ಎಷ್ಟೇ ಅನ್ಯೋನ್ಯತೆ ಇದ್ದರೂ ಪ್ರತಿಯೊಬ್ಬ ಪತ್ನಿಯೂ ಈ ಐದು ಸತ್ಯವನ್ನು ಪತಿಯಿಂದ ಮುಚ್ಚಿಡುತ್ತಾಳೆ! ಈ ವಿಷಯ ಹೊರ ಬರಲು ಬಿಡುವುದೇ ಇಲ್ಲ

ಪ್ರತಿಯೊಬ್ಬ ಪತ್ನಿಯೂ ಕೂಡಾ ತನ್ನ ಪತಿಗೆ ಕೆಲವು ವಿಷಯಗಳ ಬಗ್ಗೆ ಮಾಹಿತಿ ನೀಡುವುದೇ ಇಲ್ಲ.ಜೀವನದುದ್ದಕ್ಕೂ ಆ ಸತ್ಯಗಳನ್ನು ಪತಿಯಿಂದ ಮುಚ್ಚಿಡುತ್ತಾಳೆಯಂತೆ. 

Written by - Ranjitha R K | Last Updated : Oct 7, 2024, 04:54 PM IST
  • ಆಚಾರ್ಯ ಚಾಣಕ್ಯ ಅರ್ಥಶಾಸ್ತ್ರದ ಜೊತೆಗೆ ಹಲವು ವಿಷಯಗಳನ್ನು ಅಧ್ಯಯನ ಮಾಡಿದ್ದಾರೆ.
  • ಆಚಾರ್ಯ ಚಾಣಕ್ಯರ ಚಿಂತನೆಗಳು ಇಂದಿಗೂ ಪ್ರಸ್ತುತ.
  • ಜೀವನದುದ್ದಕ್ಕೂ ಆ ಸತ್ಯಗಳನ್ನು ಪತಿಯಿಂದ ಮುಚ್ಚಿಡುತ್ತಾಳೆಯಂತೆ.
ಎಷ್ಟೇ ಅನ್ಯೋನ್ಯತೆ ಇದ್ದರೂ ಪ್ರತಿಯೊಬ್ಬ ಪತ್ನಿಯೂ ಈ ಐದು ಸತ್ಯವನ್ನು ಪತಿಯಿಂದ ಮುಚ್ಚಿಡುತ್ತಾಳೆ! ಈ ವಿಷಯ ಹೊರ ಬರಲು ಬಿಡುವುದೇ ಇಲ್ಲ  title=

ಬೆಂಗಳೂರು :ಆಚಾರ್ಯ ಚಾಣಕ್ಯ ಅರ್ಥಶಾಸ್ತ್ರದ ಜೊತೆಗೆ ಹಲವು ವಿಷಯಗಳನ್ನು ಅಧ್ಯಯನ ಮಾಡಿದ್ದಾರೆ. ಆಚಾರ್ಯ ಚಾಣಕ್ಯರ ಚಿಂತನೆಗಳು ಇಂದಿಗೂ ಪ್ರಸ್ತುತ.   ಅತ್ಯಂತ ಸರಳವಾಗಿ, ನೆಮ್ಮದಿಯಾಗಿ ಬದುಕುವ ಕಲೆಯನ್ನು ಚಾಣಕ್ಯರು ತನ್ನ ನೀತಿಯಲ್ಲಿ ವಿವರವಾಗಿ ವಿವರಿಸಿದ್ದಾರೆ.ಜೀವನ ಸುಖಮಯವಾಗಿರಬೇಕಾದರೆ ನಾವು ಏನು ಮಾಡಬೇಕು, ಏನು ಮಾಡಬಾರದು ಎನ್ನುವ ಬಗ್ಗೆ ತಿಳಿಸಿ ಹೇಳಿದ್ದಾರೆ.     ಆಚಾರ್ಯ ಚಾಣಕ್ಯರು ಪತಿ-ಪತ್ನಿಯರ ನಡುವಿನ ಸಂಬಂಧಗಳ ಬಗ್ಗೆಯೂ ಹೇಳಿದ್ದಾರೆ.   ಚಾಣಕ್ಯ ನೀತಿಯ ಪ್ರಕಾರ,ಪ್ರತಿಯೊಬ್ಬ ಪತ್ನಿಯೂ ಕೂಡಾ ತನ್ನ ಪತಿಗೆ ಕೆಲವು ವಿಷಯಗಳ ಬಗ್ಗೆ ಮಾಹಿತಿ ನೀಡುವುದೇ ಇಲ್ಲ.ಜೀವನದುದ್ದಕ್ಕೂ ಆ ಸತ್ಯಗಳನ್ನು ಪತಿಯಿಂದ ಮುಚ್ಚಿಡುತ್ತಾಳೆಯಂತೆ. 

ಪತಿಯಿಂದ ಮುಚ್ಚಿಡುವ ಪತ್ನಿಯ ಆ ರಹಸ್ಯ ಸತ್ಯಗಳು : 
ರಹಸ್ಯ ಮೋಹದ ಬಗ್ಗೆ:

ಹೆಚ್ಚಿನ ಮಹಿಳೆಯರು ಮದುವೆಯ ಮೊದಲು ಅಥವಾ ನಂತರ ತಮ್ಮ ಜೀವನದಲ್ಲಿ ಕೆಲವು ರಹಸ್ಯ ಮೋಹವನ್ನು ಹೊಂದಿರುತ್ತಾರೆ.ಅಂದರೆ ಯಾವುದೋ ಒಬ್ಬ ವ್ಯಕ್ತಿಯನ್ನು ತಮ್ಮ ಮನಸ್ಸಿನಲ್ಲಿಯೇ ಬಹಳ ಇಷ್ಟಪಡುತ್ತಾರೆ.ಆದರೆ, ಈ ರಹಸ್ಯ ಮೋಹದ ಬಗ್ಗೆ ಬೇರೆ ಯಾರೊಂದಿಗೂ ಮಾತನಾಡುವುದಿಲ್ಲ.ತಮ್ಮ ಗಂಡನಿಗೂ ಈ ವಿಚಾರ ತಿಳಿಸುವುದಿಲ್ಲ. 

ಇದನ್ನೂ ಓದಿ : Chanakya Niti: ಈ 3 ರೀತಿಯ ಜನರಿಂದ ದೂರವಿರಿ.. ಇಲ್ಲದಿದ್ದರೆ ನಿಮ್ಮ ಜೀವನವೇ ಹಾಳಾಗೋದಂತೂ ಗ್ಯಾರಂಟಿ!!

ನಿರ್ಧಾರವನ್ನು ಒಪ್ಪಿಕೊಳ್ಳುವುದು :
ಜೀವನ ಸಂತೋಷದಿಂದ ಸುಖಕರವಾಗಿ ಇರಬೇಕಾದರೆ ಮನೆಯ ಪ್ರತಿಯೊಂದು  ನಿರ್ಧಾರಗಳಲ್ಲಿ ಪತಿ-ಪತ್ನಿಯರ ಒಪ್ಪಿಗೆ ಇರಲೇಬೇಕು.ಪತಿಯ ಪ್ರತಿಯೊಂದು ನಿರ್ಧಾರ ಪತ್ನಿಗೆ ಸರಿ ಬರುವುದಿಲ್ಲ.ಪತಿಯ ನಿರ್ಧಾರ ತನಗೆ ಇಷ್ಟವಿರಲಿ, ಇಲ್ಲದೇ ಇರಲಿ ಈ ವಿಚಾರವನ್ನು ಪತ್ನಿ ಬಾಯಿ ಬಿಟ್ಟು ಹೇಳುವುದೇ ಇಲ್ಲ.ಮನಸ್ಸಿಲ್ಲದಿದ್ದರೂ ಪತಿಯ ನಿರ್ಧಾರಗಳನ್ನು ಬೆಂಬಲಿಸುತ್ತಾಳೆ.  

ಹಣಕಾಸಿನ ಉಳಿತಾಯ :
ಮಹಿಳೆಯರನ್ನು ಮನೆಯ ಲಕ್ಷ್ಮಿ ಎಂದು ಕರೆಯುತ್ತಾರೆ.ಮನೆಯಲ್ಲಿ ಅಥವಾ ಪತಿಯ ಜೀವನದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾದಾಗ ಎಲ್ಲರಿಗಿಂತ ಮೊದಲು ಸಹಾಯಕ್ಕೆ ಮುಂದಾಗುವುದೇ ಪತ್ನಿ.ಪತಿಗೆ ತಿಳಿಯದಂತೆ ಹಣ ಕೂಡಿಡುವ ಗುಣದಿಂದಲೇ ಹೀಗೆ ಮಾಡುವುದು ಸಾಧ್ಯವಾಗುತ್ತದೆ.ಪತ್ನಿ ಯಾವುದೇ ಕಾರಣಕ್ಕೂ ತನ್ನ ಉಳಿತಾಯದ ನಿಖರವಾದ ಮೊತ್ತವನ್ನು ಪತಿಗೆ ತಿಳಿಸುವುದಿಲ್ಲ.  

ತನ್ನ ಅನಾರೋಗ್ಯದ ವಿಚಾರ : 
ಪುರುಷರಿಗೆ ಹೋಲಿಸಿದರೆ ಮಹಿಳೆಯರ ದೇಹವು ದುರ್ಬಲವಾಗಿರುತ್ತದೆ.ಸಾಮಾನ್ಯವಾಗಿ ಮಹಿಳೆಯರು ಕೆಲವು ರೀತಿಯ ಸಣ್ಣ ಪುಟ್ಟ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ.ಹೆಚ್ಚಿನ ಸಂದರ್ಭಗಳಲ್ಲಿ ಹೆಂಡತಿ ತನ್ನ ಅನಾರೋಗ್ಯದ ಬಗ್ಗೆ ಗಂಡನಿಗೆ ಹೇಳುವುದೇ ಇಲ್ಲ.  

ಇದನ್ನೂ ಓದಿ : ಈ ಸಲಹೆಗಳನ್ನು ಅನುಸರಿಸಿದರೆ.. ಗ್ಯಾಸ್ ಸ್ಟವ್ ಹೆಚ್ಚು ಕಾಲ ಬಾಳಿಕೆ ಬರುತ್ತೆ! 

ರಹಸ್ಯಗಳನ್ನು ಮರೆಮಾಚುವುದು:
ಕುಟುಂಬದಲ್ಲಿ ಅನೇಕ ರೀತಿಯ ವಿಷಯಗಳು ನಡೆಯುತ್ತಲೇ ಇರುತ್ತದೆ.ಅವುಗಳಲ್ಲಿ ಕೆಲವು ಗಂಭೀರವಾಗಿರುತ್ತವೆ.ಇನ್ನು ಕೆಲವು ಸಾಮಾನ್ಯವಾಗಿರುತ್ತದೆ.ಕೆಲವೊಂದು  ವಿಚಾರಗಳನ್ನು ಇತರರ ಮುಂದೆ ಮಾತನಾಡಬಾರದು ಎಂದು ಪತಿ ಪತ್ನಿಗೆ ಹೇಳಿರುತ್ತಾನೆ.ಆದರೆ ಪತ್ನಿ ತನಗೆ ಬಹಳ ಹತ್ತಿರವಾಗಿರುವ ಯಾರಿಗಾದರೂ ಈ ವಿಷಯವನ್ನು ಖಂಡಿತವಾಗಿಯೂ ಹೇಳಿಯೇ ಹೇಳುತ್ತಾಳೆ.ಆದರೆ ತಾನು ಬೇರೊಬ್ಬರೊಂದಿಗೆ ವಿಷಯ ಹಂಚಿಕೊಂಡಿದ್ದೇನೆ ಎನ್ನುವುದನ್ನು ಪತಿಯಿಂದ ಮುಚ್ಚಿಡುತ್ತಾಳೆ.

(ಸೂಚನೆ :ಇಲ್ಲಿ ನೀಡಲಾದಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News