“ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಇಂಥಾ ನಿರ್ಧಾರ ತೆಗೆದುಕೊಳ್ಳಬಾರದಿತ್ತು”- ಸುನಿಲ್ ಗವಾಸ್ಕರ್ ಬೇಸರ

Sunil Gavaskar on Rohit Sharma: ವಿಶ್ವಕಪ್‌’ನ ಸೆಮಿಫೈನಲ್‌’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಬೃಹತ್ ಸ್ಕೋರ್ ಗಳಿಸಿದ ರೋಹಿತ್ ಪಡೆ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿಹೋಗಿದೆ. ಇನ್ನು ಟೀಂ ಇಂಡಿಯಾದ ಬಗ್ಗೆ ಶ್ರೇಷ್ಠ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಹೇಳಿಕೆಯೊಂದನ್ನು ನೀಡಿದ್ದಾರೆ.

Written by - Bhavishya Shetty | Last Updated : Nov 19, 2023, 10:14 PM IST
    • ಐಸಿಸಿ ವಿಶ್ವಕಪ್ 2023ರ ಅಂತಿಮ ಪಂದ್ಯ
    • 10 ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿದ್ದ ಭಾರತ ಕ್ರಿಕೆಟ್ ತಂಡ
    • ಟೀಂ ಇಂಡಿಯಾದ ಬಗ್ಗೆ ಶ್ರೇಷ್ಠ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಹೇಳಿಕೆ
“ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಇಂಥಾ ನಿರ್ಧಾರ ತೆಗೆದುಕೊಳ್ಳಬಾರದಿತ್ತು”- ಸುನಿಲ್ ಗವಾಸ್ಕರ್ ಬೇಸರ title=
Sunil Gavaskar

ICC World Cup, Sunil Gavaskar on Rohit Sharma: ಐಸಿಸಿ ವಿಶ್ವಕಪ್ 2023ರ ಅಂತಿಮ ಪಂದ್ಯವು ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ಅಹಮದಾಬಾದ್‌’ನಲ್ಲಿ ನಡೆದಿದೆ. ಈ ಟೂರ್ನಿಯ ಕೊನೆಯ 10 ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿದ್ದ ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಇಂದು ತತ್ತರಿಸಿ ಹೋಗಿ ಎದುರಾಳಿ ತಂಡಕ್ಕೆ ಕೇವಲ 241 ರನ್ ಗಳ ಗುರಿ ನೀಡಲು ಶಕ್ತವಾಯಿತು.

ಇದನ್ನೂ ಓದಿ: ಫೈನಲ್’ನಲ್ಲಿ ಮುಗ್ಗರಿಸಿದ ಭಾರತ-ನನಸಾಗಲಿಲ್ಲ ಟ್ರೋಫಿ ಕನಸು.. 6ನೇ ಬಾರಿ ವಿಶ್ವಕಿರೀಟ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ

ವಿಶ್ವಕಪ್‌’ನ ಸೆಮಿಫೈನಲ್‌’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಬೃಹತ್ ಸ್ಕೋರ್ ಗಳಿಸಿದ ರೋಹಿತ್ ಪಡೆ, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿಹೋಗಿದೆ. ಇನ್ನು ಟೀಂ ಇಂಡಿಯಾದ ಬಗ್ಗೆ ಶ್ರೇಷ್ಠ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಸುನಿಲ್ ಗವಾಸ್ಕರ್ ಹೇಳಿದ್ದೇನು?

“ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಡಿಮೆ ಸ್ಕೋರಿಂಗ್ ಮುಖಾಮುಖಿಯಲ್ಲಿ ಆಸ್ಟ್ರೇಲಿಯಾದ 'ನಿಯಮಿತವಲ್ಲದ ಬೌಲರ್‌’ಗಳ' ಮೇಲೆ ದಾಳಿ ಮಾಡಲು ರೋಹಿತ್ ಮತ್ತು ಅವರ ತಂಡ ಸಂಪೂರ್ಣ ವಿಫಲವಾಗಿದೆ” ಎಂದು ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಅವರು, “ರೋಹಿತ್ ಶರ್ಮಾ ಈ ರೀತಿಯ ತಪ್ಪು ಶಾಟ್ ಆಡಿದ ನಂತರ ಔಟಾಗುವುದು ಒಂದು ಮಹತ್ವದ ತಿರುವು. ರೋಹಿತ್ ಶರ್ಮಾ ತುಂಬಾ ಚೆನ್ನಾಗಿ ಆಡುತ್ತಿದ್ದರು. ಆ ಓವರ್‌ನಲ್ಲಿ ಈಗಾಗಲೇ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ 10 ರನ್ ಬಂದಿತ್ತು. ಬಹುಶಃ ಮುಂದಿನ ಎಸೆತಕ್ಕೆ ಆ ರೀತಿ ಬ್ಯಾಟಿಂಗ್ ಮಾಡಬಾರದಿತ್ತು” ಎಂದರು.

ಇದನ್ನೂ ಓದಿ: ವಿಶ್ವಕಪ್ ಟ್ರೋಫಿ ಗೆದ್ದು ಮಿಂಚಿದ ಆಸ್ಟ್ರೇಲಿಯಾಗೆ- ರನ್ನರ್ ಅಪ್ ಆದ ಭಾರತಕ್ಕೆ ಸಿಕ್ಕ ಹಣ ಒಟ್ಟು ಎಷ್ಟು ಕೋಟಿ ಗೊತ್ತಾ?

"ಅವರು ಅದನ್ನು ಕನೆಕ್ಟ್ ಮಾಡಿ ಸಿಕ್ಸರ್ ಬಾರಿಸಿದ್ದರೆ ನಾವೆಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟುತ್ತಿದ್ದೆವು. ಭಾರತ ತಂಡದ ಸ್ಕೋರ್ 260 ರನ್‌’ಗಳಿಗಿಂತ ಹೆಚ್ಚಿರಬೇಕಿತ್ತು. ಆದರೆ ಕೇವಲ 241 ರನ್‌’ಗಳಾಗಿ ಉಳಿಯಿತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News