ಬೆಂಗಳೂರು ಜೈಲಿನಲ್ಲಿ ಶಶಿಕಲಾ ಭೇಟಿ ಮಾಡಿದ ಎಐಎಡಿಎಂಕೆ ಶಾಸಕ ಟಿಟಿವಿ ದಿನಕರನ್

ಉಪಚುನಾವಣೆ ಮುಗಿದ ನಂತರ ದಿನಕರನ್ ಮೊದಲ ಬಾರಿಗೆ ಶಶಿಕಲಾ ಅವರನ್ನು ಭೇಟಿ ಮಾಡಿದರು. 

Last Updated : Dec 28, 2017, 07:12 PM IST
ಬೆಂಗಳೂರು ಜೈಲಿನಲ್ಲಿ ಶಶಿಕಲಾ ಭೇಟಿ ಮಾಡಿದ ಎಐಎಡಿಎಂಕೆ ಶಾಸಕ ಟಿಟಿವಿ ದಿನಕರನ್  title=

ಬೆಂಗಳೂರು: ಆರ್.ಕೆ.ನಗರ ಚುನಾವಣೆ ಮುಗಿದು ಶಾಸಕರಾಗಿ ಆಯ್ಕೆಯಾದ ಟಿಟಿವಿ ದಿನಕರನ್ ಇಂದು ಬೆಳಗ್ಗೆ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಎಡಿಎಂಕೆ ನಾಯಕಿ ಶಶಿಕಾಲಾ ಅವರನ್ನು ಭೇಟಿಯಾಗಿದ್ದಾರೆ. 

ಉಪಚುನಾವಣೆ ಮುಗಿದ ನಂತರ ದಿನಕರನ್ ಮೊದಲ ಬಾರಿಗೆ ಶಶಿಕಲಾ ಅವರನ್ನು ಭೇಟಿ ಮಾಡಿದರು. 

ಇತ್ತೀಚೆಗೆ ನಡೆದ ಆರ್.ಕೆ.ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಟಿಟಿವಿ ದಿನಕರನ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 40,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದ ಅವರು,
ಶಶಿಕಲಾ ಅವರಿಂದ ಆಶೀರ್ವಾದ ಪಡೆದ ದಿನಕರನ್ ತಮಿಳುನಾಡಿನ ಇತ್ತೀಚಿನ ರಾಜಕೀಯ ಬೆಳವಣಿಗೆ ಬಗೆಗೆ ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದರು. 

ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧ ವಿಕೆ ಶಶಿಕಲಾ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

Trending News