IND vs SA: ತನ್ನ ನೆಚ್ಚಿನ ಆಟಗಾರನಿಗೆ ಮೋಸ ಮಾಡಿದ ಕೆ.ಎಲ್.ರಾಹುಲ್..!

ರೋಹಿತ್ ಶರ್ಮಾ ಗಾಯಗೊಂಡು ಹೊರಗುಳಿದ ನಂತರ ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಏಕದಿನ ಸರಣಿಗೆ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು.

ನವದೆಹಲಿ: ಭಾರತ ಕ್ರಿಕೆಟ್ ತಂಡ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. 3 ಪಂದ್ಯಗಳ ಟೆಸ್ಟ್ ಸರಣಿಯ ನಂತರ ಭಾರತ ಜನವರಿ 19 ರಿಂದ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಾಗಿದೆ. ಈ ಸರಣಿಗೂ ಮುನ್ನ ನಾಯಕ ರೋಹಿತ್ ಶರ್ಮಾ ಗಾಯಗೊಂಡು ಹೊರಗುಳಿದಿದ್ದರು. ಅದರ ನಂತರ ಕನ್ನಡಿಗ ಕೆ.ಎಲ್.ರಾಹುಲ್ ಅವರನ್ನು ಏಕದಿನ ಸರಣಿಗೆ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ರಾಹುಲ್ ನಾಯಕನಾದ ಬಳಿಕ ಅವರ ಅನೇಕ ವಿಶೇಷ ಆಟಗಾರರು ಖಂಡಿತವಾಗಿಯೂ ತಂಡದಲ್ಲಿ ಪ್ರವೇಶ ಪಡೆಯುವ ಭರವಸೆ  ಹೊಂದಿರುತ್ತಾರೆ. ಆದರೆ ರಾಹುಲ್ ನಾಯಕತ್ವದಲ್ಲಿ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರೂ ಇದ್ದಾರೆ. ಆದರೆ ಇನ್ನೂ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿಲ್ಲವೆನ್ನುವುದು ಬೇಸರದ ಸಂಗತಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಕೆ.ಎಲ್.ರಾಹುಲ್ ನಾಯಕರಾದ ಬಳಿಕ ಅರ್ಷದೀಪ್ ಸಿಂಗ್‌ಗೆ ಏಕದಿನ ತಂಡದಲ್ಲಿ ಅವಕಾಶ ಸಿಗಲಿಲ್ಲ. ಕಳೆದ ಹಲವು ವರ್ಷಗಳಿಂದ ರಾಹುಲ್ ನಾಯಕತ್ವದಲ್ಲಿ ಅರ್ಷದೀಪ್ ಸಿಂಗ್ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಈ ಅತ್ಯುತ್ತಮ ಬೌಲರ್ ರಾಹುಲ್ ನಾಯಕತ್ವದಲ್ಲಿ ತಂಡಕ್ಕೆ ಎಂಟ್ರಿ ಕೊಡಬಹುದು ಎಂದೇ ಎಲ್ಲರೂ ಅಂದುಕೊಂಡಿದ್ದರು, ಆದರೆ ಅದು ಹಾಗಾಗಲಿಲ್ಲ. ತಂಡದಲ್ಲಿ ಅವಕಾಶ ಪಡೆಯಲು ಇನ್ನೂ ಸ್ವಲ್ಪ ಸಮಯ ಹಿಡಿಯಬಹುದು. ಐಪಿಎಲ್‌ನ ಪ್ರತಿ ಸೀಸನ್‌ನಲ್ಲಿ ಅರ್ಷದೀಪ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ಹೀಗಿದ್ದರೂ ಅವರನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿರುವುದು ಅವರಿಗೆ ಮಾಡಿದ ಅನ್ಯಾಯವೇ ಸರಿ.

2 /4

ಅರ್ಷದೀಪ್ ಸಿಂಗ್ ಐಪಿಎಲ್ 2021ರ ಪರ್ಪಲ್ ಕ್ಯಾಪ್ ರೇಸ್‌ನಲ್ಲಿದ್ದರು. ಋತುವಿನ ಅಂತ್ಯದ ನಂತರ ಅವರು ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಉಳಿದರು. ಆದರೆ ಅವರು ಇತರ ಎಲ್ಲ ಬೌಲರ್‌ಗಳಿಗಿಂತ ಕಡಿಮೆ ಪಂದ್ಯಗಳನ್ನು ಆಡಿದ್ದರು. ಅರ್ಷದೀಪ್ 12 ಪಂದ್ಯಗಳಲ್ಲಿ 18 ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ 1 ಪಂದ್ಯದಲ್ಲಿ 5 ವಿಕೆಟ್‌ಗಳು ಕೂಡ ಸೇರಿದೆ. 2021ರ ಐಪಿಎಲ್ ಋತುವಿನಲ್ಲಿ ಅವರು ತಮ್ಮ ತಂಡದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರೊಂದಿಗೆ ಸಾಕಷ್ಟು ಆಡಿದರು. ಅವರು 14 ಪಂದ್ಯಗಳಲ್ಲಿ 19 ವಿಕೆಟ್ ಗಳಿಸಿದ್ದರು.

3 /4

ಕಳೆದ 2 ಐಪಿಎಲ್ ಸೀಸನ್‌ಗಳಲ್ಲಿ ಅರ್ಷದೀಪ್ ಸಿಂಗ್ ಅವರ ಪ್ರದರ್ಶನ ಅದ್ಭುತವಾಗಿದೆ ಮತ್ತು ಮುಂಬರುವ ದಿನಗಳಲ್ಲಿ ಅವರು ಭಾರತೀಯ ತಂಡಕ್ಕಾಗಿ ಆಡುವಾಗ ಉತ್ತಮ ಪ್ರದರ್ಶನ ನೀಡಬಹುದು. ಐಪಿಎಲ್‌ನ 2ನೇ ಹಂತದಲ್ಲಿ ಅರ್ಷದೀಪ್ ತಮ್ಮ ಅಮೋಘ ಬೌಲಿಂಗ್‌ನಿಂದ ಇಡೀ ವಿಶ್ವದಲ್ಲಿಯೇ ಸಾಕಷ್ಟು ಹೆಸರು ಗಳಿಸಿದ್ದಾರೆ. ಡೆತ್ ಓವರ್‌ಗಳಲ್ಲಿ ರನ್‌ಗಳನ್ನು ಉಳಿಸುವ ಸಾಮರ್ಥ್ಯವನ್ನು ನೋಡಿದರೆ ಅವರು ಶೀಘ್ರದಲ್ಲೇ ಟೀಂ ಇಂಡಿಯಾ ಪರ ಆಡಬಹುದು ಎಂದು ಊಹಿಸಲಾಗಿದೆ. ಒಂದು ವೇಳೆ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕರೆ ಅದ್ಭುತಗಳನ್ನೇ ಸೃಷ್ಟಿಸುವ ಸಾಧ್ಯತೆ ಇದೆ.

4 /4

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅರ್ಷದೀಪ್ ಟೀಂ ಇಂಡಿಯಾ ಪರ ಅದ್ಭುತಗಳನ್ನು ಮಾಡಬಲ್ಲರು. ಅರ್ಷದೀಪ್ ಒಬ್ಬ ಶ್ರೇಷ್ಠ ವೇಗದ ಬೌಲರ್. T20 ವಿಶ್ವಕಪ್‌ನಲ್ಲಿ ಭಾರತದ ಸೋಲಿನ ನಂತರ ದೊಡ್ಡ ಪಂದ್ಯಗಳನ್ನು ಗೆಲ್ಲಲು ಭಾರತಕ್ಕೆ ಅರ್ಷ್‌ದೀಪ್‌ನಂತಹ ವೇಗದ ಬೌಲರ್‌ಗಳ ಅಗತ್ಯವಿದೆ ಎಂಬುದು ಸ್ಪಷ್ಟವಾಗಿದೆ. ಅರ್ಷದೀಪ್ ಅವರು ಇನಿಂಗ್ಸ್‌ ನ ಕೊನೆಯ ಓವರ್‌ಗಳಲ್ಲಿ ರನ್‌ಗಳನ್ನು ಉಳಿಸುವುದರ ಜೊತೆಗೆ ವಿಕೆಟ್‌ಗಳನ್ನು ಕಬಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಬೇಕೆಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.