ಸೂರ್ಯ ಗ್ರಹಣದ ದಿನದಿಂದಲೇ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು!ಒಲಿದು ಬರುವುದು ಹೊಸ ಮನೆ ಖರೀದಿ ಭಾಗ್ಯ

Surya Grahan 2024 Effects:ಸೂರ್ಯ ಗ್ರಹಣದ ದಿನದಿಂದಲೇ  ಕೆಲವು ರಾಶಿಯವರ ಅದೃಷ್ಟ ಬದಲಾಗಲಿದೆ. ಹೊಸ ಮನೆ ವಾಹನ ಖರೀದಿಯ ಭಾಗ್ಯವೂ ಒಲಿದು ಬರಲಿದೆ. 

Written by - Ranjitha R K | Last Updated : Aug 7, 2024, 12:02 PM IST
  • ಅಕ್ಟೋಬರ್ 2 ರಂದು ವರ್ಷದ ಎರಡನೇ ಸೂರ್ಯ ಗ್ರಹಣ ಸಂಭವಿಸಲಿದೆ.
  • ಪಿತೃ ಪಕ್ಷದ ಅಮಾವಾಸ್ಯೆಯಂದು ಈ ಸೂರ್ಯಗ್ರಹಣ ಸಂಭವಿಸಲಿದೆ
  • 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಈ ಸೂರ್ಯ ಗ್ರಹಣ
ಸೂರ್ಯ ಗ್ರಹಣದ ದಿನದಿಂದಲೇ ತೆರೆಯುವುದು ಈ ರಾಶಿಯವರ ಅದೃಷ್ಟದ  ಬಾಗಿಲು!ಒಲಿದು ಬರುವುದು ಹೊಸ ಮನೆ ಖರೀದಿ ಭಾಗ್ಯ  title=

Surya Grahan 2024 Effects : 2024ರ ಎರಡನೇ ಸೂರ್ಯಗ್ರಹಣವು ಅಕ್ಟೋಬರ್ 2, 2024 ರಂದು ಬುಧವಾರ ಸಂಭವಿಸುತ್ತದೆ.ಪಿತೃ ಪಕ್ಷದ ಅಮಾವಾಸ್ಯೆಯಂದು ಈ ಸೂರ್ಯಗ್ರಹಣ ಸಂಭವಿಸಲಿದೆ.ಇದನ್ನು ಸರ್ವ ಪಿತೃ ಅಮಾವಾಸ್ಯೆ ಅಥವಾ ಮಹಾಲಯ ಎಂದು ಕರೆಯುತ್ತಾರೆ.ಈ ಸೂರ್ಯಗ್ರಹಣವು ಅಕ್ಟೋಬರ್ 2 ರಂದು ರಾತ್ರಿ 09:13 ಕ್ಕೆ ಪ್ರಾರಂಭವಾಗಿ ಮುಂಜಾನೆ 3:17ಕ್ಕೆ ಕೊನೆಯಾಗುತ್ತದೆ.ಇದು ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣವಾಗಿದೆ.6 ಗಂಟೆ 04 ನಿಮಿಷಗಳವರೆಗೆ ಈ ಗ್ರಹಣ ಗೋಚರಿಸಲಿದೆ.ಸೂರ್ಯಗ್ರಹಣವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲಿಯೂ ನಾಲ್ಕು ರಾಶಿಯವರ ಮೇಲೆ ಸೂರ್ಯಗ್ರಹಣ ಅತಿ ಹೆಚ್ಚು ಶುಭ ಪರಿಣಾಮಗಳನ್ನೇ ನೀಡಲಿದೆ. 

ಈ ರಾಶಿಯವರ ಮೇಲೆ ಸೂರ್ಯಗ್ರಹಣದ ಧನಾತ್ಮಕ ಪರಿಣಾಮ : 
ಮೇಷ ರಾಶಿ :
ಸೂರ್ಯಗ್ರಹಣವು  ನಿಮ್ಮ ಅದೃಷ್ಟದ ಬಾಗಿಲು ತೆರೆಸುತ್ತದೆ.ನೀವು ಹಾಕಿಕೊಳ್ಳುವ ಹೊಸ ಯೋಜನೆ ದಿದ್ದ ಮಟ್ಟದ ಲಾಭವನ್ನು ತಂದುಕೊಡಲಿದೆ. ಹೊಸ ವಾಹನ ಅಥವಾ ಮನೆ ಖರೀದಿಸಬಹುದು.ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.ಆರ್ಥಿಕ ಲಾಭವಿರುತ್ತದೆ.

ಇದನ್ನೂ ಓದಿ : ಮನಿ ಪ್ಲಾಂಟ್ ತುಳಸಿ ಅಲ್ಲ!ಮನೆಯಲ್ಲಿನ ಎಲ್ಲಾ ವಾಸ್ತು ದೋಷ ನಿವಾರಣೆ ಮಾಡಿ ಹಣದ ಹರಿವು ಹರಿಸುತ್ತದೆ ಈ ಸಸ್ಯ !ಶ್ರಾವಣದಲ್ಲಿ ನೆಟ್ಟರೆ ಇನ್ನೂ ಶುಭ

ಮಿಥುನ ರಾಶಿ :ವರ್ಷದ ಕೊನೆಯ ಸೂರ್ಯಗ್ರಹಣವು ನಿಮ್ಮ ಕಷ್ಟಗಳಿಗೆ ಪರಿಹಾರವಾಗಿರಲಿದೆ.ನಿಮ್ಮ ಜೀವನದ ಎಲ್ಲಾ ರೀತಿಯ ಸಮಸ್ಯೆಗಳು ನಿವಾರಣೆಯಾಗುವುದು.ಆರ್ಥಿಕ ಪ್ರಗತಿ ಸಾಧಿಸುವುದು ಕೂಡಾ ಸಾಧ್ಯವಾಗುವುದು.  ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ.ಹೊಸ ಆಸ್ತಿ ಖರೀದಿಸುವ ಅವಕಾಶವಿದೆ. 

ಸಿಂಹ ರಾಶಿ :ಈ ಸೂರ್ಯಗ್ರಹಣವು ಸಿಂಹ ರಾಶಿಯವರಿಗೆ ಲಾಭದಾಯಕವಾಗಿರಲಿದೆ.  ವ್ಯಾಪಾರ ಮಾಡುವವರು ಉತ್ತಮ ಯಶಸ್ಸನ್ನು ಸಾಧಿಸುವುದು ಸಾಧ್ಯವಾಗುತ್ತದೆ. ಅದರಲ್ಲೂ ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಅತಿ ಹೆಚ್ಚು ಲಾಭವಾಗಲಿದೆ. 

ಇದನ್ನೂ ಓದಿ :ಈ ರಾಶಿಯವರ ಜಾತಕದಲ್ಲಿ ಅದ್ಭುತ ರಾಜಯೋಗ !ಹರಿದು ಬರುವುದು ಧನ ಸಂಪತ್ತು! ಹಿಂದೆಂದೂ ಕಾಣದ ಕೀರ್ತಿ ಯಶಸ್ಸು ಪ್ರಾಪ್ತಿ!

ಕನ್ಯಾರಾಶಿ :ಕನ್ಯಾರಾಶಿಯಲ್ಲಿ ಸೂರ್ಯಗ್ರಹಣ ಹಿಡಿಯುತ್ತಿದೆ. ಆದರೂ ಈ ರಾಶಿಯವರಿಗೆ ಇದು ಅನುಕೂಲಕರವಾಗಿಯೇ ಇರಲಿದೆ.ಬೇರೆ ರೀತಿಯಲ್ಲಿ ಇದನ್ನು  ಹೇಳುವುದಾದರೆ, ಈ ಸಮಯವು ನಿಮಗೆ ವರವಾಗಿ ಪರಿಣಮಿಸಬಹುದು. 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News