ಈ ಜನರ ಸ್ಪರ್ಶದಿಂದ ಮಣ್ಣು ಕೂಡ ಹೊನ್ನಾಗುತ್ತದೆ, ಕಾರಣ ತುಂಬಾ ರೋಚಕವಾಗಿದೆ!

How To Become Rich:ಕೈತುಂಬಾ ಹಣ ಸಂಪಾದಿಸಿ ನೆಮ್ಮದಿಯ ಜೀವನ ನಡೆಸುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಕೆಲವರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುತ್ತಾರೆ. ಚಾಣಕ್ಯ ನೀತಿಯಲ್ಲಿ ಹೇಳಿರುವ ವಿಷಯಗಳನ್ನು ಅಳವಡಿಸಿಕೊಂಡರೆ ನೀವೂ ಕೂಡ ಬೇಗ ಶ್ರೀಮಂತರಾಗುವ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಬಹುದು.  

Written by - Nitin Tabib | Last Updated : Jul 20, 2023, 06:26 PM IST
  • ಯಾರನ್ನೂ ಎಂದಿಗೂ ಮೋಸ ಮಾಡದವರು, ಬದಲಿಗೆ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಹಣವನ್ನು ಸಂಪಾದಿಸುತ್ತಾರೆ.
  • ಅದರ ಜೊತೆಗೆ ತಮ್ಮ ಗಳಿಕೆಯ ಒಂದು ಭಾಗವನ್ನು ದಾನಕ್ಕಾಗಿ ಖರ್ಚು ಮಾಡುತ್ತಾರೆ, ಅವರ ಮೇಲೆ ತಾಯಿ ಲಕ್ಷ್ಮಿ ಯಾವಾಗಲೂ ದಯೆ ತೋರುತ್ತಾಳೆ.
  • ಅಂತಹ ಜನರು ಯಾವುದೇ ಕೆಲಸ ಅಥವಾ ವ್ಯವಹಾರವನ್ನು ಮಾಡಿದರು ಅದರಲ್ಲಿ ಅವರು ನಿರಂತರವಾಗಿ ಪ್ರಗತಿಯನ್ನು ಸಾಃಡಿಸುತ್ತಾರೆ ಎನ್ನಲಾಗಿದೆ.
ಈ ಜನರ ಸ್ಪರ್ಶದಿಂದ ಮಣ್ಣು ಕೂಡ ಹೊನ್ನಾಗುತ್ತದೆ, ಕಾರಣ ತುಂಬಾ ರೋಚಕವಾಗಿದೆ! title=

ಬೆಂಗಳೂರು: ಆಚಾರ್ಯ ಚಾಣಕ್ಯ ಅವರು ವಿಶ್ವದ ಶ್ರೇಷ್ಠ ಅರ್ಥಶಾಸ್ತ್ರಜ್ಞ, ರಾಜತಾಂತ್ರಿಕ ಮತ್ತು ರಾಜಕಾರಣಿಯಾಗಿದ್ದರು. ಅವರ ನೀತಿಗಳು ಇಂದಿಗೂ ಪ್ರಸ್ತುತವಾಗಿವೆ. ಚಾಣಕ್ಯನ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸುಲಭವಾಗಿ ಸಂತೋಷ ಮತ್ತು ಯಶಸ್ವಿ ಜೀವನವನ್ನು ನಡೆಸಬಹುದು. ಚಾಣಕ್ಯ ನೀತಿಯಲ್ಲಿ ಶ್ರೀಮಂತರಾಗಲು ಹಲವು ಸಲಹೆಗಳನ್ನು ನೀಡಲಾಗಿದೆ . ಅವುಗಳನ್ನು ಅಳವಡಿಸಿಕೊಂಡರೆ (Spiritual News In Kannada) ವ್ಯಕ್ತಿ ಶೀಘ್ರ ಶ್ರೀಮಂತನಾಗಬಹುದು. ಇದೇ ವೇಳೆ, ಹಣದ ಮುಗ್ಗಟ್ಟು ಮತ್ತು ನಷ್ಟವನ್ನು ತಪ್ಪಿಸುವ ಮಾರ್ಗಗಳನ್ನು ಸಹ ಹೇಳಲಾಗಿದೆ. ಸಂಪತ್ತಿನ ದೇವತೆಯಾದ ಲಕ್ಷ್ಮಿ ಯಾರ ಮೇಲೆ ದಯೆ ತೋರುತ್ತಾಳೆ ಮತ್ತು ಯಾರನ್ನು ಇಷ್ಟಪಡುವುದಿಲ್ಲ ಎಂದು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ.

ಈ ಚಾಣಕ್ಯ ನೀತಿಯ ಈ ಸಲಹೆಗಳು ನಿಮ್ಮನ್ನು ಶ್ರೀಮಂತರನ್ನಾಗಿಸುತ್ತವೆ
ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ (Chanakya Niti) ಹೇಳಿದ ಕೆಲ ವಿಷಯಗಳು, ವ್ಯಕ್ತಿಯನ್ನು ಶ್ರೀಮಂತನನ್ನಾಗಿ ಮಾಡುವುದಲ್ಲದೆ, ಅವನಿಗೆ ಅಪಾರ ಘನತೆ ಗೌರವವನ್ನು ಕೂಡ ತಂದು ಕೊಡುತ್ತವೆ. ಅಲ್ಲದೆ, ಆ ವ್ಯಕ್ತಿಯು ಎಂದಿಗೂ ಬಡವನಾಗುವುದಿಲ್ಲ, ಬದಲಿಗೆ ಅವನ ಸಂಪತ್ತು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗಿ, ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಅಂಥವರು ಮಣ್ಣು ಮುಟ್ಟಿದರೂ ಅದು ಹೊನ್ನಾಗುತ್ತದೆ ಎಂದರೆ ತಪ್ಪಾಗಲಾರದು. ಅಂದರೆ ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯುತ್ತಾನೆ. ತಾಯಿ ಲಕ್ಷ್ಮಿ ಯಾರ ಮೇಲೆ ಯಾವಾಗಲೂ ಜನರಿಗೆ ದಯೆ ತೋರಿಸುತ್ತಾಳೆ ಎಂಬುದನ್ನೂ ಚಾಣಕ್ಯ ನೀತಿಯ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಚಾಣಕ್ಯ ನೀತಿಯ ಪ್ರಕಾರ, ಯಾವಾಗಲೂ ಧನಾತ್ಮಕವಾಗಿರುವ ಜನರು, ಇತರರ ಬಗ್ಗೆ ಚೆನ್ನಾಗಿ ಯೋಚಿಸುತ್ತಾರೆ ಮತ್ತು ಇತರರಿಗೆ ಸಹಾಯ ಮಾಡುತ್ತಾರೆ. ಅಂತಹ ಜನರ ಜೀವನದ ತೊಂದರೆಗಳು ತಾನಾಗಿಯೇ ಅಂತ್ಯವಾಗುತ್ತವೆ. ಅಂತಹ ಜನರು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಮತ್ತು ಅಪಾರ ಸಂಪತ್ತಿನ ಒಡೆಯರಾಗುತ್ತಾರೆ. ಈ ಜನರು ಜೀವನದಲ್ಲಿ ಎಲ್ಲಾ ರೀತಿಯ ಸಂತೋಷವನ್ನು ಪಡೆಯುತ್ತಾರೆ.

ಇದನ್ನೂ ಓದಿ-ಹುಟ್ಟಿನಿಂದಲೇ ರಾಜಯೋಗ ಪಡೆದುಕೊಂಡು ಜನಿಸುತ್ತಾರೆ ಈ ರಾಶಿಗಳ ಜನರು, ನಿಮ್ಮ ರಾಶಿ ಇದೆಯಾ ಈ ಪಟ್ಟಿಯಲ್ಲಿ!

ಯಾರನ್ನೂ ಎಂದಿಗೂ ಮೋಸ ಮಾಡದವರು, ಬದಲಿಗೆ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಹಣವನ್ನು ಸಂಪಾದಿಸುತ್ತಾರೆ. ಅದರ ಜೊತೆಗೆ ತಮ್ಮ ಗಳಿಕೆಯ ಒಂದು ಭಾಗವನ್ನು ದಾನಕ್ಕಾಗಿ ಖರ್ಚು ಮಾಡುತ್ತಾರೆ, ಅವರ ಮೇಲೆ ತಾಯಿ ಲಕ್ಷ್ಮಿ ಯಾವಾಗಲೂ ದಯೆ ತೋರುತ್ತಾಳೆ. ಅಂತಹ ಜನರು ಯಾವುದೇ ಕೆಲಸ ಅಥವಾ ವ್ಯವಹಾರವನ್ನು ಮಾಡಿದರು ಅದರಲ್ಲಿ ಅವರು ನಿರಂತರವಾಗಿ ಪ್ರಗತಿಯನ್ನು ಸಾಃಡಿಸುತ್ತಾರೆ ಎನ್ನಲಾಗಿದೆ.

ಸಮಾಜದ ಆರೋಗ್ಯದ ಬಗ್ಗೆ ಯೋಚಿಸುವವರು. ಯಾರು ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುತ್ತಾರೆ, ತಮ್ಮ ಹಣವನ್ನು ದಾನ-ಧರ್ಮದಲ್ಲಿ ವ್ಯಯಿಸುತ್ತಾರೆ, ಅವರಿಗೆ ಹಣ ಮಾತ್ರವಲ್ಲ, ಸ್ಥಾನ, ಪ್ರತಿಷ್ಠೆಯೂ ಸಿಗುತ್ತದೆ. ಅವರ ಕುಟುಂಬ ಯಾವಾಗಲೂ ಸಂತೋಷದ, ಗೌರವಾನ್ವಿತ ಮತ್ತು ಸಮೃದ್ಧಿಯ ಜೀವನವನ್ನು ಸಾಗಿಸುತ್ತದೆ. 

ಇದನ್ನೂ ಓದಿ-ಹಾಲಿನ ಚಹಾ ಅಲ್ಲ, ನಿತ್ಯ ಈ ಚಹಾ ಸೇವಿಸಿ ಕೆಲವೇ ದಿನಗಳಲ್ಲಿ ತೂಕ ಹೆಚ್ಚಳ ಸಮಸ್ಯೆಯಿಂದ ಮುಕ್ತಿ ಸಿಗುತ್ತೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News