Vastu Tips: ಮನೆಯ ಸರಿಯಾದ ಸ್ಥಳದಲ್ಲಿ ‘ತುಳಸಿ’ ಗಿಡ ಇಡದಿದ್ದರೆ ಏನಾಗುತ್ತೆ ಗೊತ್ತಾ..?

ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಅದರಲ್ಲಿ ಲಕ್ಷ್ಮಿದೇವಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಇದರೊಂದಿಗೆ ತುಳಸಿಯನ್ನು ಶ್ರೀಕೃಷ್ಣನ ರೂಪವೆಂದು ಪರಿಗಣಿಸಲಾಗಿದೆ. ತುಳಿಸಿ ಗಿಡಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರೂ ವಿಶೇಷ ಗಮನ ನೀಡಬೇಕು.

Written by - Puttaraj K Alur | Last Updated : Jan 15, 2022, 09:09 AM IST
  • ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ
  • ಪವಿತ್ರ ತುಳಸಿಯಲ್ಲಿ ಲಕ್ಷ್ಮಿದೇವಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ
  • ಸರಿಯಾದ ಸ್ಥಳದಲ್ಲಿ ತುಳಸಿಗಿಡ ಇಡಿದ್ದರೆ ಅಶುಭ ಫಲಿತಾಂಶಗಳನ್ನು ನೀಡುತ್ತದೆ
Vastu Tips: ಮನೆಯ ಸರಿಯಾದ ಸ್ಥಳದಲ್ಲಿ ‘ತುಳಸಿ’ ಗಿಡ ಇಡದಿದ್ದರೆ ಏನಾಗುತ್ತೆ ಗೊತ್ತಾ..? title=
ತಾಯಿ ಲಕ್ಷ್ಮಿ ತುಳಸಿಯಲ್ಲಿ ನೆಲೆಸಿದ್ದಾಳೆ

ನವದೆಹಲಿ: ತುಳಸಿ ಗಿಡ(Tulsi Plant)ವನ್ನು ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ನೆಡಲಾಗುತ್ತದೆ. ಇದನ್ನು ಶ್ರೀಕೃಷ್ಣನ ಒಂದು ರೂಪವೆಂದು ಪರಿಗಣಿಸಲಾಗಿದೆ. ಅದೇ ರೀತಿ ತುಳಸಿಯನ್ನು ಅನೇಕ ಮನೆಗಳಲ್ಲಿ ಪೂಜಿಸಲಾಗುತ್ತದೆ. ಆದರೆ ತುಳಸಿಯನ್ನು ಸರಿಯಾದ ಸ್ಥಳದಲ್ಲಿ ಮತ್ತು ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಅದು ಅಶುಭ ಫಲಿತಾಂಶಗಳನ್ನು ನೀಡುತ್ತದೆ. ತುಳಸಿ ಗಿಡವನ್ನು ಹೇಗೆ, ಎಲ್ಲಿ ಇಡಬೇಕೆಂದು ತಿಳಿಯಿರಿ.

ಅನೇಕ ಮನೆಗಳಲ್ಲಿ ಜನರು ತುಳಸಿ(Holy Basil)ಯನ್ನು ಛಾವಣಿಯ ಮೇಲೆ ಇಡುತ್ತಾರೆ. ವಾಸ್ತು ಶಾಸ್ತ್ರ(Vastu Tips)ದ ಪ್ರಕಾರ ಛಾವಣಿಯ ಮೇಲೆ ತುಳಿಸಿ ಗಿಡ ಇಡುವುದರಿಂದ ದೋಷ ಉಂಟಾಗುತ್ತದೆ. ಯಾರ ಜಾತಕದಲ್ಲಿ ಬುಧ ಗ್ರಹ ದುರ್ಬಲವಾಗಿದೆಯೋ ಅವರು ತುಳಸಿ ಗಿಡವನ್ನು ಛಾವಣಿಯ ಮೇಲೆ ಇಡಬಾರದು. ಹೀಗೆ ಮಾಡಿದರೆ ಅವರು ಆರ್ಥಿಕ ನಷ್ಟವನ್ನು ಅನುಭವಿಸಲು ಪ್ರಾರಂಭಿಸುತ್ತಾರೆ.

ಇದನ್ನೂ ಓದಿ: ಕನಸಿನಲ್ಲಿ ಈ ರೂಪದಲ್ಲಿ ಮಹಿಳೆಯನ್ನು ನೋಡಿದರೆ ಶುಭ ಸಂಕೇತ, ಸಂಪತ್ತು ಹರಿದುಬರಲಿದೆ!

ಜಾತಕದಲ್ಲಿ ಬುಧ ಗ್ರಹ ಕೆಟ್ಟಿದ್ದರೆ, ಇನ್ನೂ ತುಳಸಿ ಗಿಡ(Tulsi Plant In House)ವನ್ನು ತಾರಸಿಯ ಮೇಲೆ ಇಡಲೇಬೇಕೆಂಬ ಒತ್ತಾಯವಿದ್ದರೆ ಪೂರ್ವ ದಿಕ್ಕಿನಲ್ಲಿ ನೆಡಬೇಡಿ. ನೀವು ಅದನ್ನು ಉತ್ತರದಿಂದ ಈಶಾನ್ಯಕ್ಕೆ ಇಡಬಹುದು. ಇದಲ್ಲದೆ ಪಶ್ಚಿಮ ದಿಕ್ಕಿನಲ್ಲಿಯೂ ಇಡಬಹುದು.

ಶ್ಯಾಮ ತುಳಸಿ(Tulsi Directions)ನ್ನು ಯಾವಾಗಲೂ ದಕ್ಷಿಣ ಅಥವಾ ನೈಋತ್ಯದಲ್ಲಿ ಇರಿಸಲಾಗುತ್ತದೆ. ಶ್ಯಾಮ ತುಳಸಿ(Tulsi Plant In Home)ಯಲ್ಲಿ ಎಲೆಗಳು ಸಂಪೂರ್ಣವಾಗಿ ಹಸಿರು ಮತ್ತು ದೊಡ್ಡದಾಗಿರುತ್ತವೆ. ತುಳಸಿಯನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ವಾಸ್ತು ದೋಷದ ಅಪಾಯವಿರುತ್ತದೆ.

ಇದನ್ನೂ ಓದಿ: Health Tips: ಕೇವಲ ಒಂದು ವಾರದ ಕಠಿಣ ಪರಿಶ್ರಮದಿಂದ ನೀವು ಸಂಪೂರ್ಣ ಫಿಟ್ ಆಗುತ್ತೀರಿ!

ಟೆರೇಸ್‌ನಲ್ಲಿ ತುಳಸಿ ಗಿಡ(Vastu Tips For Home)ವನ್ನು ಇಡುವುದನ್ನು ಬಿಟ್ಟು ಬೇರೆ ಸ್ಥಳವಿಲ್ಲದಿದ್ದರೆ ತುಳಸಿಯನ್ನು ಮಾತ್ರ ಇಡಬೇಡಿ. ಇದನ್ನು ಯಾವಾಗಲೂ ಬಾಳೆ ಗಿಡದೊಂದಿಗೆ ಇಟ್ಟುಕೊಳ್ಳಿ. ಎರಡೂ ಗಿಡಗಳನ್ನು ಒಟ್ಟಿಗೆ ಇಟ್ಟು ಅದನ್ನು ಕೆಂಪು ದಾರದಿಂದ ಕಟ್ಟಬೇಕು. ಇದು ವಾಸ್ತು ದೋಷಗಳ ಅಪಾಯವನ್ನು ನಿವಾರಿಸುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News