Lunar Eclipse Effect: ಈ ರಾಶಿಯ ಜನರು ನಾಳೆ ಚಂದ್ರನನ್ನು ನೋಡಬಾರದು..!

ವಿವಿಧ ರಾಶಿಗಳ ಮೇಲೆ ಚಂದ್ರಗ್ರಹಣದ ಪರಿಣಾಮ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅಕ್ಟೋಬರ್ 28ರಂದು ಸಂಭವಿಸುವ ಚಂದ್ರಗ್ರಹಣವು ಕೆಲವು ರಾಶಿಗಳಿಗೆ ಅಶುಭವಾಗಿದೆ. ಆದ್ದರಿಂದ ಈ ಜನರು ನಾಳೆ ಚಂದ್ರನನ್ನು ನೋಡಬಾರದು.

Written by - Puttaraj K Alur | Last Updated : Oct 27, 2023, 10:28 PM IST
  • ಅಕ್ಟೋಬರ್ 28ರ ಹುಣ್ಣಿಮೆಯ ದಿನದಂದು ಖಂಡಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ
  • ಈ ಚಂದ್ರಗ್ರಹಣವು ಭಾರತ ಸೇರಿದಂತೆ ಕೆಲವು ದೇಶಗಳಲ್ಲೂ ಗೋಚರಿಸಲಿದೆ
  • ವೃಷಭ, ಸಿಂಹ, ತುಲಾ, ಧನು ಮತ್ತು ಮೀನ ರಾಶಿಯವರಿಗೆ ಚಂದ್ರಗ್ರಹಣವು ಅಶುಭವಾಗಿದೆ
Lunar Eclipse Effect: ಈ ರಾಶಿಯ ಜನರು ನಾಳೆ ಚಂದ್ರನನ್ನು ನೋಡಬಾರದು..! title=
ರಾಶಿಗಳ ಮೇಲೆ ಚಂದ್ರಗ್ರಹಣದ ಪರಿಣಾಮ

ನವದೆಹಲಿ: ಅಕ್ಟೋಬರ್ 28ರಂದು ಹುಣ್ಣಿಮೆಯ ದಿನದಂದು ಸಂಭವಿಸಲಿರುವ ಖಂಡಗ್ರಾಸ ಚಂದ್ರಗ್ರಹಣದ ಬಗ್ಗೆ ಭಾರತದ ಜನರು ಜಾಗರೂಕರಾಗಿರಬೇಕು. ಈ ಚಂದ್ರಗ್ರಹಣ ಭಾರತ ಸೇರಿದಂತೆ  ಕೆಲವು ದೇಶಗಳಲ್ಲೂ ಗೋಚರಿಸಲಿದೆ. ಅಶ್ವಿನ ಮಾಸದ ಶುಕ್ಲ ಪಕ್ಷದ ಹುಣ್ಣಿಮೆ ಅಕ್ಟೋಬರ್ 28ರ ಈ ರಾತ್ರಿ ಅಶ್ವಿನಿ ನಕ್ಷತ್ರ ಮತ್ತು ಮೇಷದಲ್ಲಿ ಚಂದ್ರಗ್ರಹಣ ಸಂಭವಿಸುತ್ತದೆ. ಭಾರತವಲ್ಲದೆ ಏಷ್ಯಾ, ಯುರೋಪ್, ಆಫ್ರಿಕಾ, ಪಶ್ಚಿಮ ದಕ್ಷಿಣ ಪೆಸಿಫಿಕ್ ಮಹಾಸಾಗರ, ಅಮೆರಿಕದ ಪೂರ್ವ ಭಾಗ, ಅಟ್ಲಾಂಟಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರದಲ್ಲಿಯೂ ಈ ಗ್ರಹಣ ಗೋಚರಿಸಲಿದೆ.

ಈ ಸಮಯದಿಂದ ಸುತಕ ಪ್ರಾರಂಭವಾಗಲಿದೆ

ಭಾರತೀಯ ಕಾಲಮಾನದ ಪ್ರಕಾರ ಚಂದ್ರಗ್ರಹಣದ ನೆರಳಿನ ಪ್ರವೇಶ ರಾತ್ರಿ 11:32ಕ್ಕೆ, ಸ್ಪರ್ಶ ರಾತ್ರಿ 1:05ಕ್ಕೆ, ಗ್ರಹಣದ ಮಧ್ಯರಾತ್ರಿ 1:44ಕ್ಕೆ, ಮೋಕ್ಷ ರಾತ್ರಿ 2.23 ಮತ್ತು ನೆರಳಿನ ನಿರ್ಗಮನವು ಮಧ್ಯಾಹ್ನ 3:56ಕ್ಕೆ ಇರುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ ಸೂತಕವು ದಿನದಲ್ಲಿ 4.05ರಿಂದ ಪ್ರಾರಂಭವಾಗುತ್ತದೆ. ಈ ಗ್ರಹಣ ಗೋಚರವಾಗುವ ಪ್ರದೇಶಗಳಲ್ಲಿ ವೇಧ, ಸೂತಕ, ಸ್ನಾನ, ದಾನ ಇತ್ಯಾದಿ ಎಲ್ಲ ನಿಯಮಗಳನ್ನೂ ಪಾಲಿಸಲಾಗುವುದು.

ಇದನ್ನೂ ಓದಿ: ಕೂದಲುದುರುವ ಸಮಸ್ಯೆಗೆ ರಾಮಬಾಣ ಉಪಾಯ ಈ ಮೊಟ್ಟೆ ಎಣ್ಣೆ!

ವೃಷಭ, ಸಿಂಹ, ತುಲಾ, ಧನು ಮತ್ತು ಮೀನ ರಾಶಿಯವರಿಗೆ ಚಂದ್ರಗ್ರಹಣವು ಅಶುಭವಾಗಿದ್ದು, ಮೇಷ, ಕನ್ಯಾ ಮತ್ತು ಮಕರ ರಾಶಿಯವರಿಗೆ ಸಾಮಾನ್ಯವಾಗಿರುತ್ತದೆ. ಮಿಥುನ, ಕರ್ಕ, ವೃಶ್ಚಿಕ ಮತ್ತು ಕುಂಭ ರಾಶಿಯವರಿಗೆ ಇದು ಉತ್ತಮವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಗ್ರಹಣದ ಪರಿಣಾಮವು ಅಶುಭಕರವಾಗಿರುವ ರಾಶಿಗಳು ನಾಳೆ ಅಪ್ಪಿತಪ್ಪಿಯೂ ಚಂದ್ರನನ್ನು ನೋಡಬಾರದು. ಇದಲ್ಲದೆ ಗ್ರಹಣದ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು.

ಗ್ರಹಣದ ಸಮಯದಲ್ಲಿ ಈ ನಿಯಮ ಪಾಲಿಸಿ

ಗ್ರಹಣದ ಸಮಯದಲ್ಲಿ ಗರ್ಭಿಣಿಯರು ವಿಶೇಷವಾಗಿ ಜಾಗೃತರಾಗಿರಬೇಕು. ಸೂತಕ ಆರಂಭವಾದ ತಕ್ಷಣ ಮೇಷ ರಾಶಿಯ ಜನರು ಗ್ರಹಣ ಮುಗಿಯುವವರೆಗೂ ಏನನ್ನೂ ತಿನ್ನಬಾರದು. ಅವರು ಈ ಅವಧಿಯಲ್ಲಿ ಉಪವಾಸ ಮಾಡಬೇಕಾಗುತ್ತದೆ. ಗ್ರಹಣ ಮುಗಿದ ನಂತರ ಅವರು ದಾನ ಮಾಡಬೇಕು. ಏಕೆಂದರೆ ಈ ಗ್ರಹಣವು ಮೇಷ ರಾಶಿಯಲ್ಲಿ ಮಾತ್ರ ಸಂಭವಿಸುತ್ತದೆ ಮತ್ತು ಈ ರಾಶಿಯ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: 4 ಗಂಟೆ ಚಂದ್ರಗ್ರಹಣ-20 ಗಂಟೆ ಶರದ್ ಪೂರ್ಣಿಮೆ: ಸೂತಕದ ಅವಧಿಯಲ್ಲಿ ಹಾಲಿಗೆ ಈ ವಸ್ತು ಬೆರೆಸಿದರೆ ಸಿಗಲಿದೆ ಶುಭಫಲ

ಇದಲ್ಲದೆ ಗ್ರಹಣದ ಅವಧಿಯಲ್ಲಿ ಪ್ರಧಾನ ದೇವತೆಗಳಾದ ಶ್ರೀರಾಮ, ಕೃಷ್ಣ, ಹನುಮಂತ ಮುಂತಾದ ದೇವರ ಮಂತ್ರವನ್ನು ಪಠಿಸಿ. ಇದಕ್ಕಾಗಿ ನೀವು ಏಕಾಂತವನ್ನು ಆರಿಸಿಕೊಳ್ಳಬೇಕು ಮತ್ತು ನಿಮ್ಮ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡು ಕುಳಿತುಕೊಳ್ಳಬೇಕು. ಗ್ರಹಣ ಕಾಲದಲ್ಲಿ ಯಾವುದೇ ವಿಗ್ರಹವನ್ನು ಮುಟ್ಟಬಾರದು. ನಿಮಗೆ ಯಾವುದೇ ಮಂತ್ರ ಗೊತ್ತಿಲ್ಲದಿದ್ದರೆ ಕೇವಲ ದೇವರ ಹೆಸರನ್ನು ಜಪಿಸಬೇಕು. ಜಪ ಮುಗಿದ ನಂತರ ನೀವು ಧರಿಸಿರುವ ಬಟ್ಟೆಯೊಂದಿಗೆ ಸ್ನಾನ ಮಾಡಿ, ಅಂದರೆ ಮೊದಲು ಎಲ್ಲಾ ಬಟ್ಟೆಗಳನ್ನು ಒದ್ದೆ ಮಾಡಿ ನಂತರ ಸ್ನಾನ ಮಾಡಿ. ನಂತರ ದಾನ ಮಾಡಿ ಏನಾದರೂ ಆಹಾರ ಸೇವಿಸಿರಿ.  

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News