ಶ್ರೀಕೃಷ್ಣ ಜಯಂತಿ ದಿನಾಂಕ, ಉಪವಾಸ ಆಚರಣೆ, ಗೋಪಾಲನ ಆರಾಧನೆಯ ವಿಧಿ ವಿಧಾನಗಳು ಇಲ್ಲಿವೆ..!

Krishna Janmashtami 2024 : ವಿಷ್ಣು ಅವತಾರ ಶ್ರೀಕೃಷ್ಣನ ಜನ್ಮದಿನವು ಈ ತಿಂಗಳು ಬರುತ್ತದೆ, ಆ ದಿನ ಏನು ಮಾಡಬೇಕು.. ಹೇಗೆ ಮುಕುಂದನನ್ನು ಪೂಜಿಸಬೇಕು ಎಂಬುದನ್ನು ತಿಳಿಯುವುದು ಬಹಳ ಮುಖ್ಯ.. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.. ಗಮನಿಸಿ..
 

1 /8

ಕೃಷ್ಣಾವತಾರವು ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹಾ ವಿಷ್ಣುವಿನ ಎಂಟನೇ ಅವತಾರವಾಗಿದೆ. ಕೃಷ್ಣನ ಅವತಾರ ದಿನವನ್ನು ಕೃಷ್ಣ ಜಯಂತಿ, ಗೋಕುಲಾಷ್ಟಮಿ ಮತ್ತು ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತದೆ.  

2 /8

ಕೃಷ್ಣ ಜಯಂತಿಯ ದಿನ ಶ್ರೀಕೃಷ್ಣ ನಮ್ಮ ಮನೆಗೆ ಬಂದು ಆಶೀರ್ವದಿಸುತ್ತಾನೆ ಎಂದು ನಂಬಲಾಗಿದೆ. ವಿವಾಹಿತರು ಕೃಷ್ಣ ಜಯಂತಿಯಂದು ಉಪವಾಸವಿದ್ದು ಪೂಜೆ ಸಲ್ಲಿಸಿದರೆ, ಕೃಷ್ಣನೇ ಶೀಘ್ರದಲ್ಲೇ ಮಗುವಾಗಿ ಅವತರಿಸುತ್ತಾನೆ ಎಂಬ ನಂಬಿಕೆ ಇದೆ..  

3 /8

ಮಕ್ಕಳಿಗೆ ಕೃಷ್ಣನ ಲೀಲೆಗಳು ಮತ್ತು ಅವನ ಚೇಷ್ಟೆಯ ಕಥೆಗಳನ್ನು ಹೇಳಬೇಕು. ಕೃಷ್ಣ ಜಯಂತಿಯಂದು ಮುಂಜಾನೆಯ ಪೂಜೆಗಿಂತ ಸಂಜೆ ಪೂಜೆ ಮಾಡುವುದು ಉತ್ತಮ.  

4 /8

ಏಕೆಂದರೆ ಕೃಷ್ಣ ಮಧ್ಯರಾತ್ರಿಯಲ್ಲಿ ಹುಟ್ಟಿಲ್ಲ ಎಂದು ಪುರಾಣಗಳು ಹೇಳುತ್ತವೆ. ಆದುದರಿಂದಲೇ ಕೃಷ್ಣ ಜಯಂತಿಯ ದಿನ ನಿತ್ಯ ಉಪವಾಸವಿದ್ದು ಸಂಜೆ ಪೂಜೆಯನ್ನು ಮಾಡಿ ಮರುದಿನ ಬೆಳಗ್ಗೆ ಪೂಜೆಯನ್ನು ಮುಗಿಸಬೇಕು.  

5 /8

ಈ ವರ್ಷ ಕೃಷ್ಣ ಜಯಂತಿ ಆಗಸ್ಟ್ 26 ಸೋಮವಾರದಂದು ಬರುತ್ತದೆ. ಈ ದಿನ ಎಲ್ಲರೂ ಕೃಷ್ಣನನ್ನು ಮನೆಗೆ ಕರೆದು ಪೂಜಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳಲಾಗುತ್ತದೆ.  

6 /8

ಕೃಷ್ಣ ಜಯಂತಿಯ ದಿನ ಮುಂಜಾನೆ ಮನೆಯನ್ನು ಶುಚಿಗೊಳಿಸಿ ಅಕ್ಕಿ ಹಿಟ್ಟು ಸಿಂಪಡಿಸಿ. ತಳಿರು-ತೋರಣಗಳನ್ನು ಕಟ್ಟಿ, ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಿ ಹೂವಿನಿಂದ ಅಲಂಕರಿಸಬೇಕು.  

7 /8

ನಂತರ ಮಗುವಿನ ಪಾದದ ಗುರುತುಗಳನ್ನು ಮನೆಯ ಬಾಗಿಲಿನಿಂದ ಪೂಜಾ ಕೋಣೆಯವರೆಗೆ ಅಕ್ಕಿ ಹಿಟ್ಟಿನೊಂದಿಗೆ ಬಿಡಿಸಿ. ಹೀಗೆ ಮಾಡುವುದರಿಂದ ಶ್ರೀಕೃಷ್ಣನನ್ನು ಮನೆಗೆ ಆಹ್ವಾನಿಸಿದಂತೆ.   

8 /8

ಮನೆಯಲ್ಲಿ ಕೃಷ್ಣನ ವಿಗ್ರಹ ಅಥವಾ ಕೃಷ್ಣನ ಚಿತ್ರವಿದ್ದರೆ ಅದನ್ನು ಸ್ವಚ್ಛಗೊಳಿಸಿ ಹೂವಿನಿಂದ ಅಲಂಕರಿಸಿ. ಪೂಜೆಗೆ ಕೃಷ್ಣನಿಗೆ ಇಷ್ಟವಾದ ಬೆಣ್ಣೆ, ಸಕ್ಕರೆ, ಅವಲಕ್ಕಿ, ಸೇರಿದಂತೆ ಸಿಹಿ ತಿಂಡಿ ತಿನಿಸುಗಳನ್ನು ಇಟ್ಟು ಪೂಜೆ ಮಾಡಿ ಭಗವಾನ್‌ ಕೃಷ್ಣನ ಕೃಪೆಗೆ ಪಾತ್ರರಾಗಿ..