Tips To Become Rich: ಜೀವನದಲ್ಲಿ ಶ್ರೀಮಂತರಾಗಲು ಚಾಣಕ್ಯ ಹೇಳಿದ ಈ ಎರಡು ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ!

Chanakya Niti: ಶ್ರೀಮಂತರಾಗುವ ಬಯಕೆ ಯಾರಿಗೆ ಇರಲ್ಲ ಹೇಳಿ! ಆದರೆ ಪ್ರತಿಯೊಬ್ಬರಿಗೂ ಕೂಡ ತಮ್ಮ ಕನಸುಗಳನ್ನು ಹೇಗೆ ಪೂರೈಸಬೇಕೆಂದು ತಿಳಿದಿರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಚಾಣಕ್ಯನ ನೀತಿಗಳಲ್ಲಿ ಕೆಲ ಸಲಹೆಗಳನ್ನು ನೀಡಲಾಗಿದೆ,  ಈ ಸಲಹೆಗಳು ಯಾವುದೇ ವ್ಯಕ್ತಿಗೆ ಶ್ರೀಮಂತರಾಗಲು ಸಹಾಯ ಮಾಡುತ್ತದೆ. (Spiritual News In Kannada)  

Written by - Nitin Tabib | Last Updated : Jan 27, 2024, 06:13 PM IST
  • ಎರಡನೆಯ ಅಭ್ಯಾಸದಲ್ಲಿ, ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಬಳಿ ಇದ್ದ ಹಣದ ಬಗ್ಗೆ ಎಂದಿಗೂ ಸೊಕ್ಕನ್ನು ಮೇರೆಯಬಾರದು.
  • ಒಬ್ಬ ವ್ಯಕ್ತಿಯು ತನ್ನ ಆರ್ಥಿಕ ಸ್ಥಿತಿಯ ಬಗ್ಗೆ ಸೊಕ್ಕನ್ನು ಮೆರೆದರೆ, ಅವನ ಕೈಯಲ್ಲಿ ಹಣವು ಹೆಚ್ಚು ಕಾಲ ಉಳಿಯುವುದಿಲ್ಲ.
  • ವಾಸ್ತವದಲ್ಲಿ, ತಾಯಿ ಲಕ್ಷ್ಮಿ ಅಂತಹ ವ್ಯಕ್ತಿಗಳ ಮೇಲೆ ಮುನಿಸಿಕೊಳ್ಳುತ್ತಾಳೆ.
Tips To Become Rich: ಜೀವನದಲ್ಲಿ ಶ್ರೀಮಂತರಾಗಲು ಚಾಣಕ್ಯ ಹೇಳಿದ ಈ ಎರಡು ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ! title=

ಬೆಂಗಳೂರು: ಚಾಣಕ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿರುವ ಅನೇಕ ನೀತಿಗಳು ಓರ್ವ ವ್ಯಕ್ತಿಯನ್ನು ಜೀವನದಲ್ಲಿ ಸರಿಯಾದ ಮಾರ್ಗವನ್ನು ಅನುಸರಿಸಲು ಪಾಠ ಹೇಳಿಕೊಡುತ್ತವೆ. ಚಾಣಕ್ಯನ ಮುಖ್ಯ ವಿಚಾರಗಳಲ್ಲಿ ಒಂದಾದ ನೀತಿ, ಒಬ್ಬ ವ್ಯಕ್ತಿಯು ಹೇಗೆ ಶ್ರೀಮಂತನಾಗಬಹುದು ಎಂಬುದನ್ನು ವಿವರಿಸುತ್ತದೆ. ವಾಸ್ತವದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ಶ್ರೀಮಂತನಾಗುವ ಕನಸು ಹೊಂದಿರುತ್ತಾನೆ. ಆದರೆ ಶ್ರೀಮಂತರಾಗುವ ಪ್ರತಿಯೊಬ್ಬರ ಕನಸು ಈಡೇರುವುದಿಲ್ಲ. ವ್ಯಕ್ತಿಯ ಶ್ರಮ ಮತ್ತು ಅದೃಷ್ಟ ಇದರ ಹಿಂದೆ ಇರುತ್ತದೆ.(Spiritual News In Kannada)

ಆಚಾರ್ಯ ಚಾಣಕ್ಯನು ನೀತಿಯಲ್ಲಿ ಒಬ್ಬ ವ್ಯಕ್ತಿಯು ಶ್ರೀಮಂತನಾಗಲು ವಿಶೇಷ ಕಾಳಜಿ ವಹಿಸಬೇಕಾದ ವಿಷಯಗಳನ್ನು ಹೇಳಿದ್ದಾರೆ. ಶ್ರೀಮಂತನಾಗಲು, ಒಬ್ಬ ವ್ಯಕ್ತಿಯು ತನ್ನ ಕೆಲವು ಅಭ್ಯಾಸಗಳನ್ನು ಬದಲಾಯಿಸಬೇಕಾಗುತ್ತದೆ, ಅದರ ನಂತರ ಮಾತ್ರ ಅವನು ಶ್ರೀಮಂತ ವರ್ಗಕ್ಕೆ ಬರಬಹುದು. ಯಾವುದೇ ವ್ಯಕ್ತಿಯನ್ನು ಶ್ರೀಮಂತನಾಗಿಸಬಲ್ಲ ಚಾಣಕ್ಯ ನೀತಿಯ ಆ ಎರಡು ಅಭ್ಯಾಸಗಳು ಯಾವುವು ಇಂದು ನಾವು ನಿಮಗೆ ಹೇಳಿಕೊಡಲಿದ್ದೇವೆ

ಚಾಣಕ್ಯನ ಯಾವ ನೀತಿಯಿಂದ ಶ್ರೀಮಂತನಾಗಬಹುದು?
ಆಚಾರ್ಯ ಚಾಣಕ್ಯರ ಪ್ರಕಾರ, ಶ್ರೀಮಂತನಾಗಲು, ಒಬ್ಬ ವ್ಯಕ್ತಿಯು ಮೊದಲು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಆ ವ್ಯಕ್ತಿಗೆ ಏನೂ ಆಗುವುದಿಲ್ಲ, ಬದಲಾಗಿ ದೇವರ ಕೃಪಾಶೀರ್ವಾದ ಆತನಿಗೆ ಲಭಿಸುತ್ತದೆ. ದಾನ ಮಾಡುವ ವ್ಯಕ್ತಿಯ ಮೇಲೆ ದೇವರ ಆಶೀರ್ವಾದವು ಸದಾ ಇರುತ್ತದೆ ಎಂದು ಆಚಾರ್ಯ ಚಾಣಕ್ಯ ನಂಬುತ್ತಾರೆ. ಆದ್ದರಿಂದ, ದಾನದಿಂದ, ಆ ವ್ಯಕ್ತಿಯು ಬಡವನಾಗುವುದಿಲ್ಲ ಹೊರತು ಶ್ರೀಮಂತನಾಗುತ್ತಾನೆ.

ಬಡವರಿಗೆ ದಾನ ಮಾಡಿ
ಚಾಣಕ್ಯನ ಪ್ರಕಾರ, ದಾನ ಮಾಡುವುದು ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ದಾನ ಮಾಡಲು, ಒಬ್ಬ ವ್ಯಕ್ತಿಯು ಧಾರ್ಮಿಕ ಕಾರ್ಯಗಳು, ಸಾಮಾಜಿಕ ಕಾರ್ಯಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು ಅಥವಾ ಬಡವರಿಗೆ ದಾನ ಮಾಡಬಹುದು.

ಇದನ್ನೂ ಓದಿ-Trigrahi Yog 2024: ಮೂವತ್ತು ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ತ್ರಿಗ್ರಹಿ ಯೋಗ, ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ ಭಾರಿ ಕನಕವೃಷ್ಟಿ!

ಎಂದಿಗೂ ಸೊಕ್ಕನ್ನು ಮೇರೆಯಬೇಡಿ
ಎರಡನೆಯ ಅಭ್ಯಾಸದಲ್ಲಿ, ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಬಳಿ ಇದ್ದ ಹಣದ ಬಗ್ಗೆ ಎಂದಿಗೂ ಸೊಕ್ಕನ್ನು ಮೇರೆಯಬಾರದು. ಒಬ್ಬ ವ್ಯಕ್ತಿಯು ತನ್ನ ಆರ್ಥಿಕ ಸ್ಥಿತಿಯ ಬಗ್ಗೆ ಸೊಕ್ಕನ್ನು ಮೆರೆದರೆ, ಅವನ ಕೈಯಲ್ಲಿ ಹಣವು ಹೆಚ್ಚು ಕಾಲ ಉಳಿಯುವುದಿಲ್ಲ. ವಾಸ್ತವದಲ್ಲಿ, ತಾಯಿ ಲಕ್ಷ್ಮಿ ಅಂತಹ ವ್ಯಕ್ತಿಗಳ ಮೇಲೆ ಮುನಿಸಿಕೊಳ್ಳುತ್ತಾಳೆ. 

ಇದನ್ನೂ ಓದಿ-Dhanshakti Yog 2024: ಮಂಗಳ ಹಾಗೂ ಶುಕ್ರರ ಕೃಪೆಯಿಂದ ಧನಶಕ್ತಿ ಯೋಗ ರಚನೆ, ಶುಕ್ರದೆಸೆಯಿಂದ ಈ ಜನರಿಗೆ ಅಪಾರ ಧನ ಸಂಪತ್ತು ಪ್ರಾಪ್ತಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News