Raksha Bandhan 2021:500 ವರ್ಷಗಳ ನಂತರ ರೂಪುಗೊಂಡಿದೆ ಮಹಾಯೋಗ – 6 ರಾಶಿಗಳಿಗೆ ಬಂಪರ್ ಅದೃಷ್ಟ.!

474 ವರ್ಷಗಳ ಬಳಿಕ ರಕ್ಷಾ ಬಂಧನ ಶುಭದಿನದಂದು ನಿಮ್ಮ ರಾಶಿ ಚಕ್ರ ನಿಮಗೆ ಅದೃಷ್ಟ ತರಲಿದೆ.  500 ವರ್ಷಗಳ ನಂತರ ರೂಪುಗೊಳ್ಳಲಿದೆ ಮಹಾ ಯೋಗ.

ನವದೆಹಲಿ : ಇಂದು, 22 ಆಗಸ್ಟ್ ಭಾನುವಾರ, ಇಡೀ ದೇಶವು ರಕ್ಷಾ ಬಂಧನದ ಹಬ್ಬವನ್ನು ಆಚರಿಸುತ್ತಿದೆ (Raksha Bandhan 2021). ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ರಕ್ಷಾ ಬಂಧನ ಆಚರಿಸಲಾಗುತ್ತದೆ. 474 ವರ್ಷಗಳ ಬಳಿಕ ರಕ್ಷಾ ಬಂಧನ ಶುಭದಿನದಂದು ನಿಮ್ಮ ರಾಶಿ ಚಕ್ರ ನಿಮಗೆ ಅದೃಷ್ಟ ತರಲಿದೆ.  
500 ವರ್ಷಗಳ ನಂತರ ರೂಪುಗೊಳ್ಳಲಿದೆ ಮಹಾ ಯೋಗ. ಇದರಿಂದ ಆರು ರಾಶಿಗಳ (Zodiac sign) ಭಾಗ್ಯವೇ ಬದಲಾಗಲಿದೆ. ಇವತ್ತು ಧನಿಷ್ಠ ನಕ್ಷತ್ರ. ಜೊತೆಗೆ ಇವತ್ತು ಗುರು ಮತ್ತು ಚಂದ್ರ  ಒಂದೇ ರಾಶಿಯಲ್ಲಿರಲಿವೆ. ಹಾಗಾಗಿ, ಗಜಕೇಸರಿ ಯೋಗ ಕೂಡಾ ನಿಮ್ಮದಾಗಲಿದೆ.  ಇಷ್ಟೇ ಅಲ್ಲ ಸೂರ್ಯ, ಮಂಗಳ ಮತ್ತು ಬುಧ ಗ್ರಹ ಕೂಡಾ ಒಂದೇ ರಾಶಿ ಅಂದರೆ ಸಿಂಹ ರಾಶಿಯಲ್ಲಿರಲಿದೆ. ಆರು ರಾಶಿಗೆ ಇದು ಶುಭ ಫಲ,  ಅದೃಷ್ಟ ತರಲಿದೆ.  ಆ ರಾಶಿಗಳಲ್ಲಿ ನೀವಿದ್ದೀರಾ ನೋಡಿ. 
ಇನ್ನು ಯಾವ ರಾಶಿಗೆ ಯಾವ ಫಲ ನೋಡೋಣ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

ಮೇಷ : ಮೇಷ ಜಾತಕರಿಗೆ ಉದ್ಯೋಗದಲ್ಲಿ ಉನ್ನತಿ ಸಿಗಲಿದೆ. ಧನಲಾಭವಾಗಲಿದೆ. ಜನ ಸಂಪರ್ಕ ಚೆನ್ನಾಗಿ ಇಟ್ಟುಕೊಳ್ಳಬೇಕು. ಪರಿವಾರ, ಸ್ನೇಹಿತರು ಮತ್ತು ಹಿತೈಷಿಗಳೊಂದಿಗೆ ಸಮಯ ಕಳೆಯಬೇಕು.

2 /6

ಮಿಥುನ: ಮಿಥುನ ರಾಶಿಯವರಿಗೆ ಈ ಮಹಾರಾಶಿ ಸಂಯೋಗ ಶುಭ ತರಲಿದೆ. ರಕ್ಷಾ ಬಂಧನವೂ ಶುಭ ಲಾಭ ತರಲಿದೆ. ಧನಲಾಭವಾಗಲಿದೆ. ಹಳೆಯ ಸಮಸ್ಯೆಗಳು ದೂರವಾಗಲಿದೆ. ಪರಿವಾರದಲ್ಲಿ ಖುಷಿ ನೆಲೆಸಲಿದೆ. ಯಾವುದೇ ಪ್ರವಾಸಕ್ಕೂ ನೀವು ತೆರಳಬಹುದಾಗಿದೆ. 

3 /6

ಕನ್ಯಾ: ಈ ರಾಶಿಯವರಿಗೆ ಅವರು ಎಣಿಸಿದಕ್ಕಿಂತ ಹೆಚ್ಚಿನ ಲಾಭ ಸಿಗಲಿದೆ. ಅರ್ಥಿಕ ಸ್ಥಿತಿ ಉನ್ನತಿಗೇರಲಿದೆ. ಮಾನ – ಸಮ್ಮಾನ ಸಿಗಲಿದೆ. ನೌಕರಿಯಲ್ಲಿ ಲಾಭ ಸಿಗಲಿದೆ.  ಮಹಿಳೆಯರು ಹೊಸ ಕಾರ್ಯ ಶುರು ಮಾಡುವುದಾದರೆ, ಅದಕ್ಕೆ ಶುಭ ಸಂಯೋಗ ಒದಗಿ ಬರಲಿದೆ.

4 /6

ತುಲಾ: ತುಲಾ ರಾಶಿಯವರ ಭಾಗ್ಯ ತೆರೆಯಲಿದೆ. ಅದೃಷ್ಟ ಬದಲಾಗಲಿದೆ. ಕೆರಿಯರ್ ಪ್ರವರ್ಧಮಾನಕ್ಕೆ ಬರಲಿದೆ.  ಹೊಸ ಜನರು ಭೇಟಿಯಾಗಲಿದ್ದಾರೆ. ಇದರಿಂದ ನಿಮಗೆ ಲಾಭವಾಗಲಿದೆ.  

5 /6

ಕುಂಭ ರಾಶಿ: ಅರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಸ್ಥಗಿತಗೊಂಡ ಕೆಲಸಗಳು ಮುಂದುವರಿಯಲಿದೆ.  ಅಂಥಹ ಕೆಲಸಗಳನ್ನು ಪೂರ್ಣಗೊಳಿಸಲು ಉತ್ತಮ ಅವಕಾಶ ಒದಗಿಬರಲಿದೆ. ವ್ಯಾಪಾರದಲ್ಲಿ ಲಾಭ  ಇರಲಿದೆ. ಅವಿವಾಹಿತರಿಗೆ ಮದುವೆಯ ಯೋಗ ಕೂಡಿ ಬರಲಿದೆ.  

6 /6

ಮೀನ :ಈ ರಾಶಿಯವರಿಗೆ ಇದು ಶುಭ ಸಮಯ. ನಿಮ್ಮ ಕಾರ್ಯಗಳು ಒಂದು ರೂಪು ಪಡೆಯಲಿದೆ. ಹಣಕಾಸು ಸ್ಥಿತಿ ನಿಂತ ಕಾರ್ಯಗಳು ಮುಂದುವರಿಯಲಿದೆ.  ಪ್ರವಾಸದ ಯೋಗ ಇದೆ.