಿ ಬಿರುಗಾಳಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದ್ದು ಇಡೀ ರಸ್ತೆಗಳು ಈಜು ಕೊಳಗಳಂತಾಗಿವೆ. ರಸ್ತೆಯ ಮೇಲೆ ಮರಗಳು ಬಿದ್ದಿದ್ದರಿಂದ ಟ್ರಾಫಿಕ್ ಜಾಮ್ ಆಗಿದ್ದು, ರಸ್ತೆ ದಾಟಲಾಗದೇ ವಾಹನ ಸವಾರರು ಪರದಾಡಿದರು. ಅನೇಕ ಕಡೆ ಮನೆಗಳು ಬಿದ್ದಿದ್ದು ಅಧಿಕಾರಿಗಳಿಗೆ ತಲೆನೋವಾಗಿದೆ. ಮೊನ್ನೆ ಮೊನ್ನೆ ರಾಜಧಾನಿ ಬೆಂಗಳೂರು ನಗರ ತಲ್ಲಣಬಾಗಿತ್ತು.
ಚಿತ್ರದುರ್ಗದಲ್ಲಿ ಬಿರುಗಾಳಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದ್ದು ಇಡೀ ರಸ್ತೆಗಳು ಈಜು ಕೊಳಗಳಂತಾಗಿವೆ. ರಸ್ತೆಯ ಮೇಲೆ ಮರಗಳು ಬಿದ್ದಿದ್ದರಿಂದ ಟ್ರಾಫಿಕ್ ಜಾಮ್ ಆಗಿದ್ದು, ರಸ್ತೆ ದಾಟಲಾಗದೇ ವಾಹನ ಸವಾರರು ಪರದಾಡಿದರು
ಕೋಟೆನಾಡು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ಪಪ್ಪಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರದ ಅಖಾಡಕ್ಕಿಳಿದ ವೀರೇಂದ್ರ ಪಪ್ಪಿ, ಬಿಜೆಪಿ ಭದ್ರಕೋಟೆ ಬೇಧಿಸಲು ಸತತ ಪ್ರಯತ್ನ ನಡೆಸುತ್ತಿದ್ದಾರೆ. ದಂಡಿನ ಕುರುಬರ ಹಟ್ಟಿ, ದೊಡ್ಡಸಿದ್ದವ್ವನಹಳ್ಳಿ, ತೋಪರ ಮಾಳಿಗೆ, ಬೊಮ್ಮನಹಳ್ಳಿ, ಹಂಪಯ್ಯನ ಮಾಳಿಗೆ, ಕಸವನಹಳ್ಳಿ, ಕ್ಯಾದಿಗೆರೆ ಇತರ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ರೋಡ್ ಶೋ, ಪಾದಯಾತ್ರೆ, ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡುತ್ತಿರುವ ವೀರೇಂದ್ರ ಪಪ್ಪಿ, ಮದುವೆ ಮನೆಗಳಲ್ಲೂ ಮತಯಾಚಿಸಿ ಗಮನ ಸೆಳೆದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.