Horoscope 2024 : ಈ ರಾಶಿಯವರಿಗೆ ಹರ್ಷದ ಹೊನಲನ್ನೇ ಹೊತ್ತು ತರಲಿದೆ ಹೊಸ ವರ್ಷ !

2024 ರ ವರ್ಷ ಈ ರಾಶಿಯವರ  ಪಾಲಿಗೆ ಹೊತ್ತು ತರಲಿದೆ ಅದೃಷ್ಟ.  ಈ ಮೂರು ರಾಶಿಯವರು ಮಾಡುವ ಕೆಲಸಗಳಲ್ಲಿ ದೇವರ ಆಶೀರ್ವಾದ ಇರುತ್ತದೆ.

Written by - Ranjitha R K | Last Updated : Sep 20, 2023, 02:13 PM IST
  • 2023ರ ವರ್ಷ ಅಂತ್ಯವಾಗಲು ಇನ್ನೇನು ಮೂರು ತಿಂಗಳಷ್ಟೇ ಬಾಕಿ
  • ಮೂರು ತಿಂಗಳು ಕಳೆದರೆ ಹೊಸ ವರ್ಷಕ್ಕೆ ಕಾಲಿಡುತ್ತೇವೆ.
  • 2024 ರ ವರ್ಷ ಈ ರಾಶಿಯವರ ಪಾಲಿಗೆ ಹೊತ್ತು ತರಲಿದೆ ಅದೃಷ್ಟ
Horoscope 2024 : ಈ ರಾಶಿಯವರಿಗೆ ಹರ್ಷದ ಹೊನಲನ್ನೇ ಹೊತ್ತು ತರಲಿದೆ ಹೊಸ ವರ್ಷ !  title=

Horoscope 2024 : 2023ರ ವರ್ಷ ಅಂತ್ಯವಾಗಲು ಇನ್ನೇನು ಮೂರು ತಿಂಗಳಷ್ಟೇ ಬಾಕಿ ಇದೆ. ಮೂರು ತಿಂಗಳು ಕಳೆದರೆ ಹೊಸ ವರ್ಷಕ್ಕೆ ಕಾಲಿಡುತ್ತೇವೆ.  2024 ರ ಆಗಮನದೊಂದಿಗೆ, ಹೊಸ ವರ್ಷದ ರಾಶಿ ಭವಿಷ್ಯ ಹೇಗಿರಲಿದೆ ಎನ್ನುವ ಕುತೂಹಲ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024 ರ ವರ್ಷವು ಮೂರು ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮುಂಬರುವ ವರ್ಷವು ಈ ಮೂರು ರಾಶಿಯವರು ಮಾಡುವ ಕೆಲಸಗಳಲ್ಲಿ ದೇವರ ಆಶೀರ್ವಾದ ಇರುತ್ತದೆ. ಈ ರಾಶಿಯವರು ತಮ್ಮ ವೃತ್ತಿ, ವ್ಯವಹಾರ ಮತ್ತು ವೈವಾಹಿಕ ಜೀವನದಲ್ಲಿ ಯಶಸ್ಸನ್ನು  ಸಾಧಿಸುತ್ತಾರೆ. 

2024 ರ ವರ್ಷ ಈ ರಾಶಿಯವರ  ಪಾಲಿಗೆ ಹೊತ್ತು ತರಲಿದೆ ಅದೃಷ್ಟ : 
ಮೇಷ ರಾಶಿ : 

2024ರ ವರ್ಷವು ಮೇಷ ರಾಶಿಯ ಜನರಿಗೆ ವಿಶೇಷವಾಗಿ ಮಂಗಳಕರ ಮತ್ತು ಪ್ರಯೋಜನಕಾರಿಯಾಗಿದೆ. ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ  ನಿರೀಕ್ಷೆಗಿಂತ ಹೆಚ್ಚಿನ ಬೆಳವಣಿಗೆ ಕಾಣುವರು. ಈ ವರ್ಷ ಹಣದ ಕೊರತೆಯನ್ನು ಎದುರಾಗುವುದೇ ಇಲ್ಲ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯಬಹುದು. ಕೆಲಸ ಮಾಡುವವರಿಗೆ ಬಡ್ತಿ ಸಿಗುವ ಸಂಪೂರ್ಣ ಅವಕಾಶವಿದೆ. ಸಂಸಾರದಲ್ಲಿ ಸಂತಸದ ಸುರಿಮಳೆಯಾಗಲಿದೆ.

ಇದನ್ನೂ ಓದಿ : Bhadra Raja Yoga: ದೀಪಾವಳಿಗೂ ಮುನ್ನ ಈ 4 ರಾಶಿಯವರ ಅದೃಷ್ಟ ಬೆಳಗಿಸಲಿದ್ದಾನೆ ಬುಧ

ಕನ್ಯಾ ರಾಶಿ:
ಕನ್ಯಾ ರಾಶಿಯ ಜನರು 2024 ರಲ್ಲಿ ಭೌತಿಕ ಸೌಕರ್ಯಗಳನ್ನು ಪಡೆಯುವ ನಿರೀಕ್ಷೆಯಿದೆ. ಅವರ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಉದ್ಯೋಗದಲ್ಲಿ ಪ್ರಗತಿ ಮತ್ತು ವ್ಯವಹಾರದಲ್ಲಿ ಲಾಭ ಪಡೆಯುವ ಸಾಧ್ಯತೆಯಿದೆ. ಕೆಲಸದ ನಿಮಿತ್ತ ವಿದೇಶ ಪ್ರಯಾಣ ಮಾಡುವ ಅವಕಾಶವಿರುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಪ್ರೀತಿ ನೆಲೆಸಿರುತ್ತದೆ. ಪ್ರತಿದಿನ ಬೆಳಿಗ್ಗೆ ಯೋಗ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ತುಲಾ ರಾಶಿ : 
ತುಲಾ ರಾಶಿಯವರಿಗೆ 2024 ರ ವರ್ಷವು ಮಂಗಳಕರ ಮತ್ತು ಲಾಭದಾಯಕವಾಗಿರುತ್ತದೆ. ಈ ವರ್ಷ ಅವರು ತಮ್ಮ ಆಸ್ತಿ ಸಂಬಂಧಿತ ಯೋಜನೆಗಳನ್ನು ಪೂರ್ಣಗೊಳಿಸಬಹುದು. ವೃತ್ತಿ ಜೀವನದಲ್ಲಿ ಹೊಸ ಯಶಸ್ಸನ್ನು ಪಡೆಯುವ ಅವಕಾಶಗಳಿವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಬಹುದು. ಈಗಾಗಲೇ ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗಬಹುದು. ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ.

ಇದನ್ನೂ ಓದಿ : ಈ ಪ್ರಾಣಿಗೆ ಪ್ರತಿದಿನ ಅನ್ನ ನೀಡಿದರೆ ರಾಜರಂತ ಬದುಕಿನ ಜೊತೆ ಸಂತೋಷ-ಐಶ್ವರ್ಯ ನೀಡಿ ಸದಾ ಹರಸುತ್ತಾನೆ ಶನಿದೇವ

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News