ಮೋದಿ ಮತ್ತು ಶಾ ರಾಜ್ಯಕ್ಕೆ ಬಂದಷ್ಟು ಕಾಂಗ್ರೆಸ್ ಗೆ ಲಾಭ -ಸಿದ್ದರಾಮಯ್ಯ

   

Last Updated : Mar 6, 2018, 08:21 PM IST
ಮೋದಿ ಮತ್ತು ಶಾ ರಾಜ್ಯಕ್ಕೆ ಬಂದಷ್ಟು ಕಾಂಗ್ರೆಸ್ ಗೆ ಲಾಭ -ಸಿದ್ದರಾಮಯ್ಯ title=

ನವದೆಹಲಿ: ಬಿಜೆಪಿ ಪರ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಪ್ರಚಾರ ಮಾಡಲು ರಾಜ್ಯಕ್ಕೆ  ಬಂದಷ್ಟು  ಕಾಂಗ್ರೆಸ್ ಗೆ ಹೆಚ್ಚಿನ ಲಾಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 ರಾಜ್ಯಸಭಾ ಚುನಾವಣೆಯ ಸೀಟು ಹಂಚಿಕೆಗಾಗಿ ರಾಹುಲ್ ಗಾಂಧಿ ಭೇಟಿ ಮಾಡಲು ಇಂದು ದೆಹಲಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುದ್ದಿಗಾರರೊಂದಿಗೆ ಮಾತನಾಡುತ್ತಾ "ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರು ರಾಜ್ಯಕ್ಕೆ ಬಂದಷ್ಟು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದರು. ಈ ಬಾರಿ ಚುನಾವಣೆಯು ಜ್ಯಾತ್ಯಾತೀತ ಮತ್ತು ಕೋಮುವಾದಿ ಶಕ್ತಿಗಳ ನಡುವೆ ನಡೆಯಲಿದೆ ಹೊರತು ಮುಖ್ಯಮಂತ್ರಿಯಾದ ನಾನು ಮತ್ತು ಪ್ರಧಾನಿ ಮೋದಿಯವರ ನಡುವಿನ ಸ್ಪರ್ಧೆಯಲ್ಲ" ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರತ್ಯೇಕ ಲಿಂಗಾಯತ ವರದಿ ಕುರಿತು ಮಾತನಾಡಿದ ಸಿದ್ದರಾಮಯ್ಯನವರು" ಪ್ರತ್ಯೇಕ ಲಿಂಗಾಯಿತ ಧರ್ಮ ಸ್ಥಾಪನೆ ವಿಚಾರವಾಗಿ ಚರ್ಚಿಸಲು ರಚನೆ ಮಾಡಿದ ಸಮಿತಿಯು ಈಗಾಗಲೇ ವರದಿಯನ್ನು ಅಲ್ಪಸಂಖ್ಯಾತರ ಆಯೋಗಕ್ಕೆ ನೀಡಿದ್ದು, ಇನ್ನು ಈ ವರದಿ ಸರ್ಕಾರವನ್ನು ತಲುಪಿಲ್ಲ, ವರದಿ ಬಂದ ಕೂಡಲೇ ಸಚಿವ ಸಂಪುಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
  

Trending News