ನಾಳೆ ಜನ್ಮಾಷ್ಟಮಿ ಪೂಜೆಗೆ ಕೇವಲ 45 ನಿಮಿಷ ಶುಭ ಸಮಯ..! ಈ ವೇಳೆ ಪೂಜೆ ಮಾಡಿದ್ರೆ ಒಳ್ಳೆಯದು..

Krishna Janmashtami 2024 : ಜನ್ಮಾಷ್ಟಮಿ ದಿನಾಂಕ ಮತ್ತು ಪೂಜೆಯ ಸಮಯದ ಬಗ್ಗೆ ಹಲವರಲ್ಲಿ ಗೊಂದಲವಿದೆ. ನಿಮಗೂ ಸಹ ಈ ಕುರಿತ ಪ್ರಶ್ನೆ ಕಾಡುತ್ತಿದ್ದರೆ, ಬನ್ನಿ ಪರಿಹರಿಸೋಣ. ಈ ವರ್ಷ ಅಷ್ಟಮಿ ತಿಥಿ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಜನ್ಮಾಷ್ಟಮಿ ದಿನದಂದು ಯಾವ ಮುಹೂರ್ತ ಎಂದು ಈ ಕೆಳಗೆ ನೀಡಲಾಗಿದೆ.. ಗಮನಿಸಿ.. 

Written by - Krishna N K | Last Updated : Aug 25, 2024, 08:51 PM IST
    • ಜನ್ಮಾಷ್ಟಮಿ ದಿನಾಂಕ ಮತ್ತು ಪೂಜೆಯ ಸಮಯದ ಬಗ್ಗೆ ಹಲವರಲ್ಲಿ ಗೊಂದಲವಿದೆ.
    • ಶ್ರಾವಣ ಮಾಸದ ಅಷ್ಟಮಿ ತಿಥಿಯಂದು ದೇಶದೆಲ್ಲೆಡೆ ಕೃಷ್ಣ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ.
    • ಅಷ್ಟಮಿ ತಿಥಿ ಯಾವಾಗ, ಕೃಷ್ಣನ ಪೂಜೆ ಯಾವಾಗ ಮಾಡಬೇಕು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ನಾಳೆ ಜನ್ಮಾಷ್ಟಮಿ ಪೂಜೆಗೆ ಕೇವಲ 45 ನಿಮಿಷ ಶುಭ ಸಮಯ..! ಈ ವೇಳೆ ಪೂಜೆ ಮಾಡಿದ್ರೆ ಒಳ್ಳೆಯದು.. title=

Janmashtami 2024 Puja time : ಹಿಂದೂ ಧರ್ಮದಲ್ಲಿ ಜನ್ಮಾಷ್ಟಮಿಗೆ ವಿಶೇಷ ಮಹತ್ವವಿದೆ. ಶ್ರಾವಣ ಮಾಸದ ಅಷ್ಟಮಿ ತಿಥಿಯಂದು ದೇಶದೆಲ್ಲೆಡೆ ಕೃಷ್ಣ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ. ಶ್ರೀ ಕೃಷ್ಣನು ಭಗವಾನ್ ವಿಷ್ಣುವಿನ ಎಂಟನೇ ಅವತಾರ. ಜನ್ಮಾಷ್ಟಮಿಯನ್ನು ಗೋಕುಲಾಷ್ಟಮಿ ಎಂದೂ ಆಚರಿಸಲಾಗುತ್ತದೆ. ಈ ವರ್ಷ ಜನ್ಮಾಷ್ಟಮಿಯನ್ನು ಆಗಸ್ಟ್ 26 ಅಥವಾ 27 ರಂದು ಆಚರಿಸಲಾಗುತ್ತದೆ. 

ಜನ್ಮಾಷ್ಟಮಿ ಯಾವಾಗ? : ವೈದಿಕ ಪಂಚಾಂಗದ ಪ್ರಕಾರ ಶ್ರಾವಣ ಮಾಸದ ಎಂಟನೇ ತಿಥಿಯು ಆಗಸ್ಟ್ 25 ರ ಭಾನುವಾರದಂದು ಮಧ್ಯಾಹ್ನ 3.39 ಕ್ಕೆ ಪ್ರಾರಂಭವಾಗುತ್ತದೆ. ಜನ್ಮಾಷ್ಟಮಿ ಆಗಸ್ಟ್ 26 ಮತ್ತು ಸೋಮವಾರ ಮಧ್ಯಾಹ್ನ 2.19 ರವರೆಗೆ ಇರುತ್ತದೆ. ಉದಯ ತಿಥಿಯ ಪ್ರಕಾರ ಆಗಸ್ಟ್ 26 ಮತ್ತು ಸೋಮವಾರದಂದು ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಆಗಸ್ಟ್ 27 ರಂದು ದಹಿ ಹಂಡಿ ಉತ್ಸವ ನಡೆಯಲಿದೆ. 

ಇದನ್ನೂ ಓದಿ:ಕಷ್ಟಗಳಿಂದ ಬೆಂದು ಹೋಗಿರುವ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಸಲಿದ್ದಾನೆ ಶನಿ ಮಹಾತ್ಮ !ಹೆಜ್ಜೆ ಹೆಜ್ಜೆಯಲ್ಲಿಯೂ ಜೊತೆ ನಿಂತು ಕಾಯುವನು ಛಾಯಾಪುತ್ರ

ಜನ್ಮಾಷ್ಟಮಿ ಪೂಜೆ ಮುಹೂರ್ತ : ಕೃಷ್ಣ ಜನ್ಮಾಷ್ಟಮಿ ಪೂಜೆಯ ಸಮಯವು ಮಧ್ಯಾಹ್ನ 12:00 ರಿಂದ 12:45 ರವರೆಗೆ ಇರುತ್ತದೆ. ಅಂದರೆ ಈ ವರ್ಷ ಗೋಪಾಲನಿಗೆ ಪೂಜೆ ಮಾಡುವ ಸಮಯ ಕೇವಲ 45 ನಿಮಿಷಗಳು. ಆಗಸ್ಟ್ 26 ರಂದು ರೋಹಿಣಿ ನಕ್ಷತ್ರವು ಮಧ್ಯಾಹ್ನ 3.55 ಕ್ಕೆ ಪ್ರಾರಂಭವಾಗಿ ಆಗಸ್ಟ್ 27 ರಂದು ಮಧ್ಯಾಹ್ನ 3.38 ಕ್ಕೆ ಕೊನೆಗೊಳ್ಳುತ್ತದೆ. ಜನ್ಮಾಷ್ಟಮಿ ನಿಶಿತಾ ಪೂಜೆಯ ಸಮಯ 12.01 ನಿಮಿಷದಿಂದ 12.45 ನಿಮಿಷಗಳವರೆಗೆ ಇರುತ್ತದೆ.

ಕೃಷ್ಣ ಜನ್ಮ ಪೂಜೆ ಸಮಾರಂಭ : ಜನ್ಮಾಷ್ಟಮಿಯಂದು ರಾತ್ರಿ ಶ್ರೀಕೃಷ್ಣನನ್ನು ಪೂಜಿಸಬೇಕು. ಮೊದಲು ರಾಧಾ ರಮಣ, ರುಕ್ಮಿಣಿ ವಲ್ಲಭ ವಿಗ್ರಹಕ್ಕೆ ಗಂಗಾಜಲದಿಂದ ಸ್ನಾನ ಮಾಡಿಸಿ. ನಂತರ ಹಾಲು ಅಥವಾ ಪಂಚಾಮೃತದಿಂದ ಅಭಿಷೇಕ ಮಾಡಿ. ಅದರ ನಂತರ ವಿಗ್ರಹಕ್ಕೆ ಗೋಪಿಚಂದನವನ್ನು ಲೇಪಿಸಿ. ತನಂತರ ಶುದ್ಧ ಮತ್ತು ಹೊಸ ಬಟ್ಟೆಗಳನ್ನು ಧರಿಸಿ.. ಬಾಲ ಕೃಷ್ಣನನ್ನು ಅಲಂಕರಿಸಿ, ಹೂವಿನ ಹಾರ, ತುಳಸಿ ಮಾಲೆ ಹೀಗೆ ವಿವಿಧ ಹೂಗಳಿಂದ ಸೃಷ್ಟಿ ಕರ್ತನನ್ನು ಅಲಂಕರಿಸಿ.. ದೇವರ ಮುಂದೆ ತುಪ್ಪದ ದೀಪವನ್ನು ಹಚ್ಚಿ. ಅದರ ನಂತರ ಬಾಲ ಗೋಪಾಲ್‌ಗೆ ಆರತಿ ಮಾಡಿ ಸಿಹಿತಿಂಡಿಗಳನ್ನು ಅರ್ಪಿಸಿ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee Kannada News ಅದನ್ನು ಖಚಿತಪಡಿಸುವುದಿಲ್ಲ.)

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News