Horseshoe: ಕುದುರೆ ಲಾಳವನ್ನು ಹೀಗೆ ಬಳಸಿದರೆ ಸಾಕಷ್ಟು ಧನಲಾಭ, ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ

ಪ್ರತಿಯೊಂದು ಲೋಹದ ವಿಶೇಷ ಮಹತ್ವವನ್ನು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಕಬ್ಬಿಣವು ಶನಿ ದೇವನಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಕುದುರೆಲಾಳವನ್ನು ಉದ್ಯೋಗ-ವ್ಯವಹಾರದಲ್ಲಿ ಪ್ರಗತಿಗಾಗಿ ಮತ್ತು ಶನಿ ದೋಷವನ್ನು ತೆಗೆದುಹಾಕಲು ಬಳಸಲಾಗುತ್ತದೆ.

Written by - Puttaraj K Alur | Last Updated : Apr 12, 2022, 10:47 PM IST
  • ಮನೆಯ ಮುಖ್ಯ ದ್ವಾರಕ್ಕೆ ಕುದರೆಲಾಳ ಹಾಕಿದರೆ ವಾಸ್ತು ದೋಷಗಳು ದೂರವಾಗುತ್ತವೆ
  • ಪ್ರಯತ್ನಗಳ ನಂತರವೂ ಯಶಸ್ಸು ಸಿಗದಿದ್ದರೆ ಕುದುರೆಲಾಳದ ಉಂಗುರವನ್ನು ಮಧ್ಯದ ಬೆರಳಿಗೆ ಧರಿಸಬೇಕು
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುದುರೆ ಲಾಳವನ್ನು ಆರ್ಥಿಕ ಲಾಭಕ್ಕಾಗಿಯೂ ಬಳಸಬಹುದು
Horseshoe: ಕುದುರೆ ಲಾಳವನ್ನು ಹೀಗೆ ಬಳಸಿದರೆ ಸಾಕಷ್ಟು ಧನಲಾಭ, ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ title=
ಕುದುರೆ ಲಾಳದ ಪ್ರಯೋಜನಗಳು

ನವದೆಹಲಿ: ಜ್ಯೋತಿಷ್ಯದಲ್ಲಿ ಪ್ರತಿಯೊಂದು ಲೋಹಕ್ಕೂ ವಿಶೇಷ ಮಹತ್ವವಿದೆ. ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಮತ್ತು ಕಬ್ಬಿಣ ಎಲ್ಲವೂ ಒಂದಲ್ಲ ಒಂದು ಗ್ರಹಕ್ಕೆ ಸೇರಿದ್ದು. ಜ್ಯೋತಿಷ್ಯ ಶಾಸ್ತ್ರದ ತಜ್ಞರ ಪ್ರಕಾರ ಕಬ್ಬಿಣವು ಶನಿದೇವನ ನೆಚ್ಚಿನ ಲೋಹವಾಗಿದೆ. ಶನಿಯ ನೋವಿನ ಪರಿಹಾರಕ್ಕಾಗಿ ಕುದುರೆಲಾಯಿಯನ್ನು ಧರಿಸಲು ಹಲವು ಬಾರಿ ಸಲಹೆ ನೀಡಲಾಗುತ್ತದೆ. ಇದರ ಮತ್ತಷ್ಟು ಪ್ರಯೋಜನಗಳ ಬಗ್ಗೆ ತಿಳಿಯಿರಿ.

ಶನಿ ದೋಷಕ್ಕೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರಕ್ಕೆ ಕುದರೆಲಾಳವನ್ನು ಹಾಕಿದರೆ ಶನಿದೇವನ ನೋವು ನಿವಾರಣೆಯಾಗುತ್ತದೆ. ಇದರೊಂದಿಗೆ ವಾಸ್ತು ದೋಷಗಳೂ ದೂರವಾಗುತ್ತವೆ. ಇದಲ್ಲದೆ ವ್ಯಕ್ತಿಯ ಜಾತಕದಲ್ಲಿ ಶನಿಯ ಸ್ಥಿತಿಯು ನಡೆಯುತ್ತಿದ್ದರೆ, ಆತನ ಹಾಸಿಗೆಯಲ್ಲಿ ಕುದುರೆಲಾಳವನ್ನು ಹಾಕುವುದರಿಂದ ಶನಿ ದೋಷದಿಂದ ಮುಕ್ತಿ ಸಿಗುತ್ತದೆ.

ಇದನ್ನೂ ಓದಿ: Hanuman Jayanti 2022: ಶ್ರೀಆಂಜನೇಯನ ಭಕ್ತಿಯಲ್ಲಿ ಲೀನನಾದ ಮುಸ್ಲಿಂ ವ್ಯಕ್ತಿಯ ಶ್ರದ್ಧೆಗೆ ಮಾರುಹೋದ ಜನ

ವ್ಯವಹಾರದಲ್ಲಿನ ಯಶಸ್ಸಿಗೆ

ಎಲ್ಲಾ ಪ್ರಯತ್ನಗಳ ನಂತರವೂ ನಿಮಗೆ ಯಶಸ್ಸು ಸಿಗದಿದ್ದರೆ, ಕುದುರೆಲಾಳದ ಉಂಗುರವನ್ನು ಮಾಡಿ ಮಧ್ಯದ ಬೆರಳಿಗೆ ಧರಿಸಬೇಕು. ಹೀಗೆ ಮಾಡುವುದರಿಂದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ. ಇದಲ್ಲದೆ ವ್ಯವಹಾರದಲ್ಲಿ ಯಶಸ್ಸನ್ನು ಸಾಧಿಸಲು, ವ್ಯಾಪಾರದ ಸ್ಥಳದಲ್ಲಿ ಕಪ್ಪು ಕುದುರೆಲಾಳವನ್ನು ಸ್ಥಾಪಿಸಬೇಕು. ಹೀಗೆ ಮಾಡುವುದರಿಂದ ವ್ಯಾಪಾರದಲ್ಲಿ ಆರ್ಥಿಕ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ.

ಆರ್ಥಿಕ ಲಾಭಕ್ಕಾಗಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುದುರೆ ಲಾಳವನ್ನು ಹಣದ ಲಾಭಕ್ಕಾಗಿಯೂ ಬಳಸಬಹುದು. ಒಬ್ಬ ವ್ಯಕ್ತಿಯು ಸಂಪತ್ತಿನಿಂದ ಆಶೀರ್ವದಿಸಬೇಕೆಂದು ಬಯಸಿದರೆ, ಆತನು ಕುದುರೆಲಾಳವನ್ನು ವಾಲೆಟ್ ಅಂದರೆ ಪರ್ಸ್‍ನಲ್ಲಿ ಇಡಬೇಕು.

ಇದನ್ನೂ ಓದಿ: Daily Horoscope: ಮಂಗಳವಾರದಂದು ಈ ರಾಶಿಯವರು ವಾದ ಮಾಡುವುದನ್ನು ತಪ್ಪಿಸಿ

ರೋಗದಿಂದ ಮುಕ್ತಿ ಸಿಗಲು

ಕುಟುಂಬದ ಯಾವುದೇ ಸದಸ್ಯರು ನಿರಂತರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದರೆ ಕುದುರೆ ಲಾಳಗಳಿಂದ ಮಾಡಿದ 4 ಮೊಳೆಗಳು, 1.25 ಕೆಜಿ ಉದ್ದಿನ ಬೇಳೆ ಮತ್ತು ಒಣ ತೆಂಗಿನಕಾಯಿ ತೆಗೆದುಕೊಂಡು ಅವುಗಳನ್ನು ಬಳಸಿ 11 ಬಾರಿ ರೋಗಿಗೆ ದೃಷ್ಟಿ ತೆಗೆದು ನದಿಗೆ ಎಸೆಯಬೇಕು. ಈ ರೀತಿ ಮಾಡುವುದರಿಂದ ರೋಗವು ದೂರವಾಗುತ್ತದೆ ಎಂದು ನಂಬಲಾಗಿದೆ.

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News