ಪಿತೃ ಪಕ್ಷದಲ್ಲಿ ಈ ತಪ್ಪನ್ನು ಎಂದಿಗೂ ಮಾಡಬೇಡಿ.! ಜೀವನಪರ್ಯಂತ ಕಾಡುತ್ತಾರೆ ಅನ್ನ ನೀರು ಸಿಗದ ಪಿತೃಗಳು

Pitru Paksha 2022 Date:ಈ ವರ್ಷ ಸೆಪ್ಟೆಂಬರ್ 10 ರಿಂದ ಪಿತೃ ಪಕ್ಷ  ಪ್ರಾರಂಭವಾಗಲಿದೆ.  ಸೆಪ್ಟೆಂಬರ್ 25 ರವರೆಗೆ ಪಿತೃ ಪಕ್ಷ ನಡೆಯಲಿದೆ. ಈ 15 ದಿನಗಳಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎನ್ನುವುದು ಹಿಂದೂ ಪದ್ದತಿಯಲ್ಲಿನ ನಂಬಿಕೆ.   

Written by - Ranjitha R K | Last Updated : Sep 5, 2022, 12:21 PM IST
  • ಪಿತೃಗಳ ಆತ್ಮಕ್ಕೆ ಶಾಂತಿ ಸಿಗದೇ ಹೋದರೆ ಪಿತೃ ದೋಷ ಎದುರಾಗುತ್ತದೆ.
  • ಅಶ್ವಿನಿ ಮಾಸದಲ್ಲಿ 15 ದಿನಗಳ ಪಿತೃ ಪಕ್ಷವನ್ನು ಮೀಸಲಿಡಲಾಗುತ್ತದೆ.
  • ಈ ಮಾಸದಲ್ಲಿ ಪೂರ್ವಜರಿಗೆ ಶ್ರಾದ್ಧವನ್ನು ಮಾಡಲಾಗುತ್ತದೆ
 ಪಿತೃ ಪಕ್ಷದಲ್ಲಿ ಈ ತಪ್ಪನ್ನು ಎಂದಿಗೂ ಮಾಡಬೇಡಿ.! ಜೀವನಪರ್ಯಂತ ಕಾಡುತ್ತಾರೆ  ಅನ್ನ ನೀರು ಸಿಗದ ಪಿತೃಗಳು  title=
Pitru Paksha 2022 Date (file photo)

Pitru Paksha 2022 Date : ಹಿಂದೂ ಧರ್ಮದಲ್ಲಿ, ವ್ಯಕ್ತಿಯ ಮರಣದ ನಂತರ, ಅವನನ್ನು ಪಿತೃ ಎಂದು ಕರೆಯಲಾಗುತ್ತದೆ. ನಂಬಿಕೆಯ ಪ್ರಕಾರ, ಮೃತರ ಶ್ರಾದ್ಧ ಅಥವಾ ತರ್ಪಣವನ್ನು ಮಾಡದೇ  ಹೋದಲ್ಲಿ ಅವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ಪಿತೃಗಳ ಆತ್ಮಕ್ಕೆ ಶಾಂತಿ ಸಿಗದೇ ಹೋದರೆ ಇದರಿಂದ ಪಿತೃ ದೋಷ ಎದುರಾಗುತ್ತದೆ. ಮನೆಯಲ್ಲಿ ಅನೇಕ ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಪೂರ್ವಜರನ್ನು ಮೆಚ್ಚಿಸಲು ಅಶ್ವಿನಿ ಮಾಸದಲ್ಲಿ 15 ದಿನಗಳ ಪಿತೃ ಪಕ್ಷವನ್ನು ಮೀಸಲಿಡಲಾಗುತ್ತದೆ. ಈ ಮಾಸದಲ್ಲಿ  ಪೂರ್ವಜರಿಗೆ ಶ್ರಾದ್ಧವನ್ನು ಮಾಡಲಾಗುತ್ತದೆ

ಈ ದಿನದಿಂದ ಪಿತೃ ಪಕ್ಷ ಆರಂಭ : 
ಈ ವರ್ಷ ಸೆಪ್ಟೆಂಬರ್ 10 ರಿಂದ ಪಿತೃ ಪಕ್ಷ  ಪ್ರಾರಂಭವಾಗಲಿದೆ.  ಸೆಪ್ಟೆಂಬರ್ 25 ರವರೆಗೆ ಪಿತೃ ಪಕ್ಷ ನಡೆಯಲಿದೆ. ಈ 15 ದಿನಗಳಲ್ಲಿ ಪೂರ್ವಜರು ಭೂಮಿಗೆ ಬರುತ್ತಾರೆ ಎನ್ನುವುದು ಹಿಂದೂ ಪದ್ದತಿಯಲ್ಲಿನ ನಂಬಿಕೆ. ಹಾಗಾಗಿ ಪಿತೃಗಳ ಗೌರವಾರ್ಥ ತರ್ಪಣ, ಪಿಂಡ ಪ್ರದಾನಗಳನ್ನು ನಡೆಸಲಾಗುತ್ತದೆ. ಶ್ರಾದ್ಧ, ತರ್ಪಣ ಇತ್ಯಾದಿಗಳನ್ನು ಮಾಡುವುದರಿಂದ ಪೂರ್ವಜರ ಹಸಿವು ಮತ್ತು ಬಾಯಾರಿಕೆಗಳು ತೀರುತ್ತವೆ ಎನ್ನುವುದು ನಂಬಿಕೆ. ಪಿತೃಗಳು ಹಸಿವು ಬಾಯಾರಿಕೆಯಿಂದ ಬಳಲಿದರೆ ಅವರ ಕೋಪ ಶಾಪ ಜೀವನ ಪರ್ಯಂತ ನಮ್ಮನ್ನು ಬಾಧಿಸುತ್ತದೆ ಎಂದು ಹೇಳಲಾಗುತ್ತದೆ.  

ಇದನ್ನೂ ಓದಿ : ತುಳಸಿ ಪೂಜೆ ಮಾಡುವಾಗ ಈ ಸಣ್ಣ ಕೆಲಸ ಮಾಡಿದರೆ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ಲಕ್ಷ್ಮೀ

ಪಿತೃ ಪಕ್ಷದ ಸಂಪೂರ್ಣ 15 ದಿನಗಳಲ್ಲಿ ಶ್ರಾದ್ಧ, ತರ್ಪಣ ಮತ್ತು ಪಿಂಡ ದಾನದ ಕೆಲಸವನ್ನು ಮಾಡಲಾಗುತ್ತದೆ. ಈ ಸಮಯದಲ್ಲಿ ಪೂರ್ವಜರಿಗೆ ನೀರು ಅರ್ಪಿಸುವುದರಿಂದ ಅವರ ಹಸಿವು ನೀಗುತ್ತದೆ ಮತ್ತು ಅವರು ಸಂತೋಷವಾಗಿರುತ್ತಾರೆ. ಈ ಸಮಯದಲ್ಲಿ ಬ್ರಾಹ್ಮಣರು ಮತ್ತು ನಿರ್ಗತಿಕರಿಗೆ ಅನ್ನ ದಾನ ಮಾಡಲಾಗುತ್ತದೆ. ಕಾಗೆಗಳಿಗೂ ಆಹಾರವನ್ನು ನೀಡಲಾಗುತ್ತದೆ. 15 ದಿನಗಳವರೆಗೆ ತರ್ಪಣ ಇತ್ಯಾದಿಗಳನ್ನು ಮಾಡಲು ಸಾಧ್ಯವಾಗದಿದ್ದರೆ, ನಂತರ ಪಿತೃ ಪಕ್ಷ ಮತ್ತು ಮಹಾಲಯ ಅಥವಾ ಸರ್ವ ಪಿತೃ ಅಮಾವಾಸ್ಯೆಯ ಪ್ರತಿಪದದಂದು ಶ್ರಾದ್ಧ-ತರ್ಪಣವನ್ನು  ಅರ್ಪಿಸಬೇಕು. 

ಪೋಷಕರ ಅಸಮಾಧಾನದ ಚಿಹ್ನೆಗಳು :
ಪಿತೃಗಳ ಅಸಮಾಧಾನದಿಂದ ಜೀವನದಲ್ಲಿ ಅನೇಕ ರೀತಿಯ ತೊಂದರೆಗಳು ಉಂಟಾಗುತ್ತವೆ. ಅನೇಕ ಬಾರಿ, ಪಿತೃ ದೋಷವು ಹಳೆಯ ಜನ್ಮದಿಂದಲೂ ಬರುತ್ತದೆ. ಪೂರ್ವಜರ ಅತೃಪ್ತಿ ಅಥವಾ ಪಿತೃ ದೋಷದಿಂದಾಗಿ, ವ್ಯಕ್ತಿಯು ಕಷ್ಟಪಟ್ಟು ಕೆಲಸ ಮಾಡಿದರೂ ಫಲಿತಾಂಶವನ್ನು ಪಡೆಯುವುದಿಲ್ಲ. ವ್ಯಾಪಾರದಲ್ಲಿ ಆಗಾಗ ನಷ್ಟ ಉಂಟಾಗುತ್ತದೆ. ವೃತ್ತಿ ಜೀವನದಲ್ಲಿ ಅಡೆತಡೆಗಳು ಎದುರಾಗುತ್ತವೆ. ಪಿತೃಗಳ ಅಸಮಾಧಾನವು ವೈವಾಹಿಕ ಜೀವನದಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ. ಮಕ್ಕಳ ಕೊರತೆ ಅಥವಾ ಮಕ್ಕಳಿಂದ  ದೊಡ್ಡ ಮಟ್ಟದ ದುಃಖ ಉಂಟಾಗುತ್ತದೆ. ಕುಟುಂಬದ  ಮಕ್ಕಳ ಮದುವೆಗೆ ಅಡೆತಡೆಗಳು ಎದುರಾಗುತ್ತವೆ. ಪೂರ್ವಜರು ಕನಸಿನಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಾರೆ. 

ಇದನ್ನೂ ಓದಿ : Sun Transit: ಮುಂದಿನ 13 ದಿನಗಳು ಈ ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿರಲಿವೆ

 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News