ಯಾವ ಮನೆಯ ಕಿಟಕಿ ಈ ದಿಕ್ಕಿನಲ್ಲಿ ಇರುತ್ತದೆಯೋ ಆ ಮನೆಯಲ್ಲಿ ಸುಖ ಸಮೃದ್ದಿಗೆ ಇರುವುದಿಲ್ಲ ಕೊರತೆ !

Vastu shastra for windows in india:ಮನೆಯ ವೆಂಟಿಲೆಶನ್ ಅನ್ನು ನೋಡುವುದಾದರೆ ಮನೆಯ ಬಾಗಿಲುಗಳು, ಕಿಟಕಿಗಳು  ಸರಿಯಾದ ದಿಕ್ಕಿನಲ್ಲಿರುವುದು ಮುಖ್ಯವಾಗಿರುತ್ತದೆ. ಗಾಳಿ ಮತ್ತು ಬೆಳಕು ಇವುಗಳ ಮೂಲಕವೇ ಮನೆಯನ್ನು ಪ್ರವೇಶಿಸುತ್ತದೆ.

Written by - Ranjitha R K | Last Updated : Feb 6, 2024, 01:27 PM IST
  • ನಾವು ವಾಸಿಸುವ ಮನೆಯ ಒಳಗೆ ಗಾಳಿ ಮತ್ತು ಸೂರ್ಯನ ಬೆಳಕು ಪ್ರವೇಶಿಸುವುದು ಬಹಳ ಮುಖ್ಯ.
  • ಪಾಸಿಟಿವ್ ಎನರ್ಜಿ ಸ್ವಾಭಾವಿಕವಾಗಿ ಮನೆಯೊಳಗೇ ಪ್ರವೇಶಿಸುತ್ತಲೇ ಇರುತ್ತದೆ.
  • ಕಿಟಕಿ ಮನೆಯ ಸರಿಯಾದ ದಿಕ್ಕಿನಲ್ಲಿರಬೇಕು
ಯಾವ ಮನೆಯ ಕಿಟಕಿ ಈ ದಿಕ್ಕಿನಲ್ಲಿ ಇರುತ್ತದೆಯೋ ಆ ಮನೆಯಲ್ಲಿ ಸುಖ ಸಮೃದ್ದಿಗೆ ಇರುವುದಿಲ್ಲ ಕೊರತೆ ! title=

Vastu shastra for windows in india : ನಾವು ವಾಸಿಸುವ ಮನೆಯ ಒಳಗೆ ಗಾಳಿ ಮತ್ತು ಸೂರ್ಯನ ಬೆಳಕು ಪ್ರವೇಶಿಸುವುದು ಬಹಳ ಮುಖ್ಯ. ಮನೆಯನ್ನು ನಿರ್ಮಿಸುವಾಗ ಅಥವಾ ಖರೀದಿಸುವಾಗ, ಅದರಲ್ಲಿ ಕ್ರಾಸ್ ವೆಂಟಿಲೇಷನ್ ಇರಬೇಕು ಎನ್ನುವ ಅಂಶವನ್ನು  ಮನಸ್ಸಿನಲ್ಲಿಟ್ಟುಕೊಳ್ಳಲಾಗುತ್ತದೆ. ಅಂದರೆ, ಶುದ್ಧ ಗಾಳಿಯು ಒಂದು ಕಡೆಯಿಂದ ಮನೆಗೆ ಪ್ರವೇಶಿಸಬೇಕು ಮತ್ತು ಇನ್ನೊಂದು ಬದಿಯಿಂದ ಹೊರಬರಬೇಕು. ಹೀಗೆ ಮಾಡುವುದರಿಂದ ಪಾಸಿಟಿವ್ ಎನರ್ಜಿ ಸ್ವಾಭಾವಿಕವಾಗಿ ಮನೆಯೊಳಗೇ ಪ್ರವೇಶಿಸುತ್ತಲೇ ಇರುತ್ತದೆ. ನೆಗೆಟಿವ್ ಎನರ್ಜಿ ಮನೆಯೊಳಗಿಂದ ಹೊರ ಹೋಗುತ್ತಲೇ ಇರುತ್ತದೆ. ಹೀಗಾದಾಗ ಮಾತ್ರ ಮನೆಯಲ್ಲಿ ವಾಸಿಸುವ ಎಲ್ಲಾ ಜನರು ಆರೋಗ್ಯಕರ, ಸಂತೋಷ ಮತ್ತು ಶಕ್ತಿವಂತರಾಗಿ ಉಳಿಯುತ್ತಾರೆ. 

ಕಿಟಕಿ ಸರಿಯಾದ ದಿಕ್ಕಿನಲ್ಲಿರಬೇಕು :  
ಮನೆಯ ವೆಂಟಿಲೆಶನ್ ಅನ್ನು ನೋಡುವುದಾದರೆ ಮನೆಯ ಬಾಗಿಲುಗಳು, ಕಿಟಕಿಗಳು  ಸರಿಯಾದ ದಿಕ್ಕಿನಲ್ಲಿರುವುದು ಮುಖ್ಯವಾಗಿರುತ್ತದೆ. ಗಾಳಿ ಮತ್ತು ಬೆಳಕು ಇವುಗಳ ಮೂಲಕವೇ ಮನೆಯನ್ನು ಪ್ರವೇಶಿಸುತ್ತದೆ. ನೈಸರ್ಗಿಕ ಬೆಳಕು ಮತ್ತು ತಾಜಾ ಗಾಳಿಯ ಪ್ರವೇಶಕ್ಕಾಗಿ, ಕಿಟಕಿಗಳು ಮತ್ತು ಸ್ಕೈಲೈಟ್‌ಗಳನ್ನು ವಾಯುವ್ಯದಲ್ಲಿ ಅಂದರೆ ವಾಯುವ್ಯ ದಿಕ್ಕಿನಲ್ಲಿ ಇರಿಸಬೇಕು. ಆರೋಗ್ಯಕರ ಮತ್ತು ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳಲು ಸರಿಯಾದ ಗಾಳಿ ಬಹಳ ಮುಖ್ಯ. 

ಇದನ್ನೂ ಓದಿ : ಗ್ರಹಣ ದಿನದಿಂದಲೇ ಬದಲಾಗುವುದು ಈ ರಾಶಿಯವರ ಜೀವನದ ದಿಕ್ಕು! ಸೂರ್ಯ ಗ್ರಹಣ ಇವರ ಪಾಲಿಗೆ ಹೊತ್ತು ತರುವುದು ಸುಖ ಸಮೃದ್ದಿ

ಕಿಟಕಿಗಳನ್ನು ಯಾವಾಗಲೂ ಬಾಗಿಲುಗಳ ಎದುರು ಭಾಗದಲ್ಲಿ ಇಡಬೇಕು.ನೈಋತ್ಯ ದಿಕ್ಕಿನಲ್ಲಿ ಎಂದಿಗೂ ಕಿಟಕಿಯನ್ನು ಇರಿಸಬಾರದು. ಕಿಟಕಿಯ ಜೊತೆಗೆ, ಮನೆಯ ಮುಖ್ಯ ಬಾಗಿಲು ಯಾವಾಗಲೂ ಉತ್ತರ, ಈಶಾನ್ಯ, ಪೂರ್ವ ಅಥವಾ ಪಶ್ಚಿಮವಾಗಿರಬೇಕು. ದಕ್ಷಿಣ ಅಥವಾ ನೈಋತ್ಯದಲ್ಲಿ ಮುಖ್ಯ ಬಾಗಿಲನ್ನು ಹೊಂದಿರುವುದು ವಾಸ್ತು ದೃಷ್ಟಿಕೋನದಿಂದ ಒಳ್ಳೆಯದಲ್ಲ.  

ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಇರಿಸಿ :
ಕೆಲವೊಮ್ಮ್ ಏನೇ  ಮಾಡಿದರೂ ಮನೆಯಲ್ಲಿ ನೆಮ್ಮದಿ ಎನ್ನುವುದು ಇರುವುದೇ ಇಲ್ಲ. ನಕಾರಾತ್ಮಕ ಶಕ್ತಿಯೇ ಮನೆಯಲ್ಲಿ ಮೇಲುಗೈ ಸಾಧಿಸುವುದು ಕಂಡುಬರುತ್ತದೆ.  ವಸ್ತುಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸದೆ ಇರುವುದರಿಂದ ಇಂಥಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.ಮನೆಯಲ್ಲಿ ಎಲ್ಲಿ ಬೇಕೋ ಅಲ್ಲಿ ವಸ್ತುಗಳನ್ನು ಇಡಬಾರದು. ಮನೆ ಅಸ್ತವ್ಯಸ್ತವಾಗಿದ್ದರೆ ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ತಡೆಯುತ್ತವೆ. ಮನೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯ ಭಾವನೆಯನ್ನು ಉತ್ತೇಜಿಸಲು ಪಶ್ಚಿಮ ದಿಕ್ಕನ್ನು ಸ್ವಚ್ಛವಾಗಿ ಮತ್ತು ವ್ಯವಸ್ಥಿತವಾಗಿ ಇರಿಸಿಕೊಳ್ಳಬೇಕು. ಪೂರ್ವ ದಿಕ್ಕಿನಲ್ಲಿ ಭಾರವಾದ ವಸ್ತುಗಳನ್ನು ಇಡಬಾರದು. 

ಇದನ್ನೂ ಓದಿ : Astro Tips For Money: ಹಣಕಾಸಿನ ಬಿಕ್ಕಟ್ಟಿನಿಂದ ಹೊರಬರಲು ಇಂದೇ ಮಾಡಿ ತುಳಸಿ ಪರಿಹಾರ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News