ಮನೆಯ ಸುತ್ತ ಈ ಗಿಡಗಳನ್ನು ನೆಟ್ಟರೆ ಮನೆಯೊಳಗೆ ಹರಿದು ಬರುವುದಂತೆ ಸಿರಿ ಸಂಪತ್ತು : ಸದಾ ನಿಮ್ಮ ಬೆನ್ನಿಗಿರುವುದಂತೆ ಅದೃಷ್ಟ

ವಾಸ್ತು ಶಾಸ್ತ್ರದಲ್ಲಿ, ಕೆಲವು ಮರಗಳು ಮತ್ತು ಸಸ್ಯಗಳು ಸಂಪತ್ತನ್ನು ಗಳಿಸಲು ಬಹಳ ಮಂಗಳಕರವೆಂದು ಹೇಳಲಾಗಿದೆ. ಈ ಗಿಡಗಳು ಮನೆಯಲ್ಲಿದ್ದರೆ ಹಣವು ಅಯಸ್ಕಾಂತದಂತೆ ಆಕರ್ಷಿತವಾಗುತ್ತದೆ ಎಂದು ಹೇಳಲಾಗುತ್ತದೆ.

Written by - Ranjitha R K | Last Updated : Jan 19, 2024, 06:13 PM IST
  • ಪ್ರತಿಯೊಂದು ವಸ್ತುವಿನಲ್ಲಿಯೂ ಧನಾತ್ಮಕ ಶಕ್ತಿ ಅಥವಾ ನಕಾರಾತ್ಮಕ ಶಕ್ತಿ ಇರುತ್ತದೆ.
  • ಈ ಸಸ್ಯಗಳು ಹಣವನ್ನು ಆಕರ್ಷಿಸುತ್ತವೆ
  • ಈ ಸಸ್ಯಗಳನ್ನು ನೆಟ್ಟರೆ ಸುತ್ತಮುತ್ತ ಸಕಾರಾತ್ಮಕತೆ ಪಸರಿಸುತ್ತದೆ.
ಮನೆಯ ಸುತ್ತ ಈ ಗಿಡಗಳನ್ನು ನೆಟ್ಟರೆ ಮನೆಯೊಳಗೆ ಹರಿದು ಬರುವುದಂತೆ ಸಿರಿ ಸಂಪತ್ತು : ಸದಾ ನಿಮ್ಮ ಬೆನ್ನಿಗಿರುವುದಂತೆ ಅದೃಷ್ಟ    title=

ಬೆಂಗಳೂರು : ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿಯೊಂದು ವಸ್ತುವಿನಲ್ಲಿಯೂ ಧನಾತ್ಮಕ ಶಕ್ತಿ ಅಥವಾ ನಕಾರಾತ್ಮಕ ಶಕ್ತಿ ಇರುತ್ತದೆ. ಇದೇ ಕಾರಣಕ್ಕೆ ನಿಮ್ಮ ಮನೆ ಅಥವಾ ಕಚೇರಿಯ ಸುತ್ತ ನೆಗೆಟಿವ್ ಎನರ್ಜಿ ಇರುವ ಯಾವ ವಸ್ತುವನ್ನೂ ಇಟ್ಟುಕೊಳ್ಳಬಾರದು. ನಕಾರಾತ್ಮಕ ಶಕ್ತಿಯು ಹಣಕಾಸಿನ ತೊಂದರೆಗಳು, ಪ್ರಗತಿಯಲ್ಲಿ ಅಡಚಣೆ, ಅನಾರೋಗ್ಯ ಮತ್ತು ಸಂಬಂಧಗಳಲ್ಲಿ ಬಿರುಕು ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸುತ್ತಲೂ ಸಕಾರಾತ್ಮಕ ಗುಣಗಳಿರುವ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ ಲಕ್ಷ್ಮೀ  ಆಶೀರ್ವಾದ, ಸಂತೋಷ ಮತ್ತು ಸಮೃದ್ಧಿಯನ್ನು ಹರಿದು ಬರುತ್ತದೆ. ವಾಸ್ತು ಶಾಸ್ತ್ರದಲ್ಲಿ, ಕೆಲವು ಮರಗಳು ಮತ್ತು ಸಸ್ಯಗಳು ಸಂಪತ್ತನ್ನು ಗಳಿಸಲು ಬಹಳ ಮಂಗಳಕರವೆಂದು ಹೇಳಲಾಗಿದೆ. ಈ ಗಿಡಗಳು ಮನೆಯಲ್ಲಿದ್ದರೆ ಹಣವು ಅಯಸ್ಕಾಂತದಂತೆ ಆಕರ್ಷಿತವಾಗುತ್ತದೆ ಎಂದು ಹೇಳಲಾಗುತ್ತದೆ. 

ಈ ಸಸ್ಯಗಳು ಹಣವನ್ನು ಆಕರ್ಷಿಸುತ್ತವೆ  : 
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಈ ಸಸ್ಯಗಳನ್ನು ನೆಟ್ಟರೆ  ಸುತ್ತಮುತ್ತ ಸಕಾರಾತ್ಮಕತೆ ಪಸರಿಸುತ್ತದೆ. ಬದಲಿಗೆ, ಇದು ಮನೆಯ ಹಣದ ಹರಿವನ್ನು ಹೆಚ್ಚಿಸುತ್ತದೆ. ಕುಟುಂಬ ಸದಸ್ಯರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಒದಗಿಸುತ್ತದೆ.

ಇದನ್ನೂ ಓದಿ : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದಾಲ್ಚಿನ್ನಿ ತಿನ್ನಿ, ಈ 3 ಪ್ರಯೋಜನಗಳನ್ನು ಪಡೆಯಿರಿ..!

ರಾತ್ರಿ ರಾಣಿ  : ನಿಮ್ಮ ಮನೆಯಲ್ಲಿ ರಾತ್ರಿ ರಾಣಿ   ಗಿಡವನ್ನು ನೆಡಬೇಕು.ರಾತ್ರಿ ರಾಣಿ  ಹೂವುಗಳ ಸುಗಂಧವು ಒತ್ತಡವನ್ನು ಕಡಿಮೆ ಮಾಡಿ ಮಾನಸಿಕ ಸಂತೋಷ ಮತ್ತು ಶಾಂತಿಯನ್ನು ನೀಡುತ್ತದೆ. ಇದು ಕುಟುಂಬ ಸದಸ್ಯರ ನಡುವೆ ಪ್ರೀತಿ ಹೆಚ್ಚಿಸಿ ವೈವಾಹಿಕ ಸಂತೋಷವನ್ನು ನೀಡುತ್ತದೆ.ಪ್ರಗತಿ ಮತ್ತು ಸಂಪತ್ತು ಗಳಿಸಲು ಹೊಸ ಮಾರ್ಗಗಳನ್ನು ತೆರೆಯುತ್ತದೆ. 

ಚಂಪಾ : ಚಂಪಾ ಗಿಡಗಳ ವಿಶೇಷತೆ ಎಂದರೆ ಸದಾ ಹಸಿರಾಗಿಯೇ ಇರುತ್ತದೆ.ಇದರ ತಿಳಿ ಹಳದಿ ಹೂವುಗಳು ಸುಂದರವಾಗಿರುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ತ್ವರಿತವಾಗಿ ನಿವಾರಿಸುತ್ತದೆ. ಚಂಪಾ ಗಿಡ ಇರುವ ಮನೆಯಲ್ಲಿ ಸದಾ ಸಕಾರಾತ್ಮಕತೆ ಇರುತ್ತದೆ. ಕುಟುಂಬದ ಸದಸ್ಯರ ಆರೋಗ್ಯವು ಉತ್ತಮವಾಗಿರುತ್ತದೆ. ಮನೆ ಸಂತೋಷ ಮತ್ತು ಸಮೃದ್ದಿಯಿಂದ ಕೂಡಿರುತ್ತದೆ.  

ಇದನ್ನೂ ಓದಿ : Gas Saving Tips: ಗ್ಯಾಸ್ ಸಿಲಿಂಡರ್ ಅನ್ನು ಉಳಿಸುವುದೇಗೆ.? ಈ ಅಡುಗೆ ಸಲಹೆಗಳು ನಿಮಗಾಗಿ..!

ಮಲ್ಲಿಗೆ : ಮಲ್ಲಿಗೆ ಗಿಡವು ಅದರ ಪರಿಮಳ ಮತ್ತು ಸ್ವರೂಪಕ್ಕೆ ಹೆಸರುವಾಸಿಯಾಗಿದೆ. ಮಲ್ಲಿಗೆ ಗಿಡವನ್ನು ವಾಸ್ತು ಶಾಸ್ತ್ರದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಗಿಡ ಯಾವ ಮನೆಯಲ್ಲಿಯೇ ಇರುತ್ತದೆಯೋ ಆ ಮನೆ ಮಂದಿಯ ಆತ್ಮಸ್ಥೈರ್ಯ ಹೆಚ್ಚುತ್ತದೆ.ಆದಾಯ ಹೆಚ್ಚುತ್ತದೆ. 

ಪಾರಿಜಾತ : ಪಾರಿಜಾತ ಹೂವುಗಳು ನೋಡಲು ತುಂಬಾ ಸುಂದರವಾಗಿರುತ್ತವೆ. ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದ ಪಾರಿಜಾತ ಮನೆ ಮಂದಿಯ ಎಲ್ಲಾ ಆಸೆಗಳನ್ನು ಈಡೇರಿಸುತ್ತದೆ ಎನ್ನುವುದು ನಂಬಿಕೆ.ಈ  ಹೂವು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ಮನೆಯಲ್ಲಿ ಯಾವುದೇ ಆರ್ಥಿಕ ಬಿಕ್ಕಟ್ಟು  ಬಾರದಂತೆ ತಡೆಯುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News