ಅಕ್ಕಿನೇನಿ ಕುಟುಂಬಕ್ಕೆ ಬಿಗ್‌ಶಾಕ್‌.. ಮದುವೆಗೂ ಮುನ್ನವೇ ನಾಗ ಚೈತನ್ಯ-ಶೋಭಿತಾ ಸಂಬಂಧದಲ್ಲಿ ಬಿರುಕು!? ಅಷ್ಟಕ್ಕೂ ನಡೆದಿದ್ದಾರೂ ಏನು?

Nag Chaitanya-Sobhita Dhulipalla: ಯುವ ಸಾಮ್ರಾಟ್ ಅಕ್ಕಿನೇನಿ ನಾಗ ಚೈತನ್ಯ ಸಹನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಗೊತ್ತೇ ಇದೆ. ಈಗಾಗಲೇ ಮದುವೆ ಸಿದ್ಧತೆಯೂ ಶುರುವಾಗಿದೆ.. ಇದೇ ವೇಳೆ ಇಬ್ಬರ ಕುರಿತಾದ ಸುದ್ದಿಯೊಂದು ಸೋಷಿಯಲ್‌ ಮಿಡಿಯಾವನ್ನೇ ಬೆಚ್ಚಿಬೀಳಿಸುತ್ತಿದೆ..

Written by - Savita M B | Last Updated : Oct 24, 2024, 02:23 PM IST
  • ಸಮಂತಾ ಜೊತೆ ವಿಚ್ಚೇದನದ ನಂತರ ನಾಗ ಚೈತನ್ಯ ಸೋಭಿತಾ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾರೆ
  • ಅಲ್ಲದೇ ಇದೀಗ ಮದುವೆಗೂ ತಯಾರಿ ನಡೆಸಿದ್ದಾರೆ..
ಅಕ್ಕಿನೇನಿ ಕುಟುಂಬಕ್ಕೆ ಬಿಗ್‌ಶಾಕ್‌.. ಮದುವೆಗೂ ಮುನ್ನವೇ ನಾಗ ಚೈತನ್ಯ-ಶೋಭಿತಾ ಸಂಬಂಧದಲ್ಲಿ ಬಿರುಕು!? ಅಷ್ಟಕ್ಕೂ ನಡೆದಿದ್ದಾರೂ ಏನು?    title=

Nag Chaitanya: ಸಮಂತಾ ಜೊತೆ ವಿಚ್ಚೇದನದ ನಂತರ ನಾಗ ಚೈತನ್ಯ ಶೋಭಿತಾ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾರೆ ಅನ್ನೋದು ಗೊತ್ತೇ ಇದೆ. ಇಬ್ಬರೂ ಖಾಸಗಿ ಪಾರ್ಟಿಗಳಿಗೆ ಹಾಜರಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದವು.. ಕೊನೆಗೆ ಇಬ್ಬರೂ ಎಂಗೇಜ್‌ ಮಾಡಿಕೊಂಡು ಅವು ವದಂತಿಗಳಲ್ಲ, ನಿಜ ಎಂದು ಪ್ರೂವ್‌ ಮಾಡಿದ್ದರು.. ಅಲ್ಲದೇ ಇದೀಗ ಮದುವೆಗೂ ತಯಾರಿ ನಡೆಸಿದ್ದಾರೆ.. 

ಇದನ್ನೂ ಓದಿ-ಸಮಂತಾ ಜೊತೆ ಪ್ರಭಾಸ್ ಒಂದೇ ಒಂದು ಸಿನಿಮಾ ಕೂಡ ಮಾಡದಿರಲು ಇದೇ ರಿಯಲ್‌ ಕಾರಣ!

ಇತ್ತೀಚೆಗೆ ಶೋಭಿತಾ ಧೂಳಿಪಾಲ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಅರಿಶಿನ ಶಾಸ್ತ್ರವನ್ನು ಮಾಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡ ನಂತರ, ಮದುವೆ ಶೀಘ್ರದಲ್ಲೇ ನಡೆಯಲಿದೆ ಎಂದು ಎಲ್ಲರಿಗೂ ಅರ್ಥವಾಯಿತು. ಆದರೆ ಮದುವೆಗೂ ಮುನ್ನ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಮದುವೆಯಾದ ನಂತರ ನಾಗ ಚೈತನ್ಯ ತನ್ನ ಫ್ಲಾಟ್‌ನಲ್ಲಿ ತಾವಿಬ್ಬರು ಇರುವಂತೆ ಶೋಭಿತಾ ಅವರಿಗೆ ಹೇಳಿದ್ದರಂತೆ.. ಆದರೆ ಆಕೆ ಅದಕ್ಕೆ ಒಪ್ಪಲಿಲ್ಲ. ಏಕೆಂದರೆ ನಾಗ ಚೈತನ್ಯ ಅವರು ಸಮಂತಾ ಅವರನ್ನು ಮದುವೆಯಾದಾಗ ಆ ಫ್ಲಾಟ್‌ನ್ನು ತುಂಬಾ ಇಷ್ಟಪಟ್ಟು ಖರೀದಿಸಿದರು. ಅಲ್ಲದೇ ಅದನ್ನು ಅವರವರ ಅಭಿರುಚಿಗೆ ತಕ್ಕಂತೆ ವಿನ್ಯಾಸ ಮಾಡಿದ್ದಾರೆ. ಸಮಂತಾ-ನಾಗಚೈತನ್ಯ ಬೇರೆಯಾಗುವವರೆಗೂ ಅದರಲ್ಲಿಯೇ ವಾಸವಾಗಿದ್ದರು.. 

ಇದನ್ನೂ ಓದಿ-KGF ಡೈರೆಕ್ಟರ್‌ ಪ್ರಶಾಂತ್‌ ನೀಲ್‌ ಸಹೋದರಿ ಯಾರು ಗೊತ್ತೇ? ಅವರು ಬೇರಾರೂ ಅಲ್ಲ ಕನ್ನಡದ ಸ್ಟಾರ್‌ ನಟನ ಪತ್ನಿ!

ಅದರಲ್ಲಿ ತನ್ನ ಪಾಲು ಏನಿಲ್ಲವೆಂದು ಹೇಳಿ ಶೋಭಿತಾ ಅಲ್ಲಿ ನಾಗಚೈತನ್ಯ ಇದ್ದರೇ ಮತ್ತೆ ಅವರಿಗೆ ಸಮಂತಾ ನೆನಪು ಮರುಕಳಿಸಬಹುದು.. ಇದು ನಮ್ಮಿಬ್ಬರ ಜೀವನಕ್ಕೆ ಅಡ್ಡಿಯಾಗಬಹುದು ಎಂದು ನಟಿ ಮದುವೆ ಬಳಿಕ ಪ್ಲಾಟ್‌ನಲ್ಲಿ ಇರಲು ನಿರಾಕರಿಸಿದ್ದಾರೆ.. ಈ ವಿಚಾರವಾಗಿ ಇಬ್ಬರ ನಡುವೆ ವೈಮನಸ್ಯ ಉಂಟಾಗಿದ್ದು, ನಂತರ ಅಕ್ಕಿನೇನಿ ನಾಗಾರ್ಜುನ್ ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ ಎಂದು ವರದಿಯಾಗಿದೆ.  ವಾಸ್ತವವಾಗಿ, ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ತಿಳಿದಿಲ್ಲ.. ಆದರೆ ಸೋಷಿಯಲ್‌ ಮಿಡಿಯಾದಲ್ಲಿ ಇಂತದ್ದೊಂದು ಸುದ್ದಿಯನ್ನು ಬಿತ್ತರಿಸಿ ವೈರಲ್‌ ಮಾಡಲಾಗುತ್ತಿದೆ.. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News