ದೀಪಾವಳಿಯಿಂದ ಬೆಳಗುವುದು ಈ ರಾಶಿಯವರ ಭವಿಷ್ಯ, ಹಣದ ಮಳೆ ಗರೆಯಲಿದ್ದಾನೆ ಕುಬೇರ

ಈ ದಿನದಂದು, ಶನಿಯು ತನ್ನ ಪಥವನ್ನು ಬದಲಿಸಲಿದ್ದಾನೆ. ಇದು ಮೂರು ರಾಶಿಯವರಿಗೆ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಈ ವರ್ಷ ಮೂರು ರಾಶಿಯವರ ಮೇಲೆ ಕುಬೇರನ ಆಶೀರ್ವಾದ ಹೆಚ್ಚೇ ಇರಲಿದೆ.

Written by - Ranjitha R K | Last Updated : Sep 23, 2022, 09:00 AM IST
  • ಮಾರ್ಗಿ ಶನಿ ಮತ್ತು ಧನ ಕುಬೇರನ ಆಶೀರ್ವಾದ ಈ ರಾಶಿಯವರ ಮೇಲಿರುತ್ತದೆ
  • ಕೊನೆಯಾಗುವುದು ಎಲ್ಲಾ ಸಮಸ್ಯೆಗಳು
  • ಮೂರು ರಾಸ್ಗಿಯವರಿಗೆ ಈ ದಿನದಿಂದ ಸಂತೋಷಕರ ದಿನಗಳು ಆರಂಭ
ದೀಪಾವಳಿಯಿಂದ ಬೆಳಗುವುದು ಈ ರಾಶಿಯವರ ಭವಿಷ್ಯ, ಹಣದ ಮಳೆ ಗರೆಯಲಿದ್ದಾನೆ ಕುಬೇರ  title=
Shani Margi 2022 Positive Effect on Zodiacs (file photo)

ಬೆಂಗಳೂರು : ದೀಪಾವಳಿ ಹಬ್ಬದ  ಎರಡು ದಿನಗಳ ಮೊದಲು ಧನ್ತೇರಸ್ ಆಚರಿಸಲಾಗುತ್ತದೆ. ಈ ದಿನದಿಂದ 3 ರಾಶಿಚಕ್ರದ ಚಿಹ್ನೆಗಳು ಸುವರ್ಣ ದಿನಗಳು ಆರಂಭವಾಗಲಿದೆ. ಅಕ್ಟೋಬರ್ 23 ರಂದು, ಧನ್ತೇರಸ್ ಆಚರಿಸಲಾಗುತ್ತದೆ. ಈ ದಿನದಂದು, ಶನಿಯು ತನ್ನ ಪಥವನ್ನು ಬದಲಿಸಲಿದ್ದಾನೆ. ಇದು ಮೂರು ರಾಶಿಯವರಿಗೆ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಈ ವರ್ಷ ಮೂರು ರಾಶಿಯವರ ಮೇಲೆ ಕುಬೇರನ ಆಶೀರ್ವಾದ ಹೆಚ್ಚೇ ಇರಲಿದೆ. ಶನಿದೇವ ಈ ಜನರಿಗೆ ಬಹಳಷ್ಟು ಸಂಪತ್ತು ಮತ್ತು ಪ್ರಗತಿಯನ್ನು ಕರುಣಿಸಲಿದ್ದಾನೆ. ಇದರೊಂದಿಗೆ ಜೀವನದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗುತ್ತವೆ. 

ಮಾರ್ಗಿ ಶನಿ ಮತ್ತು ಧನ ಕುಬೇರನ ಆಶೀರ್ವಾದ ಈ ರಾಶಿಯವರ ಮೇಲಿರುತ್ತದೆ :  
ಮೇಷ ರಾಶಿ : ಈ ವರ್ಷದ ಧನ್ತೇರಸ್ ಮತ್ತು ದೀಪಾವಳಿಯು ಮೇಷ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ಮಾರ್ಗಿ ಶನಿಯ ಕೃಪೆಯಿಂದ   ಇವರಿಗೆ ಹೆಚ್ಚಿನ ಲಾಭವಾಗಲಿದೆ. ವೃತ್ತಿಯನ್ನು ಸುಧಾರಿಸುವ ಪ್ರಯತ್ನಗಳು ವ್ಯರ್ಥವಾಗುವುದಿಲ್ಲ. ಆದ್ದರಿಂದ ಕೆಲಸ-ವ್ಯವಹಾರದಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ ಉತ್ತಮ ಫಲಿತಾಂಶಗಳ ಸಿಗಲಿದೆ. ಜೊತೆಗೆ ಧನಲಾಭವೂ ಆಗಲಿದೆ. ದೀರ್ಘಕಾಲದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.   

ಇದನ್ನೂ ಓದಿ : Chanakya Niti : ಪುರುಷರೆ ಈ ವಿಷಯಗಳ ಬಗ್ಗೆ ರಹಸ್ಯ ಕಾಪಾಡಿಕೊಳ್ಳಿ, ಇಲ್ಲದಿದ್ದರೆ ನಿಮ್ಮ ಗೌರವಕ್ಕೆ ಧಕ್ಕೆ!

ಸಿಂಹ: ಮಾರ್ಗಿ ಶನಿಯು ಸಿಂಹ ರಾಶಿಯವರಿಗೆ ಸಾಕಷ್ಟು ಲಾಭಗಳನ್ನು ನೀಡುತ್ತಾನೆ. ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಎದುರಾಗಲಿವೆ. ಇಲ್ಲಿಯವರೆಗೆ ಹುಡುಕುತ್ತಿದ್ದ ಅವಕಾಶ ಈಗ ಸಿಗಲಿದೆ ಎನ್ನಬಹುದು. ಆದಾಯ ಹೆಚ್ಚಲಿದೆ. ಬಡ್ತಿ ಪಡೆದು, ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. 

ತುಲಾ: ಶನಿಯ ನೇರ ಸಂಚಾರವು ತುಲಾ ರಾಶಿಯವರಿಗೆ ಅನೇಕ ಲಾಭಗಳನ್ನು ತರುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಆದಾಯದಲ್ಲಿ ಹೆಚ್ಚಳವಾಗಿ, ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಸಾಲದಿಂದ ಮುಕ್ತರಾಗುವಿರಿ. ಹೊಸ ಉದ್ಯೋಗ ದೊರೆಯಲಿದೆ. ಕೆಲವು ಒಳ್ಳೆಯ ಸುದ್ದಿಗಳಿಂದ ಸಂತೋಷ ಹೆಚ್ಚಲಿದೆ. 

ಇದನ್ನೂ ಓದಿ : ಅಕ್ಟೋಬರ್ 16 ರವರೆಗೆ ಈ ರಾಶಿಯವರ ಮೇಲಿರುವುದು ಕುಬೇರನ ಆಶೀರ್ವಾದ, ಪ್ರತಿ ಕೆಲಸದಲ್ಲಿಯೂ ಮಂಗಳ ನೀಡಲಿದ್ದಾನೆ ಯಶಸ್ಸು

 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News