ಶನಿ ಜಯಂತಿ ದಿನದಿಂದ ಈ ರಾಶಿಯವರ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನಿದೇವ ! ಪ್ರಾಪ್ತಿಯಾಗುವುದು ಧನ ಸಂಪತ್ತು

 ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಶನಿವಾರದಂದು ಅಮವಾಸ್ಯೆ ಬಂದರೆ ಅದನ್ನು ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಬಾರಿಯ ಶನಿ ಜಯಂತಿಯು ಮೇ 19 ರಂದು ಬರುತ್ತಿದೆ. ಇದು 5 ರಾಶಿಯವರಿಗೆ ತುಂಬಾ ಮಂಗಳಕರವಾಗಿರಲಿದೆ.  

Written by - Ranjitha R K | Last Updated : May 12, 2023, 01:11 PM IST
  • ಶನಿ ದೇವನಿಗೆ ಇರುವ ಇನ್ನೊಂದು ಹೆಸರು ನ್ಯಾಯದ ದೇವರು
  • ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಅದರ ಫಲವನ್ನು ಶನಿ ಮಹಾತ್ಮ ನೀಡುತ್ತಾನೆ
  • ಶನಿಯ ಕೃಪೆಗೆ ಪಾತ್ರರಾಗಲು ಶನಿ ಜಯಂತಿಯ ದಿನ ಸೂಕ್ತ
ಶನಿ ಜಯಂತಿ ದಿನದಿಂದ ಈ ರಾಶಿಯವರ ಮೇಲೆ  ಕೃಪಾ ದೃಷ್ಟಿ ಹರಿಸಲಿದ್ದಾನೆ ಶನಿದೇವ ! ಪ್ರಾಪ್ತಿಯಾಗುವುದು ಧನ ಸಂಪತ್ತು  title=

ಬೆಂಗಳೂರು : ಶನಿ ದೇವನಿಗೆ ಇರುವ ಇನ್ನೊಂದು ಹೆಸರು ನ್ಯಾಯದ ದೇವರು ಎನ್ನುವುದು. ಜೀವನದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡಿದರೆ ಅದರ ಫಲವನ್ನು ಶನಿ ಮಹಾತ್ಮ ನೀಡುತ್ತಾನೆ. ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ಮಾತ್ರವೇ ಶನಿ ದೇವನನ್ನು ಸಂತುಷ್ಟಗೊಳಿಸಬಹುದು. ಮತ್ತೊಂದೆಡೆ, ಶನಿ ಅಸಮಾಧಾನಗೊಂಡರೆ ಜೀವನದ ಪ್ರತಿಯೊಂದು ಕ್ಷಣವೂ ನರಕ ಸದೃಶವಾಗಿರುತ್ತದೆ. ಇನ್ನು ಶನಿಯ ಕೃಪೆಗೆ ಪಾತ್ರರಾಗಲು ಶನಿ ಜಯಂತಿಯ ದಿನವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಶನಿವಾರದಂದು ಅಮವಾಸ್ಯೆ ಬಂದರೆ ಅದನ್ನು ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಬಾರಿಯ ಶನಿ ಜಯಂತಿಯು ಮೇ 19 ರಂದು ಬರುತ್ತಿದೆ. ಇದು 5 ರಾಶಿಯವರಿಗೆ ತುಂಬಾ ಮಂಗಳಕರವಾಗಿರಲಿದೆ.  

ಶನಿ ಜಯಂತಿಯು ಈ ರಾಶಿಯವರಿಗೆ ಮಂಗಳಕರ :  
ವೃಷಭ ರಾಶಿ : ವೃಷಭ ರಾಶಿಯ ಅಧಿಪತಿ ಶುಕ್ರ. ಶುಕ್ರ ಮತ್ತು ಶನಿ ಗ್ರಹಗಳ ಮಧ್ಯೆ ಸ್ನೇಹವಿರುತ್ತದೆ. ಆದ್ದರಿಂದಲೇ ವೃಷಭ ರಾಶಿಯವರ ಮೇಲೆ ಶನಿಯು ಸದಾ ದಯೆ ತೋರುತ್ತಾನೆ. ಶನಿ ಜಯಂತಿಯು ವೃಷಭ ರಾಶಿಯವರಿಗೆ ಶುಭ ಫಲವನ್ನೇ ನೀಡಲಿದೆ. ಈ ರಾಶಿಯವರು ಸಂಪತ್ತು, ಸ್ಥಾನಮಾನ, ಗೌರವ ಮತ್ತು ಎಲ್ಲವನ್ನೂ ಪಡೆಯುತ್ತಾರೆ. 

ಇದನ್ನೂ ಓದಿ : ಶುಕ್ರ ಮಹಾದಶಾ ಪ್ರಭಾವ: 20 ವರ್ಷಗಳವರೆಗೆ ಇಂತಹವರಿಗೆ ರಾಜಯೋಗ

ತುಲಾ ರಾಶಿ : ತುಲಾ ರಾಶಿಯ ಅಧಿಪತಿ ಕೂಡಾ ಶುಕ್ರ. ಈ ರಾಶಿಯಲ್ಲಿ ಶನಿಯು ಉನ್ನತ ಸ್ಥಾನದಲ್ಲಿರುತ್ತಾನೆ. ಅದಕ್ಕಾಗಿಯೇ ಶನಿದೇವನು ತುಲಾ ರಾಶಿಯವರ ಮೇಲೆ ವಿಶೇಷ ಆಶೀರ್ವಾದ ಕರುಣಿಸುತ್ತಾನೆ. ಬಡವರಿಗೆ ಪ್ರಾಣಿಗಳಿಗೆ ಆಹಾರ ನೀಡುವುದರಿಂದ ಶನಿದೇವನ ಕೃಪೆಯಿಂದ ಅಪಾರ ಯಶಸ್ಸು, ಹಣ, ಕೀರ್ತಿ, ಸುಖ ಪ್ರಾಪ್ತಿಯಾಗುತ್ತದೆ.  

ಕರ್ಕಾಟಕ ರಾಶಿ : ಶನಿದೇವನು ಕರ್ಕ ರಾಶಿಯವರ ಮೇಲೆ ಕೂಡಾ ವಿಶೇಷ  ದಯೆ ತೋರುತ್ತಾನೆ. ಈ ರಾಶಿಯವರಿಗೆ ಪೋಷಕರ ಬೆಂಬಲ ಸಿಗಲಿದೆ. ಕೆಲವು ಪ್ರಮುಖ ಕೆಲಸಗಳು ಪೂರ್ಣಗೊಳ್ಳಲಿವೆ. ವೃತ್ತಿಯಲ್ಲಿ ಉನ್ನತಿ ಕಂಡುಬರಲಿದೆ. ದೊಡ್ಡಮಟ್ಟದ ಯಶಸ್ಸು ಸಿಗಲಿದೆ. ವಿತ್ತೀಯ ಲಾಭವಾಗುವ ಸಾಧ್ಯತೆಗಳಿವೆ.  

ಇದನ್ನೂ ಓದಿ : Today Horoscope: ಈ ರಾಶಿಯವರ ಮೇಲೆ ಲಕ್ಷ್ಮೀ ಕೃಪೆ: ಅನಿರೀಕ್ಷಿತ ಧನಪ್ರಾಪ್ತಿ-ಕೈಗೊಂಡ ಪ್ರತೀ ಕೆಲಸ ಪೂರ್ಣ

ಕುಂಭ ರಾಶಿ : ಶನಿಯು ಕುಂಭ ರಾಶಿಯ ಅಧಿಪತಿ. ಇದೀಗ ಶನಿಯು ಕುಂಭ ರಾಶಿಯಲ್ಲಿದ್ದು ಈ ರಾಶಿಯವರಿಗೆ ಏಳೂವರೆ ವರ್ಷದ ಶನಿ ದೆಸೆ ನಡೆಯುತ್ತಿದೆ. ಶನಿ ಜಯಂತಿಯು ಕುಂಭ ರಾಶಿಯವರಿಗೆ  ಪರಿಹಾರ ನೀಡಲಿದೆ. ಈ ರಾಶಿಯವರ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಶ್ರಮ, ಪ್ರೀತಿ ಮತ್ತು ಗೌರವ ಸಿಗಲಿದೆ. 

ಮಕರ ರಾಶಿ : ಶನಿಯು ಮಕರ ರಾಶಿಯ ಅಧಿಪತಿ ಕೂಡಾ ಹೌದು. ಹಾಗಾಗಿ ಈ ರಾಶಿಯವರ ಮೇಲೆ ಶನಿಯ ಆಶೀರ್ವಾದ ಕೂಡಾ ಹೆಚ್ಚಿರುತ್ತದೆ. ಶನಿಯ ಪ್ರಭಾವದಿಂದಾಗಿ ಮಕರ ರಾಶಿಯವರಲ್ಲಿ ನಾಯಕತ್ವದ ಸಾಮರ್ಥ್ಯ ಉತ್ತಮವಾಗಿರುತ್ತದೆ. ಶನಿ ಜಯಂತಿಯು ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಯನ್ನು ನೀಡುತ್ತದೆ. ರಾಜಕೀಯದಲ್ಲಿ ಸಕ್ರಿಯವಾಗಿರುವವರಿಗೆ ಲಾಭವಾಗಲಿದೆ. 

ಇದನ್ನೂ ಓದಿ : Budh Grah Uday: ಈ 4 ರಾಶಿಯ ಜನರ ಮೇಲೆ ಹಣದ ಮಳೆಯಾಗುತ್ತದೆ!

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News