ಬಾಳ್ ಆಯಿತು ಮಗಾ ಮನೆಗೆ ಬಾ....ತೇಜ್ ಪ್ರತಾಪ್ ಗೆ ರಾಬ್ಡಿ ದೇವಿ ಮನವಿ

ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಪತ್ನಿ ಮತ್ತು ಮಾಜಿ ಬಿಹಾರ ಮುಖ್ಯಮಂತ್ರಿ ರಾಬ್ಡಿ ದೇವಿ ಶುಕ್ರವಾರದಂದು ತನ್ನ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಗೆ ಮನೆಗೆ ಮರಳಲು ಮನವಿ ಮಾಡಿದ್ದಾರೆ.

Last Updated : Apr 13, 2019, 10:25 AM IST
ಬಾಳ್ ಆಯಿತು ಮಗಾ ಮನೆಗೆ ಬಾ....ತೇಜ್ ಪ್ರತಾಪ್ ಗೆ ರಾಬ್ಡಿ ದೇವಿ ಮನವಿ  title=

ನವದೆಹಲಿ: ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಪತ್ನಿ ಮತ್ತು ಮಾಜಿ ಬಿಹಾರ ಮುಖ್ಯಮಂತ್ರಿ ರಾಬ್ಡಿ ದೇವಿ ಶುಕ್ರವಾರದಂದು ತನ್ನ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಗೆ ಮನೆಗೆ ಮರಳಲು ಮನವಿ ಮಾಡಿದ್ದಾರೆ.

ಬಿಹಾರದ ಏಳು ಹಂತದ ಲೋಕಸಭೆ ಚುನಾವಣೆಯಲ್ಲಿ ಮೊದಲ ಹಂತದ ಚುನಾವಣೆ ಮುಗಿದ ನಂತರ ಪಾಟ್ನಾ ದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿರುವ  ತೇಜ್ ಪ್ರತಾಪ್  ಗೆ ತಾಯಿ ಮನೆಗೆ ಮರಳು ವಿನಂತಿಸಿಕೊಂಡಿದ್ದಾರೆ.

ತೇಜ್ ಪ್ರತಾಪ್ ಯಾದವ್ ಕಳೆದ ವರ್ಷ ರಾಂಚಿಯಲ್ಲಿ ತಮ್ಮ ತಂದೆ ಲಾಲು ಪ್ರಸಾದ್ ರನ್ನು ಭೇಟಿ ಮಾಡಿ ಹೊಸದಾಗಿ ಮದುವೆಯಾದ ಪತ್ನಿಗೆ ವಿಚ್ಛೇದನ ನೀಡಲು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದ ಬಳಿಕ ಅವರು ಮನೆಗೆ ಹಿಂತಿರುಗಿರಲಿಲ್ಲ ಅಂದಿನಿಂದ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.ಅವರು  ಕಳೆದ ವರ್ಷ ಮೇ ತಿಂಗಳಲ್ಲಿ ಹಿರಿಯ ಆರ್ಜೆಡಿ ನಾಯಕನ ಮಗಳು ಐಶ್ವರ್ಯ ರೈಯನ್ನು ಮದುವೆಯಾಗಿದ್ದಾರೆ.

ತಮ್ಮ ಇಬ್ಬರು ಪುತ್ರರಾದ ತೇಜ್ ಪ್ರತಾಪ್ ಯಾದವ್ ಮತ್ತು ತೇಜಶ್ವಿ ಯಾದವ್ ನಡುವಿನ ಭಿನ್ನಾಭಿಪ್ರಾಯಗಳ  ವಿಚಾರದಲ್ಲಿ ಯಾವುದೇ ಹುರುಳಿಲ್ಲ ರಾಬ್ಡಿ ದೇವಿ ಮಾಧ್ಯಮಗಳಿಗೆ ತಿಳಿಸಿದರು.ಅಲ್ಲದೆ ಇದೆಲ್ಲವೂ ಕೂಡ ಪಟ್ಟಭದ್ರ ಹಿತಾಸಕ್ತಿಗಳ ಸೃಷ್ಟಿಯಾಗಿದೆ.ಆ ಮೂಲಕ ಕುಟುಂಬವನ್ನು ವಿಭಜಿಸುವ ಹುನ್ನಾರ ನಡೆದಿದೆ ಎಂದರು.

Trending News