ರವಿಚಂದ್ರನ್ ಪಾತ್ರಗಳಿಗೆ ಧ್ವನಿಯಾಗಿದ್ದ ಈ ನಟ ಯಾರು ಗೊತ್ತಾ..?ಕೋನಿವರೆಗೂ ಈತನಿಗೆ ಸಿಗಲಿಲ್ಲ ಕೆಲಸಕ್ಕೆ ತಕ್ಕ ಫಲ

Srinivas Prabhu: ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್, ಆಗಿನ ಕಾಲಕ್ಕೆ ಕನ್ನಡ ಚಿತ್ರರಂಗದಲ್ಲಿ ಅನೇಕ ಕನ್ನಡ ಹಿಟ್ ಸಿನಿಮಾಗಳನ್ನು ನೀಡಿದವರು, ಸ್ಯಾಂಡ್‌ವುಡ್‌ನಲ್ಲಿ ಪ್ರೇಮಲೋಕ ಸೃಷ್ಟಿಸಿದವರು. ಇಂದಿಗೂ, ಈ ಸಿನಿಮಾಗಳು ಕಿರುತೆರೆಯಲ್ಲಿ ಪ್ರಸಾರವಾದರೆ ಅವುಗಳನ್ನು ನೋಡುವ ಒಂದು ವಿಶೇಷ ಪ್ರೇಕ್ಷಕವರ್ಗವೇ ಇದೆ. ರವಿಚಂದ್ರನ್ ಅವರು ಆರಂಭದ ಸಿನಿಮಾ ಯಾತ್ರೆಯಲ್ಲಿ ತಮ್ಮ ಸಿನಿಮಾಗಳಿಗೆ ತಾವು ಧ್ವಿನಿ ನೀಡುತ್ತಿರಲಿಲ್ಲ, ಬದಲಿಗೆ ಅವರ ಸಿನಿಮಾಗಳಿಗೆ ಧ್ವನಿಯಾಗಿದ್ದು ನಟ ಹಾಗೂ ಕಂಠದಾನ ಕಲಾವಿದ ಶ್ರೀನಿವಾಸ್ ಪ್ರಭು.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್, ಆಗಿನ ಕಾಲಕ್ಕೆ ಕನ್ನಡ ಚಿತ್ರರಂಗದಲ್ಲಿ ಅನೇಕ ಕನ್ನಡ ಹಿಟ್ ಸಿನಿಮಾಗಳನ್ನು ನೀಡಿದವರು, ಸ್ಯಾಂಡ್‌ವುಡ್‌ನಲ್ಲಿ ಪ್ರೇಮಲೋಕ ಸೃಷ್ಟಿಸಿದವರು. ಇಂದಿಗೂ, ಈ ಸಿನಿಮಾಗಳು ಕಿರುತೆರೆಯಲ್ಲಿ ಪ್ರಸಾರವಾದರೆ ಅವುಗಳನ್ನು ನೋಡುವ ಒಂದು ವಿಶೇಷ ಪ್ರೇಕ್ಷಕವರ್ಗವೇ ಇದೆ. ರವಿಚಂದ್ರನ್ ಅವರು ಆರಂಭದ ಸಿನಿಮಾ ಯಾತ್ರೆಯಲ್ಲಿ ತಮ್ಮ ಸಿನಿಮಾಗಳಿಗೆ ತಾವು ಧ್ವಿನಿ ನೀಡುತ್ತಿರಲಿಲ್ಲ, ಬದಲಿಗೆ ಅವರ ಸಿನಿಮಾಗಳಿಗೆ ಧ್ವನಿಯಾಗಿದ್ದು ನಟ ಹಾಗೂ ಕಂಠದಾನ ಕಲಾವಿದ ಶ್ರೀನಿವಾಸ್ ಪ್ರಭು.

2 /5

ಇಂದಿಗೂ ಕೂಡ ಇದರ ಬಗ್ಗೆ ಹಲವರಿಗೆ ಗೊತ್ತಿಲ್ಲದೆ ಇರಬಹುದು, ರವಿಚಂದ್ರನ್ ಅವರ 20 ಕ್ಕೂ ಹೆಚ್ಚು ಹಿಟ್ ಸಿನಿಮಾಗಳಿಗೆ ಧ್ವನಿ ನೀಡದವರು ರವಿಚಂದ್ರನ್‌ ಅಲ್ಲ ಬದಲಿಗೆ ಕಂಠದಾನ ಕಲಾವಿದ ಶ್ರೀನಿವಾಸ್ ಪ್ರಭು. 'ಸಾಹಸ ಸಿಂಹ' ಚಿತ್ರದ ಮೂಲಕ ಆರಂಭವಾದ ಕಂಠದಾನದ ಪಯಣ, 'ಅಭಿಮನ್ಯು' ಚಿತ್ರದವರೆಗೆ ಮುಂದುವರೆದಿತ್ತು. ಆದರೆ, ಪ್ರಭು ಅವರ ಈ ಕೆಲಸಕ್ಕೆ ತಕ್ಕ ಗೌರವ ಮತ್ತು ಸಂಭಾವನೆ ಮಾತ್ರ ಕೊನೆವರೆಗೂ ಸಿಗಲೇ ಇಲ್ಲ. ಈ ಕುರಿತು ಸ್ವತಹಃ ಶ್ರೀನಿವಾಸ ಪ್ರಭು ಅವರೇ ಯೂಟ್ಯೂಬ್‌ ಚಾನೆಲ್‌ನ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.  

3 /5

ರವಿಚಂದ್ರನ್‌ ಮೊದಲಿಗೆ ಸಿನಿಮಾ ಮಾಡಲು ಶುರುಮಾಡಿದಾಗ ಅವರ ಧ್ವನಿ ನಿರ್ಮಾಕರಿಗೆ ಇಷ್ಟವಾಗಿರಲಿಲ್ಲ. ಇದೇ ಕಾರಣದಿಂದ ನಿರ್ಮಾಪಕರು ಪ್ರಭು ಅವರನ್ನು ಸ್ಟೂಡಿಯೋಗೆ ಕರೆಸಿ ಅವರ ಧ್ವನಿಯನ್ನು ರೆಕಾರ್ಡ್ ಮಾಡಿಸುತ್ತಾರೆ, ಈ ಧ್ವನಿಯನ್ನು ಕೇಳಿದ್ದ ವೀರಸ್ವಾಮಿಗೆ ಅದು ಇಷ್ಟವಾಗುತ್ತದೆ. ರವಿಚಂದ್ರನ್‌ ಜೊತೆ ಚರ್ಚೆ ಮಾಡಿ ಅವರ ಸಿನಿಮಾಗಳಿಗೆ ಧ್ವನಿ ಕೊಡುವುದಾಗಿ ಶ್ರೀನಿವಾಸ್‌ ಪ್ರಭು ಒಪ್ಪಿಕೊಂಡು ಬರುತ್ತಾರೆ.  

4 /5

'ಪ್ರೇಮಲೋಕ' ಹಿಟ್ ಆದ ನಂತರ, ಒಂದು ದೊಡ್ಡ ಸಕ್ಸಸ್‌ ಮೀಟ್‌ ಕಾರ್ಯಕ್ರಮವನ್ನು ಚಿತ್ರತಂಡದವರು ಆಯೋಜಿಸಿದ್ರು, ಆ ಚಿತ್ರ ಹಿಟ್‌ ಆಗಲು ಕಾರಣವಾದ ಎಲ್ಲರಿಗೂ ಸ್ಮರಣಿಕೆಗಳನ್ನು ನೀಡಲಾಯಿತು. ಸ್ಟೇಜ್‌ ಮೇಲೆ ಎಲ್ಲರನ್ನೂ ಕರೆದು ಗೌರವಿಸಲಾಯಿತು. ಆದರೆ ಶ್ರೀನಿವಾಸ ಪ್ರಭು ಅವರನ್ನು ಮಾತ್ರ ಅವರ ಹೆಸರನ್ನು ಕೂಡ ಗುರುತಿಸದೆ ಕಡೆಗಣಿಸಿದ್ರು. ಇದನ್ನು ಕಂಡ ಶ್ಶ್ರೀನವಾಸ ಪ್ರಭು ತಮಗೂ ಸ್ಮರಣಿಕೆ ನೀಡುವಂತೆ ಕೇಳಿಕೊಂಡಿದ್ದರು. ಆದರೆ ರವಿ ಚಂದ್ರನ್‌ ಪ್ರಭು ಅವರ ಮಾತನ್ನು ಕಡೆಗಣಿಸಿದ್ದರು.  

5 /5

ಇವರಿಬ್ಬರ ಈ ಚರ್ಚೆ ಪತ್ರಕರ್ತರ ಕಿವಿಗೂ ಕೂಡ ಬಿದ್ದಿತ್ತು. ನಂತರ ಪತ್ರಿಕೆಗಳಲ್ಲಿ "ಯಾರೂ ಕ್ಯಾರೆ ಎನ್ನದ ಪ್ರಭು ಕಂಠ" ಎಂಬ ಲೇಖನಗಳು ಪ್ರಕಟವಾದವು. ಇದೇ ಕಾರಣದಿಂದ ಶ್ರೀನಿವಾಸ್ ಪ್ರಭು ಮತ್ತು ರವಿಚಂದ್ರನ್ ನಡುವೆ ಮನಸ್ತಾಪ ಉಂಟಾಯಿತು. ನಂತರ, ರವಿಚಂದ್ರನ್ ಸ್ವಲ್ಪ ಹೆಚ್ಚು ಸಂಭಾವನೆ ನೀಡಿದರು, ಆದರೆ ಪ್ರಭು ಅದರಂದ ತೃಪ್ತರಾಗಿಲ್ಲ. ಇದೇ ಕಾರಣದಿಂದಾಗಿ, ರವಿಚಂದ್ರನ್ ತಮ್ಮ ಸಿನಿಮಾಗಳಿಗೆ ತಾವೇ ಧ್ವನಿ ನೀಡಲು ಆರಂಭಿಸಿದರು, 'ರಾಮಾಚಾರಿ' ಚಿತ್ರದ ನಂತರ ಅಭಿನಯಿಸಿದ ಎಲ್ಲಾ ಚಿತ್ರಗಳಿಗೆ,  ತಾವೇ ಧ್ವನಿ ನೀಡಲು ಆರಂಭಿಸಿದರು.