ಟ್ವೆಂಟಿ ಕ್ರಿಕೆಟ್ ಬಂದ ಮೇಲೆ ಟೆಸ್ಟ್ ಕ್ರಿಕೆಟ್ ಮೇಲಿನ ಮಹತ್ವದ ಕಡಿಮೆಯಾಗುತ್ತಿದೆ ಆದರೆ ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರು ಟೆಸ್ಟ್ ಆಟದ ಮೇಲೆ ತೋರಿಸುತ್ತಿರುವ ಪ್ರೀತಿ ಅದನ್ನು ಜೀವಂತವಾಗಿರಿಸಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೆಮ್ ಸ್ಮಿತ್ ಅಭಿಪ್ರಾಯ ಪಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಕರುಣ್ ನಾಯರ್ ಆಗ ಐದು ಟೆಸ್ಟ್ ಪಂದ್ಯಗಳಲ್ಲಿ ಒಂದೆ ಒಂದು ಪಂದ್ಯವಾಡಿರಲಿಲ್ಲ. ಆದರೆ ಮುಂಬರುವ ವೆಸ್ಟ್ ಇಂಡಿಸ್ ಸರಣಿಯಲ್ಲಿ ಕರುಣ್ ಅವರನ್ನು ಪರಿಗಣಿಸದೆ ಅವರನ್ನು ಕೈಬಿಡಲಾಗಿದೆ.
ಭಾರತ ತಂಡವು ಇಂಗ್ಲೆಂಡ ವಿರುದ್ದ 4-1 ಅಂತರದಲ್ಲಿ ಹಿನಾಯವಾಗಿ ಸೋತಿದೆ.ಆದರೆ ತಂಡದ ನಾಯಕ ಕೊಹ್ಲಿ ಮಾತ್ರ ಇದನ್ನು ಸೋಲನ್ನು ಒಪ್ಪಿಕೊಂಡಿಲ್ಲ ಮತ್ತು ತಂಡ ಟೂರ್ನಿಯೂದ್ದಕ್ಕೂ ನೀಡಿದ ಪ್ರದರ್ಶನವನ್ನು ಕೊಂಡಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.