ಕರ್ನಾಟಕದ ತೆಲುಗು ಭಾಷಿಕರು ಕಾಂಗ್ರೆಸ್ ಬೆಂಬಲಿಸಿ- ರಘುವೀರ್ ರೆಡ್ಡಿ

ಇಷ್ಟು ದಿನ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ನಿಜ ಹೇಳುವ ಅಭ್ಯಾಸವಿರಲಿಲ್ಲ. ಮೊದಲ ಬಾರಿಗೆ ಯಡಿಯೂರಪ್ಪ ಸರ್ಕಾರ ಅತೀ ಭ್ರಷ್ಟ ಸರ್ಕಾರ ಎಂದು ನಿಜ ಹೇಳುವ ಮೂಲಕ ಮೊದಲ ಬಾರಿಗೆ ಅಮಿತ್ ಶಾ ಸತ್ಯವನ್ನು ಹೇಳಿದ್ದಾರೆ.

Last Updated : Mar 30, 2018, 11:30 AM IST
ಕರ್ನಾಟಕದ ತೆಲುಗು ಭಾಷಿಕರು ಕಾಂಗ್ರೆಸ್ ಬೆಂಬಲಿಸಿ- ರಘುವೀರ್ ರೆಡ್ಡಿ title=
Pic: Facebook@Raghuveer Reddy

ಬೆಂಗಳೂರು: ಕರ್ನಾಟಕದ ತೆಲುಗು ಭಾಷಿಕರು ಕಾಂಗ್ರೆಸ್ ಬೆಂಬಲಿಸಿ ಆ ಮೂಲಕ ಅನುದಾನ ಹಂಚಿಕೆಯಲ್ಲಿ ಆಂಧ್ರಪ್ರದೇಶಕ್ಕೆ ದ್ರೋಹ ಎಸಗಿರೋ ಬಿಜೆಪಿಗೆ ತಕ್ಕ ಪಾಠ ಕಲಿಸಲು ಮುಂದಾಗಿ ಎಂದು ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಘುವೀರ್ ರೆಡ್ಡಿ ಕರೆ ನೀಡಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಪಾಠ ಕಲಿಸುವ ಸಲುವಾಗಿ ಕರ್ನಾಟಕದ ಜನತೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸಿಗೆ ಮತ ನೀಡಿ, ಕರ್ನಾಟಕದ ತೆಲುಗು ಭಾಷಿಕರು ಕಾಂಗ್ರೆಸ್ ಬೆಂಬಲಿಸಿ ಆ ಮೂಲಕ ಅನುದಾನ ಹಂಚಿಕೆಯಲ್ಲಿ ಆಂದ್ರಪ್ರದೇಶಕ್ಕೆ ದ್ರೋಹ ಎಸಗಿರೋ ಬಿಜೆಪಿಗೆ ತಕ್ಕ ಪಾಠ ಕಲಿಸಲು ಮುಂದಾಗಿ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ಇಷ್ಟು ದಿನ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ನಿಜ ಹೇಳುವ ಅಭ್ಯಾಸವಿರಲಿಲ್ಲ. ಮೊದಲ ಬಾರಿಗೆ ಯಡಿಯೂರಪ್ಪ ಸರ್ಕಾರ ಅತೀ ಭ್ರಷ್ಟ ಸರ್ಕಾರ ಎಂದು ನಿಜ ಹೇಳುವ ಮೂಲಕ ಮೊದಲ ಬಾರಿಗೆ ಅಮಿತ್ ಶಾ ಸತ್ಯ ಹೇಳುವುದನ್ನು ರೂಢಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ಕರ್ನಾಟಕದಲ್ಲಿ ಬಿಜೆಪಿಗೆ ಠೇವಣಿ ಕೂಡ ಸಿಗಬಾರದು
ಆಂಧ್ರಕ್ಕೆ ವಿವಿಧ ಯೋಜನೆಗಳಿಗೆ ನೀಡಬೇಕಾದ ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ದ್ರೋಹ ಎಸಗುತ್ತಿದೆ. ನ್ಯಾಯ ಸಿಗಬೇಕೆಂದರೆ ಕರ್ನಾಟಕದಲ್ಲಿ ಬಿಜೆಪಿಗೆ ಠೇವಣಿ ಕೂಡ ಸಿಗದಂತೆ ಪಾಠ ಕಲಿಸಬೇಕು. ಅದಕ್ಕಾಗಿ ಕರ್ನಾಟಕದಲ್ಲಿ ಎಲ್ಲೆಲ್ಲಿ ತೆಲುಗು ಭಾಷಿಕರಿದ್ದಾರೋ ಅವರೆಲ್ಲರೂ ಕಾಂಗ್ರೆಸ್ ಗೆ ಬೆಂಬಲ ನೀಡಿ, ಈ ಮೂಲಕ ನರೇಂದ್ರ ಮೋದಿಗೆ ಪಾಠ ಕಲಿಸಬೇಕು ಎಂದು ಕರೆ ಮತದಾರರಿಗೆ ಕರೆ ನೀಡಿದರು.

Trending News