‘ಈ ಆಟಗಾರನನ್ನು ಟೀಂ ಇಂಡಿಯಾಕ್ಕೆ ಸೇರಿಸಿಕೊಳ್ಳುವುದಿಲ್ಲ’: ಶಾಕಿಂಗ್ ಹೇಳಿಕೆ ಕೊಟ್ಟ ಜಡೇಜಾ

ಭಾರತದ ಮಾಜಿ ಸ್ಟಾರ್ ಆಟಗಾರ ಅಜಯ್ ಜಡೇಜಾ, 'ಈಗ ನೀವು ನಾನು ಕೇಳಿದ ರೀತಿಯಲ್ಲಿ ಆಡಬೇಕಾದರೆ, ನೀವು ಆಕ್ರಮಣಕಾರಿಯಾಗಿ ಆಡಬೇಕು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಂಡಕ್ಕೆ ಬಂದರೆ, ನಿಮಗೆ ದಿನೇಶ್ ಕಾರ್ತಿಕ್ ಬೇಕು. ಅದು ನಿಮ್ಮ ಪ್ಲಸ್ ಪಾಯಿಂಟ್.

Last Updated : Aug 9, 2022, 07:45 PM IST
    • ದಿನೇಶ್ ಕಾರ್ತಿಕ್ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ ಭಾರತದ ಮಾಜಿ ಆಟಗಾರ
    • ಭಾರತದ ಮಾಜಿ ಸ್ಟಾರ್ ಆಟಗಾರ ಅಜಯ್ ಜಡೇಜಾ ಈ ಹೇಳಿಕೆ ನೀಡಿದ್ದಾರೆ
    • ಕಾರ್ತಿಕ್ ನನ್ನು ಟೀಂ ಇಂಡಿಯಾದಲ್ಲಿ ಸೇರಿಸಿಕೊಳ್ಳುವುದಿಲ್ಲ ಎಂದು ಜಡೇಜಾ ಹೇಳಿದ್ದಾರೆ
‘ಈ ಆಟಗಾರನನ್ನು ಟೀಂ ಇಂಡಿಯಾಕ್ಕೆ ಸೇರಿಸಿಕೊಳ್ಳುವುದಿಲ್ಲ’: ಶಾಕಿಂಗ್ ಹೇಳಿಕೆ ಕೊಟ್ಟ ಜಡೇಜಾ title=
Dinesh Karthik

ಭಾರತ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಜೊತೆಗೆ ಅವರು ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ನಿರೀಕ್ಷೆಗಳನ್ನು ಪೂರೈಸುತ್ತಿದ್ದಾರೆ.  ಇನ್ನು ಕಾರ್ತಿಕ್ ಟೀಂ ಇಂಡಿಯಾಗೆ ಉತ್ತಮ ಫಿನಿಶರ್ ಆಗಿಯೂ  ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇದೀಗ ಭಾರತ ತಂಡದ ಮಾಜಿ ಆಟಗಾರ ಅಜಯ್ ಜಡೇಜಾ ಮಾತ್ರ  ದಿನೇಶ್ ಕಾರ್ತಿಕ್ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಕಾರ್ತಿಕ್ ನನ್ನು ಟೀಂ ಇಂಡಿಯಾದಲ್ಲಿ ಸೇರಿಸಿಕೊಳ್ಳುವುದಿಲ್ಲ ಎಂದು ಜಡೇಜಾ ಹೇಳಿದ್ದಾರೆ.

ಇದನ್ನೂ ಓದಿ: Asia Cup 2022 ಕ್ಕಾಗಿ ಟೀಂ ಇಂಡಿಯಾ ಘೋಷಣೆ, ರೋಹಿತ್ ಶರ್ಮಾ ನಾಯಕ

ಭಾರತದ ಮಾಜಿ ಸ್ಟಾರ್ ಆಟಗಾರ ಅಜಯ್ ಜಡೇಜಾ, 'ಈಗ ನೀವು ನಾನು ಕೇಳಿದ ರೀತಿಯಲ್ಲಿ ಆಡಬೇಕಾದರೆ, ನೀವು ಆಕ್ರಮಣಕಾರಿಯಾಗಿ ಆಡಬೇಕು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಂಡಕ್ಕೆ ಬಂದರೆ, ನಿಮಗೆ ದಿನೇಶ್ ಕಾರ್ತಿಕ್ ಬೇಕು. ಅದು ನಿಮ್ಮ ಪ್ಲಸ್ ಪಾಯಿಂಟ್. ಆದರೆ ನಿಮ್ಮಲ್ಲಿ ಇಬ್ಬರೂ ಇಲ್ಲದಿದ್ದರೆ ದಿನೇಶ್ ಕಾರ್ತಿಕ್ ಗೆ ಇಲ್ಲಿ ಯಾವುದೇ ಕೆಲಸವಿಲ್ಲ. ಆಗ ನಾನು ದಿನೇಶ್ ಕಾರ್ತಿಕ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದಿಲ್ಲ ಎಂದರು.

ಇದನ್ನೂ ಓದಿ: Vastu tips : ಬೆಲ್ಲದಲ್ಲಿ ಅಡಗಿದೆ ನಿಮ್ಮ ಆರ್ಥಿಕ ಪ್ರಗತಿಯ ಗುಟ್ಟು! ಆರೋಗ್ಯ ಮಾತ್ರವಲ್ಲ ಅದೃಷ್ಟಕ್ಕೂ ಬೇಕು ಬೆಲ್ಲ

ಮುಂದುವರಿದು ಮಾತನಾಡಿದ ಅಜಯ್ ಜಡೇಜಾ, 'ದಿನೇಶ್ ಕಾರ್ತಿಕ್ ಉತ್ತಮ ಕಾಮೆಂಟೇಟರ್. ಅವನು ಬಯಸಿದರೆ, ಅವನು ನನ್ನ ಪಕ್ಕದಲ್ಲಿ ಕುಳಿತುಕೊಳ್ಳಬಹುದು. ನಾನು ಮೊದಲು ಬೌಲರ್‌ಗಳನ್ನು ಆಯ್ಕೆ ಮಾಡುತ್ತೇನೆ. ನಾನು ಶಮಿ, ಬುಮ್ರಾ, ಅರ್ಷದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಹಾಲ್ ಅವರನ್ನು ಆಯ್ಕೆ ಮಾಡಿದ್ದೇನೆ. ನಾಲ್ಕು ವಿಭಿನ್ನ ವ್ಯತ್ಯಾಸಗಳನ್ನು ಹೊಂದಿದವರು ಇಲ್ಲಿದ್ದಾರೆ. ಬ್ಯಾಟಿಂಗ್‌ನಲ್ಲಿ ನನಗೆ ನಾಲ್ವರು ಆಟಗಾರರು ನಿಶ್ಚಿತರಾಗಿದ್ದಾರೆ. ಅವರೆಂದರೆ, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ದೀಪಕ್ ಹೂಡಾ ಎಂದು ಹೇಳಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News