Dhanteras 2020: ಇಂದು ಇವು ಕಂಡರೆ ಶುಭ ಸಂಕೇತದ ಜೊತೆಗೆ ಹೊಳೆಯಲಿದೆ ಅದೃಷ್ಟ

ಧನತ್ರಯೋದಶಿಯ ದಿನ ಖರೀದಿಗೆ ಹೆಸರುವಾಸಿಯಾಗಿರುವುದು ನಿಮ್ಮೆಲ್ಲರಿಗೂ ತಿಳಿದೇ ಇದೆ. ಇಂದಿನ ದಿನ ಕೆಲ ವಿಶಿಷ್ಠ ಅತಿಥಿಗಳು ನಿಮಗೆ ಭೇಟಿಯಾದರೆ ನಿಮ್ಮ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ. ಹಾಗಾದರೆ ಬನ್ನಿ ಯಾವ ಅಥಿತಿ ಗಳನ್ನು ಕಂಡರೆ ಇಂದು ಶುಭ ಸಂಕೇತ ಎಂಬುದನ್ನು ತಿಳಿಯೋಣ.
 

  • Nov 13, 2020, 10:25 AM IST

ನವದೆಹಲಿ: ಇಂದು ಧನತ್ರೊಯೋದಶಿಯ ಪವಿತ್ರ ಪರ್ವ (Dhanteras 2020)  (ನವೆಂಬರ್ 13). ಕಾರ್ತಿಕ್ ತಿಂಗಳ ಕೃಷ್ಣಪಕ್ಷದ ತ್ರಯೋದಶಿಯ ದಿನ ಧನತ್ರಯೋದಶಿಯ  ಹಬ್ಬವನ್ನು ಆಚರಿಸಲಾಗುತ್ತದೆ. ಧನ್ವಂತರಿ, ಕುಬೇರಮತ್ತು ದೇವಿ ಲಕ್ಷ್ಮಿಯನ್ನು ಇಂದು ಪೂಜಿಸಲಾಗುತ್ತದೆ.ಪುರಾಣಗಳ ಪ್ರಕಾರ, ಧನ್ವಂತರಿ ಸಮುದ್ರ ಮಂತ್ರದ ಸಮಯದಲ್ಲಿ ಅಮೃತ ಕಲಶದೊಂದಿಗೆ ಪ್ರಕಟವಾಗಿದ್ದರು. ಈ ವಿಶೇಷ ದಿನದಂದು ಧನ್ವಂತರಿ ಪ್ರಕಟವಾದ ಕಾರಣ ಈ ದಿನವನ್ನು ಧನತ್ರಯೋದಶಿ ಎಂದು ಕರೆಯಲಾಗುತ್ತದೆ.

ಇದನ್ನು ಓದಿ- Diwali 2020: ಈ 4 ರಾಶಿ ಜನರ ಪಾಲಿಗೆ 'ಅಚ್ಛೆ ದೀನ್'ಗಳು ಆರಂಭ, ನಿಮ್ಮ ರಾಶಿ ಯಾವುದು?

ಧನತ್ರಯೋದಶಿಯ ದಿನದಂದು ಹಿತ್ತಾಳೆ ಅಥವಾ ಬೆಳ್ಳಿ ಪಾತ್ರೆಗಳನ್ನು ಖರೀದಿಸುವ ಪ್ರಾಚೀನ ಸಂಪ್ರದಾಯವಿದೆ. ಅದೇ ಸಮಯದಲ್ಲಿ, ಧನತ್ರಯೋದಶಿಯ ದಿನದಂದು ಪುರಾಣಗಳಲ್ಲಿ ಕೆಲವು ವಿಷಯಗಳನ್ನು ಸಂಗತಿಗಳನ್ನು ನೋಡುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಈ ಪವಿತ್ರ ಹಬ್ಬದಲ್ಲಿ ನೀವು ಕೆಲವು ವಿಶೇಷ ವ್ಯಕ್ತಿಗಳನ್ನು ನೋಡಿದರೆ, ನಿಮ್ಮ ಮುಚ್ಚಿದ ಅದೃಷ್ಟದ ಬಾಗಿಲು ತೆರೆಯಬಹುದು ಮತ್ತು ನಿಮ್ಮ ಅದೃಷ್ಟವು ರಾತ್ರೋರಾತ್ರಿ ಹೊಳೆಯಬಹುದು.

ಇಂದು ನಾವು ಆ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಈ ವಿಶೇಷ ಅತಿಥಿಗಳನ್ನು ಧನತ್ರೊಯ್ದಶಿಯ ದಿನ ನೋಡುವ ಮೂಲಕ, ನಿಮ್ಮ ಅದೃಷ್ಟದ ನಕ್ಷತ್ರವು ಬೆಳಗಬಹುದು.

1 /6

ಧನತ್ರಯೋದಶಿಯ ದಿನ ಒಂದು ವೇಳೆ ನಿಮ್ಮ ಮನೆಗೆ ಕಿನ್ನರರು ಬಂದು ತಮ್ಮ ಇಚ್ಛೆಯಿಂದ ನಿಮಗೆ ನಾಣ್ಯವೊಂದನ್ನು ಚುಂಬಿಸಿ ನಿಮಗೆ ನೀಡಿದರೆ, ನಿಮ್ಮ ಜೀವನದಲ್ಲಿ ನಿಮಗೆ ದಾರಿದ್ರ್ಯ ಅಥವಾ ಧನದ ಕೊರತೆ ಎಂದಿಗೂ ಎದುರಾಗುವುದಿಲ್ಲ.

2 /6

ಧನತ್ರಯೋದಶಿಯ ದಿನ ಬಿಳಿ ಬೆಕ್ಕು ಕಾಣಿಸಿಕೊಳ್ಳುವುದು ಕೂಡ ಒಂದು ಶುಭ ಸಂಕೇತ. ಬಿಳಿ ಬೆಕ್ಕು ಕಾಣಿಸಿಕೊಳ್ಳುವುದರಿಂದ ನಿಮ್ಮ ನಿಂತು ಹೋದ ಅಥವಾ ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣಗೊಳ್ಳುತ್ತವೆ.

3 /6

ಧನತ್ರಯೋದಶಿಯ ದಿನ ಒಂದು ವೇಳೆ ನಿಮಗೆ ಯಾವುದೇ ಓರ್ವ ಕನ್ಯೆ ಹೇಳದೆ ಕೇಳದೆ ನಿಮಗೆ ಉಡುಗೊರೆ ಅಥವಾ ನಾಣ್ಯ ನೀಡಿದರೆ ಇದು ಕೂಡ ಒಂದು ಶುಭ ಸಂಕೇತವಾಗಿದೆ.

4 /6

ಧನತ್ರಯೋದಶಿಯ ದಿನ ದೇವಿ ಲಕುಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಗೂಬೆ ದೇವಿ ಲಕ್ಷ್ಮಿಯ ವಾಹನ ಕೂಡ ಹೌದು. ಹೀಗಾಗಿ ಇಂದಿನ ದಿನ ಗೂಬೆ ಕಾಣಿಸಿದರೆ ಅದು ಅತ್ಯಂತ ಶುಭಕರ ಎನ್ನಲಾಗುತ್ತದೆ.

5 /6

ಧನತ್ರಯೋದಶಿಯ ದಿನ ರಸ್ತೆಯ ಮೇಲೆ ಹಾಯ್ದುಹೋಗುವಾಗ ಒಂದು ವೇಳೆ ನಿಮಗೆ ದುಡ್ಡು ಸಿಕ್ಕರೆ ಅದು ಶುಭ ಸಂಕೇತ. ಇಂದು ನಿಮಗೆ ದುಡ್ಡು ಸಿಕ್ಕರೆ ಅದನ್ನು ಎತ್ತಲು ತಡಮಾಡಬೇಡಿ. ಅದನ್ನು ನಿಮ್ಮ ವ್ಯಾಲೆಟ್ ನಲ್ಲಿ ಜೋಪಾನವಾಗಿಡಿ. ಇದರಿಂದ ನಿಮ್ಮ ಜೇಬು ಎಂದಿಗೂ ಖಾಲಿ ಉಳಿಯುವುದಿಲ್ಲ.

6 /6

ಧನತ್ರಯೋದಶಿಯ ದಿನ ರಾತ್ರಿ ಊಸರವಳ್ಳಿ ಅಥವಾ ಹಲ್ಲಿ ಕಾಣಿಸಿಕೊಳ್ಳುವುದು ಕೂಡ ಶುಭ ಸಂಕೇತ. ಹಲ್ಲಿ ಕಾಣಿಸಿಕೊಳ್ಳುವುದರಿಂದ ನಿಮ್ಮ ಮುಚ್ಚಿಹೋದ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ.