ಪ್ರೀತಿಯ ಸ್ನೇಹಿತ, ಸಹೋದರ ಇನ್ನಿಲ್ಲವೆಂಬ ಸತ್ಯ ಎಷ್ಟೊಂದು ಕಠೋರ- ಸದಾನಂದ ಗೌಡ

ಅನಂತ್ ಕುಮಾರ್ ವ್ಯಕ್ತಿಯಲ್ಲ, ಓರ್ವ ಶಕ್ತಿಯಾಗಿದ್ದರು- ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ

Last Updated : Nov 12, 2018, 11:15 AM IST
ಪ್ರೀತಿಯ ಸ್ನೇಹಿತ, ಸಹೋದರ ಇನ್ನಿಲ್ಲವೆಂಬ ಸತ್ಯ ಎಷ್ಟೊಂದು ಕಠೋರ- ಸದಾನಂದ ಗೌಡ title=

ಕಲಬುರ್ಗಿ: ಕೇಂದ್ರ ಸಚಿವ ಅನಂತ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದಿರುವ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಅನಂತ್ ಕುಮಾರ್ ನಿಧನ ದೊಡ್ಡ ದುರಂತ. ಮನಸ್ಸು, ಹೃದಯ ತುಂಬಾ ಭಾರವಾಗಿದೆ. ಪ್ರೀತಿಯ ಸ್ನೇಹಿತ, ಸಹೋದರ ಇನ್ನಿಲ್ಲವೆಂಬ ಸತ್ಯ ಎಷ್ಟೊಂದು ಕಠೋರ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ್ ಕುಮಾರ್ ನಿಧನದಿಂದ ನನಗೆ ಅತ್ಯಂತ ದುಃಖವಾಗಿದೆ. 'ಅನಂತ್ ಕುಮಾರ್ ವ್ಯಕ್ತಿಯಲ್ಲ, ಓರ್ವ ಶಕ್ತಿಯಾಗಿದ್ದರು'. 3 ದಶಕಗಳಿಂದ ಅವರೊಂದಿಗೆ ನಿಕಟ ಒಡನಾಟ ಹೊಂದಿದ್ದೆ. ಪ್ರೀತಿಯ ಸ್ನೇಹಿತ, ಸಹೋದರ ಇನ್ನಿಲ್ಲವೆಂಬ ಸತ್ಯ ಎಷ್ಟೊಂದು ಕಠೋರ ಎಂದು ಗದ್ಗತಿತರಾಗಿ ನುಡಿದರು.
 

Trending News