ಸಿದ್ದರಾಮಯ್ಯನವರೇ, ನಿಮ್ಮನ್ನೂ ರಾಹುಲ್ ಗಾಂಧಿಯಂತೆ ತಿಳಿದುಕೊಳ್ಳಬೇಕಾಗುತ್ತದೆ: ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಿದ್ದರಾಮಯ್ಯ 15 ಬಾರಿ ಬಜೆಟ್ ಮಂಡಿಸಿದಂತಹ ರಾಜಕಾರಣಿ. ಕರ್ನಾಟಕದ ಜನ ನಿಮ್ಮನ್ನು ಒಬ್ಬ ಪ್ರಭುದ್ದ ನಾಯಕ, ರಾಜಕಾರಣಿಯಾಗಿ ನೋಡಿದ್ದಾರೆ. ಜನರು ಬೇರೆ ದೃಷ್ಟಿಕೋನದಿಂದ ನೋಡುವಂತೆ ಮಾಡಿಕೊಳ್ಳಬೇಡಿ ಎಂದು ಜೋಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು

Written by - Bhavishya Shetty | Last Updated : Feb 26, 2024, 01:53 PM IST
    • ಜನ ನಿಮ್ಮನ್ನೂ ರಾಹುಲ್ ಗಾಂಧಿಯಂತೆ ಅಪ್ರಬುದ್ಧ ರಾಜಕಾರಣಿಯಾಗಿ ತಿಳಿದುಕೊಳ್ಳುತ್ತಾರೆ
    • ಸಿದ್ದರಾಮಯ್ಯನವರೇ ಬಾಲಿಶವಾಗಿ ಮಾತನಾಡಬೇಡಿ
    • ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಸಿದ್ದರಾಮಯ್ಯನವರೇ, ನಿಮ್ಮನ್ನೂ ರಾಹುಲ್ ಗಾಂಧಿಯಂತೆ ತಿಳಿದುಕೊಳ್ಳಬೇಕಾಗುತ್ತದೆ: ಸಚಿವ ಪ್ರಹ್ಲಾದ್ ಜೋಶಿ title=
File Photo

ಹುಬ್ಬಳ್ಳಿ: ಸಿದ್ದರಾಮಯ್ಯನವರೇ ಬಾಲಿಶವಾಗಿ ಮಾತನಾಡಬೇಡಿ. ಜನ ನಿಮ್ಮನ್ನೂ ರಾಹುಲ್ ಗಾಂಧಿಯಂತೆ ಅಪ್ರಬುದ್ಧ ರಾಜಕಾರಣಿಯಾಗಿ ತಿಳಿದುಕೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಿದ್ದರಾಮಯ್ಯ 15 ಬಾರಿ ಬಜೆಟ್ ಮಂಡಿಸಿದಂತಹ ರಾಜಕಾರಣಿ. ಕರ್ನಾಟಕದ ಜನ ನಿಮ್ಮನ್ನು ಒಬ್ಬ ಪ್ರಭುದ್ದ ನಾಯಕ, ರಾಜಕಾರಣಿಯಾಗಿ ನೋಡಿದ್ದಾರೆ. ಜನರು ಬೇರೆ ದೃಷ್ಟಿಕೋನದಿಂದ ನೋಡುವಂತೆ ಮಾಡಿಕೊಳ್ಳಬೇಡಿ ಎಂದು ಜೋಶಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: Flat Buying: ಫ್ಲಾಟ್ ಕೊಳ್ಳಬೇಕಾ..? ಈ ವಿಷಯಗಳು ತಿಳಿಯದೇ ಹೋದರೆ ಸಂಕಷ್ಟ ಎದುರಿಸಬೇಕಾಗುತ್ತದೆ

ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಅವರನ್ನು ಒಬ್ಬ ಅಪ್ರಬುದ್ಧ ನಾಯಕನೆಂದು ನೋಡಲಾಗುತ್ತಿದೆ. ಅವರಿರುವುದೇ ಹಾಗೆ. ಹಾಗಾಗಿ ಅವರ ಮಾತನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ. ನೀವೂ ಹಾಗೇ ಆಡಿದರೆ ನಿಮ್ಮನ್ನೂ ಅವರಂತೆಯೇ ತಿಳಿದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು ಸಚಿವ ಜೋಶಿ.

ಕಾಂಗ್ರೆಸ್’ಗೆ ಇರುವುದು ಒಂದೇ ರಾಜ್ಯ:

ಕರ್ನಾಟಕದಲ್ಲಿ ನಾವು ಅನೇಕ ಕಾರಣಗಳಿಂದ ಅಧಿಕಾರ ಕಳೆದುಕೊಂಡಿದ್ದೇವೆ ನಿಜ. ಆದರೆ ದೇಶಾದ್ಯಂತ ನೀವೇಕೆ ಅಧಿಕಾರ ಕಳೆದುಕೊಂಡಿದ್ದೀರಿ? ಎಂದು ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.

ಹಿಮಾಚಲ ಪ್ರದೇಶ ಬಿಟ್ಟರೆ ಬೇರೆ ಯಾವ ರಾಜ್ಯವೂ ಕಾಂಗ್ರೆಸ್ ಹಿಡಿತದಲ್ಲಿ ಇಲ್ಲ. ರಾಜಸ್ಥಾನ, ಛತ್ತೀಸಗಡ, ಮಧ್ಯಪ್ರದೇಶ, ಆಂಧ್ರ, ತೆಲಂಗಾಣ ಹೀಗೆ ಎಲ್ಲಾ ಕಡೆ ಏಕೆ ಅಧಿಕಾರ ಕಳೆದುಕೊಂಡ್ರಿ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Hair Care: ಉದ್ದ ಮತ್ತು ದಪ್ಪ ಕೂದಲು ನಿಮ್ಮದಾಗಬೇಕಾ? ಹಾಗಿದ್ರೆ ಈ ನೈಸರ್ಗಿಕ ಪರಿಹಾರಗಳನ್ನು ಅನುಸರಿಸಿ! 

ನಿಮ್ಮ ಪಾರ್ಟಿಯೊಳಗೆ ಮತ್ತು ರಾಹುಲ್ ಗಾಂಧಿ ನೇತತ್ವದಲ್ಲಿ ಎಲ್ಲಾ ಸರಿಯಾಗಿದೆಯೇ? ಹೇಗೆ? ನೋಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಜೋಶಿ ತಿರುಗೇಟು ನೀಡಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News